ನನಗೆ ಬೈದು ಛಲವಾದಿ ನಾರಾಯಣಸ್ವಾಮಿ ಅವರೇ ಅಳುತ್ತಿದ್ದಾರೆ: ಸಚಿವ ಪ್ರಿಯಾಂಕ್‌ ಖರ್ಗೆ

Kannadaprabha News   | Kannada Prabha
Published : May 25, 2025, 11:33 AM IST
Priyank Kharge

ಸಾರಾಂಶ

ಆರ್ಥಿಕ, ಸಾಮಾಜಿಕ, ಬುಡಕಟ್ಟು ಸೇರಿ ಯಾವುದೇ ವಿಚಾರವಾಗಿ ಯಾವುದೇ ವೇದಿಕೆಯಲ್ಲೂ ನಾನು ಚರ್ಚೆಗೆ ಸಿದ್ಧನಿದ್ದೇನೆ. ನನ್ನೊಂದಿಗೆ ಚರ್ಚೆ ನಡೆಸಲು ಅವರು ತಯಾರಿದ್ದಾರೆಯೇ? ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಸವಾಲು ಹಾಕಿದ್ದಾರೆ. 

ಬೆಂಗಳೂರು (ಮೇ.25): ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ನನ್ನನ್ನು ಪಪ್ಪು ಎಂದು ಕರೆದಿದ್ದಾರೆ. ಆರ್ಥಿಕ, ಸಾಮಾಜಿಕ, ಬುಡಕಟ್ಟು ಸೇರಿ ಯಾವುದೇ ವಿಚಾರವಾಗಿ ಯಾವುದೇ ವೇದಿಕೆಯಲ್ಲೂ ನಾನು ಚರ್ಚೆಗೆ ಸಿದ್ಧನಿದ್ದೇನೆ. ನನ್ನೊಂದಿಗೆ ಚರ್ಚೆ ನಡೆಸಲು ಅವರು ತಯಾರಿದ್ದಾರೆಯೇ? ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಸವಾಲು ಹಾಕಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರು ನನಗೆ ಬಹಿರಂಗವಾಗಿ ನಾಯಿ ಎಂದು ಬೈದಿದ್ದಾರೆ. ಬೈಸಿಕೊಂಡ ಸಂತ್ರಸ್ತ ನಾನು. ಆದರೆ ಬೈದಿರುವ ನಾರಾಯಣಸ್ವಾಮಿ ಅವರೇ ಸಂತ್ರಸ್ತರಂತೆ ಅಳುತ್ತಾ ನಾಟಕವಾಡುತ್ತಿದ್ದಾರೆ.

ನನ್ನ ಮೇಲೆ ಅ ತ್ಯಾಚಾರ ಆಗಿದೆ ಎನ್ನುವಂತೆ ಅಳುತ್ತಾ ಕಲಬುರಗಿಗೆ ಹೋಗಿದ್ದಾರೆ. ಬೆಂಗಳೂರಿನಲ್ಲಿ ಒಂದು ಕಲಬುರಗಿಯಲ್ಲಿ ಒಂದು ಮಾತನಾಡುವ ಅವರಿಗೆ ಎರಡು ನಾಲಿಗೆ ಇದೆ ಎಂದು ಕಿಡಿಕಾರಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜ್ಯಪಾಲರನ್ನು ಭೇಟಿಯಾಗಿ ಬಂದು ನಾನು ಪ್ರಿಯಾಂಕ್ ಖರ್ಗೆಗೆ ನಾಯಿ ಎಂದಿಲ್ಲ ಎಂದಿದ್ದರು. ಹಾಗಾದರೆ ಇದೇನು? ಎಂದು ಹೇಳಿ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆಯ ವಿಡಿಯೋ ಪ್ರದರ್ಶನ ಮಾಡಿದರು.

ಅವರನ್ನು ಏನೆಂದು ಕರೆಯಬೇಕು?: ನನಗೆ ಬೈದು ನನ್ನ ಮತ ಕ್ಷೇತ್ರಕ್ಕೆ ಹೋಗುತ್ತಾರೆ. ನನ್ನ ವಿರುದ್ಧ ತಿರುಗಿ ಮೆರವಣಿಗೆ ಮಾಡುತ್ತಿದ್ದಾರೆ.‌ ಇದಕ್ಕೇನಾದರೂ ತರ್ಕ ಇದೆಯೇ? ನಾಳೆಯಿಂದ ನಾರಾಯಣಸ್ವಾಮಿ ಅವರನ್ನು ಏನೆಂದು ಕರೆಯಬೇಕು.‌ ಅವರೇ ಹೇಳಿರುವಂತೆ ನಾಯಿಯೇ ನಾರಾಯಣ. ಅವರ ಹೆಸರನ್ನು ತೆಗೆದು ನಾವು ಏನೆಂದು ಕರೆಯಬಹುದು. ಅದನ್ನು ಅವರು ಹೇಳಿದರೆ ನಾನೇ ಅಫಿಡವಿಟ್‌ ಹಾಕಿಸುತ್ತೇನೆ ಎಂದು ಹೇಳಿದರು.

ಬಿಜೆಪಿಯವರು ಕಲಬುರಗಿಗೆ ಬಂದು ಏನೂ ಮಾಡಲಾಗುವುದಿಲ್ಲ. ನಿಮ್ಮಂತೆ ನಮ್ಮಲ್ಲಿ 40 ಪರ್ಸೆಂಟ್, ‌20 ಪರ್ಸೆಂಟ್ ಇಲ್ಲ.‌ ಕಲ್ಯಾಣ ಕರ್ನಾಟಕವನ್ನು ಅಭಿವೃದ್ಧಿ ಮಾಡಬೇಕು ಎಂಬ ಉದ್ದೇಶ ಮಾತ್ರ ಇದೆ. ನೀವು ಅಕ್ಕಿಕಳ್ಳನಿಗೆ ಟಿಕೆಟ್ ನೀಡಿದಿರಿ, ಮುಂದೆ ಯಾವ ಕಳ್ಳನಿಗೆ ನೀಡುತ್ತೀರೋ ಗೊತ್ತಿಲ್ಲ. ನೀವು ಎಷ್ಟೇ ತಿಪ್ಪರಲಾಗ ಹಾಕಿದರೂ ಚಿತ್ತಾಪುರ ಜನತೆ ಅಭಿವೃದ್ಧಿಗೆ ಮತ ಹಾಕುತ್ತಾರೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ
ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು