Ramanagara: ಜನ ನೋವಿನಲ್ಲಿದ್ದರೆ ಬಿಜೆಪಿ ಸಂಭ್ರಮಾಚರಣೆ ವಿಕೃತಿ: ಸಂಸದ ಡಿ.ಕೆ.​ಸು​ರೇಶ್‌

By Govindaraj SFirst Published Sep 11, 2022, 2:55 PM IST
Highlights

ಒಂದು ಕಡೆ ಜನ ಸಾವು ನೋವಿನಿಂದ ನರಳುತ್ತಿದ್ದರೆ, ಮತ್ತೊಂದು ಕಡೆ ಜನಸ್ಪಂದನದ ಹೆಸ​ರಿ​ನಲ್ಲಿ ವೇದಿಕೆ ಮೇಲೆ ನೃತ್ಯಮಾಡಿ ಸಂಭ್ರಮಿಸುತ್ತಿರು​ವುದು ಬಿಜೆಪಿ ನಾಯ​ಕರ ವಿಕೃತಿ ಮನ​ಸ್ಥಿತಿಯನ್ನು ತೋರಿ​ಸು​ತ್ತದೆ ಎಂದು ಸಂಸದ ಡಿ.ಕೆ.​ಸು​ರೇಶ್‌ ಕಿಡಿ​ಕಾ​ರಿ​ದರು. 

ರಾಮ​ನ​ಗರ (ಸೆ.11): ಒಂದು ಕಡೆ ಜನ ಸಾವು ನೋವಿನಿಂದ ನರಳುತ್ತಿದ್ದರೆ, ಮತ್ತೊಂದು ಕಡೆ ಜನಸ್ಪಂದನದ ಹೆಸ​ರಿ​ನಲ್ಲಿ ವೇದಿಕೆ ಮೇಲೆ ನೃತ್ಯಮಾಡಿ ಸಂಭ್ರಮಿಸುತ್ತಿರು​ವುದು ಬಿಜೆಪಿ ನಾಯ​ಕರ ವಿಕೃತಿ ಮನ​ಸ್ಥಿತಿಯನ್ನು ತೋರಿ​ಸು​ತ್ತದೆ ಎಂದು ಸಂಸದ ಡಿ.ಕೆ.​ಸು​ರೇಶ್‌ ಕಿಡಿ​ಕಾ​ರಿ​ದರು. ಮಳೆ​ಯಿಂದ ಹಾನಿ​ಗೊಂಡಿ​ರುವ ಹರೀ​ಸಂದ್ರ ಹಾಗೂ ಸುಗ್ಗ​ನ​ಹಳ್ಳಿ ಸೇತು​ವೆ​ಗ​ಳನ್ನು ವೀಕ್ಷಿ​ಸಿದ ನಂತರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಜನರು ನೋವಿನಲ್ಲಿರುವಾಗ ನೃತ್ಯಮಾಡಿ ಸಂತೋಷ ಪಡುವುದು ವಿಕೃತಿ ಅಲ್ಲದೆ ಮತ್ತೇನು. ಇದನ್ನು ರಾಜ್ಯದ ಜನರು ಗಮ​ನಿ​ಸ​ಬೇಕು ಎಂದ​ರು.

ರಾಜ್ಯದ ಎಲ್ಲಾ ಕಡೆ ಪ್ರವಾಹ ಆಗಿ ಸಾಕಷ್ಟು ಅನಾಹುತ ಆಗಿದೆ. ಮನೆ, ಜಮೀನುಗಳು ಮುಳುಗಿ ಹಲವೆಡೆ ಹಾನಿ ಸಂಭವಿಸಿದೆ. ಜನರು ನೆರೆಯಿಂದ ನರಳುತ್ತಿದ್ದಾರೆ. ಜನ ಬದುಕಲು ಹಾಗೂ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸಂಭ್ರಮ ಪಡುವ ಕಾರ್ಯಕ್ರಮ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿ​ಸಿ​ದರು. ಜನರು ನೋವಿ​ನ​ಲ್ಲಿ​ರು​ವಾಗ ಮಾಡಿ​ರುವ ಜನ​ಸ್ಪಂದನ ಕಾರ್ಯ​ಕ್ರ​ಮದ ಬಗ್ಗೆ ಆ ಪಕ್ಷದ ರಾಷ್ಟ್ರೀಯ ನಾಯ​ಕರು ಹಾಗೂ ಆರ್‌ಎಸ್‌ಎಸ್‌ ಮುಖ್ಯ​ಸ್ಥರು ವಿಶ್ಲೇ​ಷಣೆ ಮಾಡ​ಬೇಕು. ಅವರ ಸರ್ಕಾ​ರದ ಯೋಗ್ಯ​ತೆ​ಯನ್ನು ತೋರಿ​ಸಿ​ದ್ದಾರೆ. ಇಂತಹ ಅಧಿಕಾರ ನೀಡುವ ಬದಲು ರಾಜಿನಾಮೆ ಕೊಟ್ಟು ತೊಲಗಲಿ ಎಂದು ಆಕ್ರೋಶ ವ್ಯಕ್ತ​ಪ​ಡಿ​ಸಿ​ದರು.

Kanakapura; ತಾಯಿ ಆನೆ ನಿಧ​ನ, ದನದ ಹಿಂಡಿನ ಜೊತೆ ಬಂದ ಅನಾ​ಥ​ವಾದ ಮರಿ ಆನೆ ರಕ್ಷಣೆ

ಪ್ರತಾಪ್‌ ಸಿಂಹ ಚರ್ಚೆಗೆ ಬರ​ಲಿ: ಕೆರೆ ಹಾಗೂ ರಾಜಕಾಲುವೆ ಒತ್ತುವರಿಯಿಂದ ರಾಮನಗರದಲ್ಲಿ ಪ್ರವಾಹ ಉಂಟಾ​ಯಿತು ಎಂಬ ಸಂಸ​ದ ಪ್ರತಾಪ್‌ ಸಿಂಹ ಹೇಳಿಕೆಗೆ ಪ್ರತಿ​ಕ್ರಿ​ಯಿ​ಸಿದ ಸುರೇಶ್‌, ಮೈಸೂರು ಸಂಸದರು ದಯವಿಟ್ಟು ಮೈಸೂರು ಕೊಡಗಿನಲ್ಲಿ ಏನು ಮಾಡಬೇಕೋ ಅದನ್ನು ಮಾಡಲಿ.ಅನಾವಶ್ಯಕವಾಗಿ ಎಲ್ಲಾ ನಂದೆ ಎಂದು ಹೇಳುವುದು ಬೇಡ ಎಂದು ತಿರು​ಗೇಟು ನೀಡಿ​ದರು. ಬೆಂಗ​ಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಅವೈ​ಜ್ಞಾ​ನಿಕ ಕಾಮ​ಗಾರಿ ವಿಚಾ​ರ​ದಲ್ಲಿ ನಿಮ್ಮದೇನಾದರು ಇದ್ದರೆ ಬನ್ನಿ, ನಾನು ಬರುತ್ತೇನೆ. ಎಲ್ಲಾ ವಿಚಾರಗಳನ್ನು ಜನರ ಮುಂದೆ ಇಡೋಣ. ಜನ ಕೇಳಿದ್ದಕ್ಕೆ ನಾವು, ನೀವು ಉತ್ತರ ಹೇಳೋಣ ಎಂದು ಸವಾಲು ಹಾಕಿ​ದ​ರು.

ಹೆದ್ದಾ​ರಿ​ಯಲ್ಲಿ ಎಲಿವೇಷನ್‌ ರೋಡ್‌ ಹಾಗೂ ಅದರ ಕೆಳಭಾಗದಲ್ಲೂ ನೀರು ನಿಂತಿದೆ. ತಿರುವುಗಳಲ್ಲಿ ಸರಿಯಾದ ಲೆವಲ… ನೀಡಿಲ್ಲ. ಲಾರಿ ಬಸ್‌ ಗಳು ರಸ್ತೆಗಳಲ್ಲೆ ಮಗುಚಿಕೊಳ್ಳುತ್ತಿವೆ. ಕಾಲುವೆ ಸರಿಯಾಗಿ ಮಾಡದೆ ಅವರಿಗೆ ಬೇಕಾದ ಜಾಗದಲ್ಲಿ ಅಂಡರ್‌ ಪಾಸ್‌ ಮಾಡಿದ್ದಾರೆ. ಗ್ರಾಮಗಳ ಚರಂಡಿ ಕೂಡ ಮುಚ್ವಿದ್ದಾರೆ. ಮಳೆ​ಯಿಂದ ಸಾಕಷ್ಟುನಷ್ಟಆಗಿದೆ.ಅವರಿಗೆ ಸೂಕ್ತ ಪರಿಹಾರ ನೀಡಬೇಕು. ಎಲ್ಲೆಲ್ಲಿ ಅವೈಜ್ಞಾನಿಕ ಕಾಮ​ಗಾರಿ ನಡೆ​ದಿ​ದೆಯೋ ಅದನ್ನು ಆದಷ್ಟುಬೇಗ ಸರಿ ಮಾಡಬೇಕು ಎಂದು ಹೇಳಿ​ದರು.

ಮಾಜಿ ಶಾಸಕ ಕೆ.ರಾ​ಜು, ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‌ಹುಸೇನ್‌, ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾಜು, ನಗರ ಘಟಕದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್‌, ಬಿಡದಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗಾಣಕಲ್‌ ನಟರಾಜು, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ದೊಡ್ಡೀರಯ್ಯ, ಸುಗ್ಗನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಸಿ.ರಾಮಯ್ಯ, ತಾಪಂ ಮಾಜಿ ಉಪಾಧ್ಯಕ್ಷ ಕೆ.ಎಂ.ನಾಗರಾಜು, ಕಾಂಗ್ರೆಸ್‌ ಮುಖಂಡರಾದ ಬಾಬು, ವಾಸು, ಬೈರೇಗೌಡ, ಉಮಾಶಂಕರ್‌, ಆಂಜನಪ್ಪ, ಸ್ವಾ​ಮಿ, ಮಹದೇವ, ಪ್ರಕಾಶ್‌, ರವಿ, ಸಂದೀಪ್‌, ಅನಿಲ್‌, ಶಿವಣ್ಣ ಹಾಜ​ರಿದ್ದರು.

ಪ್ರತಾಪ್‌ ಸಿಂಹರಿಂದ ಪಾಠ ಕಲಿಯಬೇಕಿಲ್ಲ: ಮೊದಲು ಕನಕಪುರ ರಸ್ತೆ ಸರಿಮಾಡಿಸಿ ಎಂಬ ಪ್ರತಾಪ್‌ ಸಿಂಹ ಹೇಳಿಕೆಗೆ ನನಗೆ ನಿಮ್ಮಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ. ನಿಮ್ಮ ನಾಯಕರ ಸಲಹೆಗಳ ಅವಶ್ಯಕತೆಯೂ ಇಲ್ಲ. ನನಗೆ ನನ್ನದೇ ಜನರ ಸಲಹೆ, ಮಾರ್ಗದರ್ಶನ ಇದೆ. ನಿಮ್ಮ ಅಡ್ವೈಸ್‌ಗಳು ನನಗೆ ಬೇಕಾಗಿಲ್ಲ. ದಶಪಥ ರಸ್ತೆಯ ಅವೈಜ್ಞಾನಿಕ ಕಾಮಗಾರಿಯನ್ನು ಸರಿಪಡಿಸಿ ಸಾಕು ಎಂದು ಸಂಸದ ಡಿ.ಕೆ.ಸುರೇಶ್‌ ತಿರು​ಗೇಟು ನೀಡಿ​ದರು.

ಮಳೆ​ಯಿಂದ 300 ಕೋಟಿ ರು.ಗೂ ಅಧಿಕ ಹಾನಿ: ಮಹಾ ಮಳೆ​ಯಿಂದ ರಾಮ​ನ​ಗರ ಮತ್ತು ಚನ್ನ​ಪ​ಟ್ಟಣ ತಾಲೂ​ಕಿ​ನಲ್ಲಿ 300 ಕೋಟಿ ರುಪಾ​ಯಿಗೂ ಹೆಚ್ಚಿನ ಹಾನಿ​ಯಾ​ಗಿದ್ದು, ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡ​ಬೇಕು ಎಂದು ಸಂಸದ ಡಿ.ಕೆ.​ಸು​ರೇಶ್‌ ಒತ್ತಾ​ಯಿ​ಸಿ​ದರು. ತಾಲೂಕಿನ ಸುಗ್ಗನಹಳ್ಳಿ ಮತ್ತು ಹರೀಸಂದ್ರ ಸೇತುವೆಗಳನ್ನು ವೀಕ್ಷಿಸಿದ ನಂತರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಜಿಲ್ಲಾ​ಡ​ಳಿತ ಮಳೆ ಹಾನಿ ಅಂದಾ​ಜನ್ನು ಸರಿ​ಯಾಗಿ ಮಾಡಿಲ್ಲ. ಸೇತುವೆಗಳ ನಿರ್ಮಾ​ಣಕ್ಕೆ 100 ಕೋಟಿ ರು.ಬೇಕಾ​ಗು​ತ್ತದೆ. ನೂರಾರು ಕಿ.ಮೀ ರಸ್ತೆ ಹಾಳಾ​ಗಿದೆ. 

