ಕಾಂಗ್ರೆಸ್‌ನಲ್ಲಿ‌ ಸಿಎಂ ಖುರ್ಚಿ ರೇಸ್: ಸಿದ್ದರಾಮಯ್ಯ ಪ್ರಕರಣ ಏನಾಗುತ್ತೆ ನೋಡೋಣ, ಬಿ.ಕೆ.ಹರಿಪ್ರಸಾದ್

Published : Sep 03, 2024, 01:46 PM IST
ಕಾಂಗ್ರೆಸ್‌ನಲ್ಲಿ‌ ಸಿಎಂ ಖುರ್ಚಿ ರೇಸ್:  ಸಿದ್ದರಾಮಯ್ಯ ಪ್ರಕರಣ ಏನಾಗುತ್ತೆ ನೋಡೋಣ, ಬಿ.ಕೆ.ಹರಿಪ್ರಸಾದ್

ಸಾರಾಂಶ

ಪ್ರಜಾಪ್ರಭುತ್ವದಲ್ಲಿ ಅವರ ಅನಿಸಿಕೆ ಹೇಳಲು ಆಸ್ಪದ ಇದೆ, ಅದನ್ನ ಹೇಳ್ತಾ ಇದ್ದಾರೆ. ನಾನು ಯಾವುದೇ ರೇಸ್ ನಲ್ಲಿ ಇಲ್ಲ, ರೇಸ್ ನಲ್ಲಿ ಓಡುವ ಕುದುರೆಯೂ ಅಲ್ಲ, ಕತ್ತೆಯೂ ಅಲ್ಲ. ಆ ಪ್ರಶ್ನೆನೇ ಬೇಡಾ. ಈಗ ನ್ಯಾಯಾಂಗದ ಹೋರಾಟ ನಡೀತಿದೆ, ಆಗಲಿ ಎಂದ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ 

ಮಂಗಳೂರು(ಸೆ.03):  ಕಾಂಗ್ರೆಸ್‌ನಲ್ಲಿ‌ ಮುಖ್ಯಮಂತ್ರಿ ಪಟ್ಟಕ್ಕಾಗಿ ರೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದಾಗ ನಮ್ಮ ನಾಯಕರು ಉತ್ತರಗಳನ್ನ ಕೊಡ್ತಿದ್ದಾರೆ, ಏನೂ ಮಾಡಕ್ಕಾಗಲ್ಲ. ಅವೆಲ್ಲಾ ತೀರ್ಮಾನ ಆಗೋದು ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯಲ್ಲಿ. ಸಿದ್ದರಾಮಯ್ಯನವರ ಈ ಪ್ರಕರಣ ಏನಾಗುತ್ತೆ ನೋಡೋಣ. ಇನ್ನೂ ಪ್ರಕರಣ ಇತ್ಯರ್ಥ ಆಗಿಲ್ಲ, ತೀರ್ಪು ಬರುತ್ತೋ, ಇಲ್ವಾ ಗೊತ್ತಿಲ್ಲ. ಇದು ಕಾನೂನಿನ ಹೋರಾಟ, ಕಾನೂನಿನ ಹೋರಾಟ ನಡೆಯುವ ವೇಳೆ ಏನೇ ಮಾಡಿದ್ರು ನ್ಯಾಯಾಂಗ ನಿಂದನೆ ಆಗುತ್ತೆ. 135 ಜನ ಶಾಸಕರಿದ್ದಾರೆ, ಇಂಗ್ಲೀಷ್‌ನಲ್ಲಿ ವನ್ ಎಮಾಂಗ್ ಈಕ್ವಲ್ಸ್ ಅಂತಾರೆ. ಹೀಗಾಗಿ ಅವರ ಅವರ ಅನಿಸಿಕೆ ಅವರವರು ಹೇಳ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. 

ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ಕೆ.ಹರಿಪ್ರಸಾದ್ ಅವರು, ಪ್ರಜಾಪ್ರಭುತ್ವದಲ್ಲಿ ಅವರ ಅನಿಸಿಕೆ ಹೇಳಲು ಆಸ್ಪದ ಇದೆ, ಅದನ್ನ ಹೇಳ್ತಾ ಇದ್ದಾರೆ. ನಾನು ಯಾವುದೇ ರೇಸ್ ನಲ್ಲಿ ಇಲ್ಲ, ರೇಸ್ ನಲ್ಲಿ ಓಡುವ ಕುದುರೆಯೂ ಅಲ್ಲ, ಕತ್ತೆಯೂ ಅಲ್ಲ. ಆ ಪ್ರಶ್ನೆನೇ ಬೇಡಾ. ಈಗ ನ್ಯಾಯಾಂಗದ ಹೋರಾಟ ನಡೀತಿದೆ, ಆಗಲಿ ಎಂದು ತಿಳಿಸಿದ್ದಾರೆ. 

'ಕೈ'ಕಮಾಂಡ್ ಕೈಯಲ್ಲಿ ಸಿದ್ದರಾಮಯ್ಯ ಸಿಂಹಾಸನ ಭವಿಷ್ಯ: ತಲೆದಂಡವೋ.. ಪದತ್ಯಾಗವೋ.. ರಣರಂಗದಲ್ಲಿ ಕುಸ್ತಿಯೋ..?

ಕೋವಿಡ್ ಹಗರಣದ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆ ವಿಚಾರದ ಬಗ್ಗೆ ಮಾತನಾಡಿದ ಹರಿಪ್ರಸಾದ್‌, ಡಾ.ಕೆ ಸುಧಾಕರ್ ಅವರು ಆರೋಗ್ಯ ಮಂತ್ರಿಯಾಗಿದ್ದರು. ಕರ್ನಾಟಕ ರಾಜ್ಯದಲ್ಲಿ ನಾಲ್ಕು ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದಾರೆ. ವ್ಯಾಕ್ಸಿನ್ ಅವ್ಯವಸ್ಥೆ ಹೇಗಿತ್ತು ಅನ್ನೋದನ್ನ ಜನ ನೋಡಿದ್ದಾರೆ. ಕೋವಿಡ್ ಬಂದಾಗ ಒಳ್ಳೆಯ ಹೋಟೇಲ್ ನಲ್ಲಿ ಸ್ವಿಮ್ಮಿಂಗ್ ಮಾಡ್ತಿದ್ದನ್ನು ನೋಡಿದ್ದೀವಿ. ಅದರ ಬಗ್ಗೆ ಅವರು ಮಾತನಾಡದೇ ಇರೋದು ಒಳ್ಳೆಯದು. ವರದಿ ಏನು ಬಂದಿದೆ? ಅದರಲ್ಲಿ ಏನ್ ಸತ್ಯ ಇದೆ ಅದು ಹೊರಗಡೆ ಬರಲಿ. ತಪ್ಪಾಗಿದ್ರೆ ಅವರು ಶಿಕ್ಷೆ  ಅನುಭವಿಸಲು ಮುಂದಾಗಲಿ ಎಂದು ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!