ಲೋಕ​ಸಭೆ ಚುನಾ​ವ​ಣೆಯಲ್ಲಿ ಮತ್ತೆ ಬಿಜೆಪಿ ಸೋಲಿಸಿ: ಸಚಿ​ವ ಖಂಡ್ರೆ

Published : Jun 13, 2023, 12:59 PM IST
ಲೋಕ​ಸಭೆ ಚುನಾ​ವ​ಣೆಯಲ್ಲಿ ಮತ್ತೆ ಬಿಜೆಪಿ ಸೋಲಿಸಿ: ಸಚಿ​ವ ಖಂಡ್ರೆ

ಸಾರಾಂಶ

ಬೆಲೆ ಏರಿಕೆ ತಡೆ​ಯು​ತ್ತೇವೆ, ರೈತರ ಆದಾಯ ದುಪ್ಪಟ್ಟು ಮಾಡ್ತೇವೆ, ಮನೆ​ಯಿ​ಲ್ಲ​ದ​ವ​ರಿಗೆ ಪಕ್ಕಾ ಮನೆ ಕಟ್ಟು​ತ್ತೇ​ವೆಂದು ಹೇಳಿ ಏನೂ ಮಾಡದೇ ಕೈಕ​ಟ್ಟಿ​ಕೊಂಡು ಕುಳಿ​ತಿ​ದ್ದಾರೆ ಎಂದು ವ್ಯಂಗ್ಯ​ವಾ​ಡಿ​ದ​ ಖಂಡ್ರೆ 

ಬೀದ​ರ್‌(ಜೂ.13): ಮುಂದಿನ 10 ತಿಂಗ​ಳಲ್ಲಿ ಲೋಕ​ಸಭೆ ಚುನಾ​ವ​ಣೆ ಘೋಷ​ಣೆ​ಯಾ​ಗ​ಲಿದೆ. ಬಿಜೆ​ಪಿ​ಯ​ವರು ಏನೂ ಮಾಡದೆ ಮೆರೆ​ಯು​ತ್ತಿ​ದ್ದಾರೆ. ನಾವು ಕೊಟ್ಟಮಾತಿ​ನಂತೆ ನಡೆ​ದು​ಕೊಂಡಿದ್ದು ನಮ್ಮ ಕಾರ್ಯ​ಕ​ರ್ತರು ಲೋಕ​ಸಭಾ ಚುನಾ​ವ​ಣೆಗೆ ಸನ್ನ​ದ್ಧ​ರಾ​ಗ​ಬೇಕು ಎಂದು ಜಿಲ್ಲಾ ಉಸ್ತು​ವಾರಿ ಸಚಿವ ಈಶ್ವರ ಖಂಡ್ರೆ ಕರೆ ನೀಡಿ​ದರು.

ನಗ​ರ​ದಲ್ಲಿ ಭಾನು​ವಾರ ರಾತ್ರಿ ಜಿಲ್ಲಾ ಕಾಂಗ್ರೆಸ್‌ ಆಯೋ​ಜಿ​ಸಿದ್ದ ಅದ್ಧೂರಿ ಕಾರ್ಯ​ಕ್ರ​ಮ​ದಲ್ಲಿ ಸನ್ಮಾನ ಸ್ವೀಕ​ರಿಸಿ ಮಾತ​ನಾಡಿದ ಅವ​ರು, ಬಿಜೆ​ಪಿ​ಯ​ವರು ಕೊಟ್ಟ ಒಂದು ಭರ​ವ​ಸೆ​ಯಾ​ದರೂ ಈಡೇ​ರಿ​ಸಿ​ದ್ದಾರಾ ಎಂದು ಪ್ರಶ್ನಿ​ಸಿ, ಬೆಲೆ ಏರಿಕೆ ತಡೆ​ಯು​ತ್ತೇವೆ, ರೈತರ ಆದಾಯ ದುಪ್ಪಟ್ಟು ಮಾಡ್ತೇವೆ, ಮನೆ​ಯಿ​ಲ್ಲ​ದ​ವ​ರಿಗೆ ಪಕ್ಕಾ ಮನೆ ಕಟ್ಟು​ತ್ತೇ​ವೆಂದು ಹೇಳಿ ಏನೂ ಮಾಡದೇ ಕೈಕ​ಟ್ಟಿ​ಕೊಂಡು ಕುಳಿ​ತಿ​ದ್ದಾರೆ ಎಂದು ವ್ಯಂಗ್ಯ​ವಾ​ಡಿ​ದ​ರು.