2 ಸಾವಿ​ರಕ್ಕೂ ಹೆಚ್ಚು ಮನೆ ಹಾಗೂ ಸಾವಿ​ರಾರು ಹೆಕ್ಟೇರ್‌ ಪ್ರದೇ​ಶ​ದಲ್ಲಿ ಬೆಳೆ ಹಾನಿ​ಯಾ​ಗಿದೆ. ಇದೆ​ಲ್ಲ​ದರ ಕುರಿತು ಸರಿ​ಯಾಗಿ ಸಮೀಕ್ಷೆ ನಡೆ​ಸಬೇಕು ಎಂದ​ರು. ರಾಮನಗರ ತಾಲೂಕಿನಲ್ಲಿ ಕಳೆದ 15-20 ದಿನಗಳಿಂದಲೂ ಭಾರೀ ಮಳೆಯಿಂದ ಪ್ರಮುಖ ಸಂಪರ್ಕ 3-4 ಸೇತುವೆಗಳು ಹಾನಿಯಾಗಿವೆ. ಪ್ರಮುಖವಾಗಿ ಬಾನಂದೂರು, ಸುಗ್ಗನಹಳ್ಳಿ, ಹರೀಸಂದ್ರ ಸೇತುವೆಗಳು ಜನರಿಂದ ಸಂಪರ್ಕ ಕಳೆದುಕೊಂಡಿವೆ. ಪ್ರಮುಖವಾಗಿ ಸೇತುವೆಗಳು ಜನರ ಸಂಪರ್ಕ ಕೊಂಡಿಯಾಗಿದ್ದವು ಸೇತುವೆ ಕೊಚ್ಚಿ ಹೋಗಿರುವ ಪರಿಣಾಮ ಶಾಲಾ ಕಾಲೇಜು ವಿದ್ಯಾರ್ಥಿಗಳು, ನೌಕರರು, ಉದ್ಯೋಗಕ್ಕೆ ಹೋಗುವ ಮಹಿಳೆಯರಿಗೆ ರಸ್ತೆ ಸಂಪರ್ಕ ಇಲ್ಲದಂತಾಗಿದೆ.

Ramanagara: ಸುಗ್ಗ​ನ​ಹ​ಳ್ಳಿ ಸೇತುವೆ, ಭಕ್ಷಿ ಕೆರೆ ವೀಕ್ಷಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ

ಇದರಿಂದ ಈ ಭಾಗದ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ರೈತಾಪಿ ವರ್ಗ ಹಾಲು ಡೇರಿಗೆ ಹಾಕಲು ತೊಂದರೆ ಉಂಟಾಗಿದೆ. ಜಿಲ್ಲಾಡಳಿತ ಕೂಡಲೇ ಸೇತುವೆ ಹಾನಿಯಾಗಿರುವ ಸ್ಥಳಗಳಲ್ಲಿ ಜನರ ಸಂಪರ್ಕಕ್ಕೆ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು ವ್ಯವಸ್ಥೆ ಕಲ್ಪಿಸುವಲ್ಲಿ ಅಧಿಕಾರಿಗಳು, ಸರ್ಕಾರ ಬೇಜವಾಬ್ದಾರಿ ತೋರುತ್ತಿದೆ ಎಂದು ಡಿ.ಕೆ. ಸುರೇಶ್‌ ಕಿಡಿಕಾರಿದರು. ಲೋಕೋಪಯೋಗಿ ಅಧಿಕಾರಿಗಳನ್ನು ಕೇಳಿದರೆ ಸೇತುವೆ ನಮಗೆ ಬರುವುದಿಲ್ಲ ಎನ್ನುತ್ತಾರೆ ಇದು ಸರ್ಕಾರದ ಬೇಜವಾಬ್ದಾರಿಯಾಗಿದೆ ಆದಷ್ಟುಬೇಗ ಜಿಲ್ಲಾಧಿಕಾರಿಗಳು ತ್ವರಿತವಾಗಿ ಇಲ್ಲಿನ ಈ ಭಾಗದ ಜನರಿಗೆ ಸಂಪರ್ಕ ಕಲ್ಪಿಸಲು ಮುಂದಾಗಬೇಕಿದೆ ಈ ಬಗ್ಗೆ ಮುಖ್ಯಮಂತ್ರಿಯವರಲ್ಲಿ ಮಾತನಾಡುತ್ತೇನೆ ಶೀಘ್ರದಲ್ಲೇ ಜನರ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಭರವಸೆ ನೀಡಿದರು.

click me!