ನರೇಂದ್ರ ಮೋದಿ ಅಹಂಕಾರದ ಕೊನೆ ಹಂತ ಇದು ಅದಕ್ಕೆ ಏನೇನೋ ಮಾತಾಡ್ತಾರೆ: ಶಿವರಾಜ ತಂಗಡಗಿ ವಾಗ್ದಾಳಿ

Published : May 25, 2024, 05:15 PM ISTUpdated : May 26, 2024, 07:15 AM IST
ನರೇಂದ್ರ ಮೋದಿ ಅಹಂಕಾರದ ಕೊನೆ ಹಂತ ಇದು ಅದಕ್ಕೆ ಏನೇನೋ ಮಾತಾಡ್ತಾರೆ: ಶಿವರಾಜ ತಂಗಡಗಿ ವಾಗ್ದಾಳಿ

ಸಾರಾಂಶ

ಲೋಕಸಭಾ ಚುನಾವಣೇಲಿ ಬಿಜೆಪಿ ಗೆದ್ದು ಮೋದಿ ಇನ್ನೊಮ್ಮೆ ಪ್ರಧಾನಿಯಾದ್ರೆ ತಮ್ಮ ದೇವಸ್ಥಾನ ತಾವೇ ಕಟ್ಕೊತಾರೆ ಎಂದು ಸಚಿವ ಶಿವರಾಜ ತಂಗಡಗಿ ಲೇವಡಿ ಮಾಡಿದರು.

ಕೊಪ್ಪಳ (ಮೇ.25): ಲೋಕಸಭಾ ಚುನಾವಣೇಲಿ ಬಿಜೆಪಿ ಗೆದ್ದು ಮೋದಿ ಇನ್ನೊಮ್ಮೆ ಪ್ರಧಾನಿಯಾದ್ರೆ ತಮ್ಮ ದೇವಸ್ಥಾನ ತಾವೇ ಕಟ್ಕೊತಾರೆ ಎಂದು ಸಚಿವ ಶಿವರಾಜ ತಂಗಡಗಿ ಲೇವಡಿ ಮಾಡಿದರು.

ಇಂದು ಕೊಪ್ಪಳದ ಕಾರಟಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಈಗ ರಾಮನ ದೇವಸ್ಥಾನ ಕಟ್ಟಿದ್ದಾಯ್ತು, ಇನ್ನು ನನ್ನದೇ ಒಂದು ದೇವಸ್ಥಾನ ಅಂತಾ ಕಟ್ಕೋತಾರೆ ಯಾಕಂದರೆ ಅವರ ಇತ್ತೀಚಿನ ಹೇಳಿಕೆಗಳೇ ಹಾಗೆ ಇವೆ. ದೇವರೇ ನನಗೆ ದೀಕ್ಷೆ ನೀಡಿ ಭೂಮಿಗೆ ಕಳಿಸಿದ್ದಾನೆ, ಜನರ ಸೇವೆ ಮಾಡೋಕೆ ಕಳಿಸಿದ್ದಾನೆ ಅಂತಾ ಹೇಳ್ತಾರೆ. ಅದಕ್ಕೆ ಮೋದಿ ಇನ್ನೊಮ್ಮೆ ಗೆದ್ದುಬಿಟ್ರೆ ಪ್ರತಿ ಊರಲ್ಲಿ ಮೋದಿಯವರ ದೇವಸ್ಥಾನ ಕಟ್ಟಿ ಅನ್ನೋ ಸ್ಥಿತಿ ಬರುತ್ತೆ ಎಂದು ವಾಗ್ದಾಳಿ ನಡೆಸಿದರು.

'ಧರ್ಮಯುದ್ಧ ಆರಂಭಿಸುವ ಮುನ್ನ ಮಂಜುನಾಥನ ದರ್ಶನ ಪಡೆದಿದ್ದೇನೆ: ಡಿಕೆ ಶಿವಕುಮಾರ

ಪೂರಿ ಜಗನ್ನಾಥನೇ ಮೋದಿಯವರ ಭಕ್ತ ಅಂತಾ ಯಾರೋ ಒಬ್ಬ ಬಹಿರಂಗವಾಗಿ ಹೇಳಿದ್ದಾನೆ. ಎಲ್ಲಿಗೆ ಬಂದು ನಿಂತಿದೆ ಇವರ ಸ್ಥಿತಿ. ನಾವು ಜನಪ್ರತಿನಿಧಿಗಳು ದೇವರಾಗೋಕಾಗತ್ತಾ? ಎಂದು ಪ್ರಶ್ನಿಸಿದರು ಮುಂದುವರಿದು, ಮೋದಿಯವರು ಸಬ್‌ ಕಾ ಸಾಥ್ ಅಂತಾರೆ ಆದರೆ ವೇದಿಕೆ ಮೇಲೆ ಹಿಂದೂತ್ವ ಅಂತಾರೆ. ಇಂತಹ ಮಾತುಗಳನ್ನ ಹಿಂದಿನ ಯಾವ ಪ್ರಧಾನಿಗಳು ಮಾತಾಡಿಲ್ಲ. ಇದು ನರೇಂದ್ರ ಮೋದಿ ಅಹಂಕಾರದ ಕೊನೆ ಹಂತ ಅದಕ್ಕೆ ಹಾಗೆ ಮಾತಾಡುತ್ತಿದ್ದಾರೆ ಎಂದು ಕಿಡಿಕಾರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?