ಸಿಎಂ ಸಿದ್ದರಾಮಯ್ಯ ಜೊತೆ ಪರಂ ಒಟ್ಟಿಗೆ ದೆಹಲಿ ಪ್ರಯಾಣ; ದಲಿತ ಸಿಎಂ ಕಾರ್ಡ್ ಪ್ಲೇ ಆಗುತ್ತದಾ? ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ!

Published : May 26, 2026, 11:07 AM IST
CM Siddaramaiah Takes Parameshwara to Delhi Amid Buzz Over Karnataka Leadership Change rav

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್ ಒಟ್ಟಾಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಈ ಹಿಂದೆ 'ಸಿಎಂ ಸ್ಥಾನಕ್ಕೆ ನಾನೂ ಸಿದ್ಧ' ಎಂದಿದ್ದ ಪರಮೇಶ್ವರ್, ಈಗ ಸಿಎಂ ಜೊತೆ ಹೈಕಮಾಂಡ್ ಭೇಟಿಗೆ ತೆರಳಿರುವುದು ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಮತ್ತೆ ಮುನ್ನೆಲೆಗೆ ತಂದಿದೆ.

ಬೆಂಗಳೂರು (ಮೇ.26): ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿರುವ ಬೆಳವಣಿಗೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಒಟ್ಟಿಗೇ ದೆಹಲಿಗೆ ತೆರಳಿದ್ದಾರೆ. ಸಿಎಂ ಗೃಹಸಚಿವರು ಜೊತೆಗೂಡಿ ದೆಹಲಿ ಪ್ರಯಾಣಿಸಿರುವುದು ಕಾಂಗ್ರೆಸ್ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪರಮೇಶ್ವರ್ ನಡೆ ಅಚ್ಚರಿ ಮೂಡಿಸಿದೆ

ಸರ್ಕಾರ ರಚನೆಯಾದ ಬಳಿಕ ಇದುವರೆಗೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಪರಮೇಶ್ವರ್ ದೆಹಲಿಗೆ ಹೋಗಿರಲೇ ಇಲ್ಲ, ಇದುವರೆಗೂ 'ನನಗೆ ದೆಹಲಿಗೆ ಹೋಗುವ ಅಗತ್ಯ ಇಲ್ಲ, ಸಮಯ ಬಂದಾಗ ಹೋಗ್ತೇನೆ” ಎಂದು ಹೇಳುತ್ತಿದ್ದ ಪರಮೇಶ್ವರ್, ಇದೀಗ ಹೈವೋಲ್ಟೇಜ್ ಮೀಟಿಂಗ್ ನಡುವೆಯೇ ಸಿಎಂ ಜೊತೆ ದೆಹಲಿ ತಲುಪಿರುವುದು ಕುತೂಹಲ ಹೆಚ್ಚಿಸಿದೆ.

ಸಿಎಂ ಸ್ಥಾನ ನಿಭಾಯಿಸಲು ನಾನು ಸಿದ್ಧ

ಇತ್ತೀಚೆಗೆ 'ಸಿಎಂ ಸ್ಥಾನ ನಿಭಾಯಿಸಲು ನಾನೂ ಸಿದ್ಧ' ಎಂದು ಹೇಳಿದ್ದ ಪರಮೇಶ್ವರ್, ಇದೀಗ ದೆಹಲಿ ರಾಜಕೀಯ ಅಂಗಳಕ್ಕೆ ಎಂಟ್ರಿ ಕೊಟ್ಟಿರುವುದು ನಾಯಕತ್ವ ಬದಲಾವಣೆ ಚರ್ಚೆಗೆ ಮತ್ತೆ ಮಹತ್ವ ಪಡೆದುಕೊಂಡಿದೆ.

ದಲಿತ ಸಿಎಂ ಕಾರ್ಡ್ ಮುಂದಾಗುತ್ತದಾ?

ಹೈಕಮಾಂಡ್ ನಾಯಕತ್ವ ಬದಲಾವಣೆಗೆ ಮುಂದಾದರೆ ದಲಿತ ಸಿಎಂ ಅಸ್ತ್ರ ಬಳಸಬಹುದು ಎಂಬ ಚರ್ಚೆ ಕಾಂಗ್ರೆಸ್ ಒಳಗಲ್ಲಿ ಕೇಳಿಬರುತ್ತಿದೆ. ಈ ಹಿನ್ನೆಲೆ ಪರಮೇಶ್ವರ್ ಪರವಾಗಿ ಸಿದ್ದರಾಮಯ್ಯ ಮಾತಾಡಲಿದಾರಾ ಎಂಬ ಪ್ರಶ್ನೆಯೂ ಎದ್ದಿದೆ.

ಸಿಎಂ ಜೊತೆಯಲ್ಲೇ ಕರೆದುಕೊಂಡು ಹೋದದ್ದು ಏನು ಸಂದೇಶ ಕೊಡ್ತಿದೆ?

ಪರಮೇಶ್ವರ್ ಅವರನ್ನು ಸಿಎಂ ಸಿದ್ದರಾಮಯ್ಯ ತಮ್ಮ ಜೊತೆಯಲ್ಲೇ ಕರೆದುಕೊಂಡು ಹೋಗಿರುವುದು ಸಾಮಾನ್ಯವಲ್ಲ, ಈ ಭೇಟಿಯ ಹಿಂದೆ ದೊಡ್ಡ ಲೆಕ್ಕಾಚಾರವೇ ಇದೆ, ಇದಕ್ಕೊಂದು ರಾಜಕೀಯ ಸಂದೇಶ ಇದೆ ಎಂಬ ಮಾತು ಕಾಂಗ್ರೆಸ್ ಪಾಳಯದಲ್ಲಿ ಹರಿದಾಡುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಜಯ್ 'ವಿಷಲ್‌' ಸದ್ದಿಗೆ ತಮಿಳುನಾಡು ರಾಜಕೀಯದಲ್ಲಿ ಕಂಪನ! ಅಣ್ಣಾಡಿಎಂಕೆ ಮತ್ತೊಂದು ಹೋಳು, 3 ಬಂಡಾಯ ಶಾಸಕರ ರಾಜೀನಾಮೆ
ಮೇಕೆದಾಟು ಡ್ಯಾಂ ವಿರುದ್ಧ ಕಾನೂನು ಹೋರಾಟ ತೀವ್ರಕ್ಕೆ ಸಿಎಂ ವಿಜಯ್‌ ಸೂಚನೆ