ಬಿಎಸ್‌ವೈಗೆ ವಯಸ್ಸಾಗಿದೆ, ಬಿಜೆಪಿಯಲ್ಲಿ ಯಾರೂ ನಾಯಕರು ಸಿಗ್ತಿಲ್ಲ: ಸಚಿವ ತಿಮ್ಮಾಪುರ ವ್ಯಂಗ್ಯ

Published : Sep 18, 2023, 11:30 PM IST
ಬಿಎಸ್‌ವೈಗೆ ವಯಸ್ಸಾಗಿದೆ, ಬಿಜೆಪಿಯಲ್ಲಿ ಯಾರೂ ನಾಯಕರು ಸಿಗ್ತಿಲ್ಲ: ಸಚಿವ ತಿಮ್ಮಾಪುರ ವ್ಯಂಗ್ಯ

ಸಾರಾಂಶ

ಬಿ.ಎಸ್‌.ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಹೀಗಾಗಿ ಒಬ್ಬ ನಾಯಕ ಅವರಿಗೆ (ಬಿಜೆಪಿ) ಸಿಗುತ್ತಿಲ್ಲ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದರು. 

ಬಾಗಲಕೋಟೆ (ಸೆ.18): ಬಿ.ಎಸ್‌.ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಹೀಗಾಗಿ ಒಬ್ಬ ನಾಯಕ ಅವರಿಗೆ (ಬಿಜೆಪಿ) ಸಿಗುತ್ತಿಲ್ಲ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಬಿಎಸ್‌ವೈ ಹೋರಾಟ ಮಾಡುವ ವಿಚಾರವಾಗಿ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದರು. ಬಿಜೆಪಿಗೆ ವಯಸ್ಸಾದ ಇವ್ರೆ (ಯಡಿಯೂರಪ್ಪ) ಬೇಕು. ವಯಸ್ಸಿದ್ದಾಗೆಲ್ಲಾ ಅಧಿಕಾರದಿಂದ ತೆಗೆದು ಹಾಕಿದರು. ಈಗ ಅವರನ್ನ ಹಿಡ್ಕೊಂಡ ನೀನ ಅಡ್ಡಾಡಪ್ಪ ಎನ್ನುತ್ತಿದ್ದಾರೆ. ಯಾವುದಕ್ಕಾಗಿ ಯಡಿಯೂರಪ್ಪ ಅಡ್ಡಾಡುತ್ತಾರೆ ನನಗಂತೂ ಗೊತ್ತಿಲ್ಲ. 

ಅಧಿಕಾರದಾಗ ಇದ್ದಾಗೆಲ್ಲ ಅವರಿಗೆ (ಬಿಎಸ್‌ವೈಗೆ) ತೊಂದರೆ ಕೊಟ್ಟರು. ಅಧಿಕಾರ ಬೇಕಾದಾಗ ನೀನ್ ನಡಿಯಪ್ಪ,ಅಡ್ಡಾಡಪ್ಪ ಅಂತ ತಳ್ಳುತ್ತಿರುತ್ತಾರೆ ಎಂದರು. ಪಾಪಾ ಯಡಿಯೂರಪ್ಪಗೆ ವಯಸ್ಸಾಗಿದೆ. ಹಿರಿಯ ನಾಯಕ, ಮುತ್ಸದ್ಧಿ ಎಲ್ಲವೂ ಇದೆ. ವಯಸ್ಸು ಪರ್ಮಿಟ್ ಮಾಡಬೇಕಲ್ಲ. ಹಾಗಾಗಿ ಅಲ್ಲಿ (ಬಿಜೆಪಿ) ಯಾರೂ ನಾಯಕರೇ ಇಲ್ಲ. ಅವ್ರಿಗೆ ತುರಿಸೋದು (ಬೆನ್ನು ತಟ್ಟೋದು), ಅವ್ರಿಗೆ ಕಷ್ಟ ಕೊಟ್ಟಿದ್ದು ಬಿಎಸ್‌ವೈಗೆ ನೆನಪಿಲ್ಲೇನು?. ಅವರಿಗೆ ಗೊತ್ತಿದೆ ಏನು ಮಾಡಬೇಕಂತ ಅವ್ರು ಮಾಡ್ತಾರೆ ಎಂದರು.

ದಿಸ್ ಈಸ್ ನಾಟ್ AI ವರ್ಲ್ಡ್, ದಿಸ್ ಈಸ್ UI ವರ್ಲ್ಡ್: ಕತ್ತಲುಮಯ ಟೀಸರ್ ಮೂಲಕ ಫ್ಯಾನ್ಸ್‌ ತಲೆಗೆ ಹುಳ ಬಿಟ್ಟ ಉಪೇಂದ್ರ!

ಮೂವರು ಡಿಸಿಎಂ ಹುದ್ದೆ ನೀಡಬೇಕು ಎಂಬ ಚರ್ಚೆ ಕುರಿತು ಮಾತನಾಡಿದ ಅವರು, ಅವರವರ ಅಭಿಪ್ರಾಯ ಹೇಳುತ್ತಿರುತ್ತಾರೆ. ಆಂತರಿಕ ಪ್ರಜಾಪ್ರಭುತ್ವದಲ್ಲಿ ವಿಚಾರಗಳನ್ನು ಜನತೆಗೆ ತಿಳಿಸುತ್ತಾರೆ. ಅದನ್ನು ಮಾಡೋದು ಬಿಡೋದು ಹೈಕಮಾಂಡ್‌ಗೆ ಬಿಟ್ಟಿದ್ದು. ಸಮರ್ಥ ನಾಯಕ ಮಲ್ಲಿಕಾರ್ಜುನ ಖರ್ಗೆ ಕರ್ನಾಟದವರು ಇದ್ದಾರೆ. ಅವರಿಗೆ ಇದೆಲ್ಲದರ ಅರಿವಿದೆ. ಪಕ್ಷದ ಶಾಸಕರು, ಮುಖಂಡರು ಹೇಳುತ್ತಿರುತ್ತಾರೆ. ಅದನ್ನು ಇಷ್ಟು ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಅದು ಪಕ್ಷದ ತೀರ್ಮಾನ. ಮೂರು ಜನ ಡಿಸಿಎಂ ಆದ್ರೆ ಒಳ್ಳೆದು ಅಂತ ರಾಜಣ್ಣ ಹೇಳಿದ್ದಾರೆ ಅದ್ರಲ್ಲಿ ಗೊಂದಲ ಇಲ್ಲ ಎಂದು ತಿಮ್ಮಾಪುರ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!