ಔರಾದ್‌: ಕಾಮ​ಗಾರಿ ಕಳ​ಪೆ​ಯಾ​ದಲ್ಲಿ ಸಹಿ​ಸ​ಲ್ಲ, ಶಾಸಕ ಪ್ರಭು ಚವ್ಹಾ​ಣ್‌

ಕೆರೆಯ ನೀರು ಕೆರೆಗೆ ಚೆಲ್ಲಿ ಎಂಬಂತೆ ರಾಜ್ಯದ ಕಾಂಗ್ರೆಸ್‌ ಸರ್ಕಾರ ಬಡ​ವ​ರಿ​ಗಾಗಿ ಉಚಿತ ಯೋಜ​ನೆ​ಗ​ಳನ್ನು ನೀಡು​ತ್ತಿ​ದೆ. ನಾವು 5 ಗ್ಯಾರಂಟಿ​ಗ​ಳನ್ನು ಚುನಾ​ವಣಾ ಪೂರ್ವ​ದಲ್ಲಿ ಕೊಟ್ಟು ಇದೀಗ ಪೂರ್ಣ​ಗೊ​ಳಿ​ಸಲು ಆರಂಭಿ​ಸಿದ್ದು, ಶಕ್ತಿ ಯೋಜನೆಗೆ ಚಾಲನೆ ನೀಡಿ​ದ್ದೇವೆ. ಹೀಗೆಯೇ ಎಲ್ಲ​ವನ್ನೂ ಜಾರಿಗೆ ತರು​ತ್ತಿ​ದ್ದೇವೆ, ಕೊಟ್ಟ ಮಾತನ್ನು ಉಳಿ​ಸಿ​ಕೊಂಡಿ​ದ್ದೇವೆ ಎಂದರು.

ವಿಧಾ​ನ​ಸಭೆ ಚುನಾ​ವ​ಣೆ​ಯಲ್ಲಿ ಸ್ವಲ್ಪ ಹಿನ್ನ​ಡೆ​ಯಾ​ಗಿ​ದ್ದರೂ ಮುಂದಿನ ಕೆಲ ತಿಂಗ​ಳಲ್ಲಿ ತಾಪಂ ಹಾಗೂ ಜಿಪಂ ಚುನಾ​ವಣೆಗಳೂ ಘೋಷ​ಣೆ​ಯಾ​ಗ​ಲಿದೆ. ಬಿಜೆ​ಪಿಯ ಭ್ರಷ್ಟಾ​ಚಾ​ರ, ಪಕ್ಷ​ಪಾ​ತ​ದಂಥ ದುರಾ​ಡ​ಳಿತಕ್ಕೆ ಬೇಸತ್ತು ಕಾಂಗ್ರೆಸ್‌ಗೆ ಅಧಿ​ಕಾರ ನೀಡಿ​ರುವ ಜನರ ಆಶೋ​ತ್ತ​ರ​ಗ​ಳನ್ನು ಈಡೇ​ರಿ​ಸಲು ನಾವು ಬದ್ಧ​ರಾ​ಗಿ​ದ್ದೇವೆ ಎಂಬುವ​ದನ್ನು ಜನ​ತೆ​ಯತ್ತ ಕೊಂಡೊಯ್ದು ಮತ್ತೊಮ್ಮೆ ಬಿಜೆ​ಪಿ ಸೋಲಿ​ಸ​ಬೇ​ಕೆಂದು ಕರೆ ನೀಡಿ​ದರು.

ಎಲ್ಲ ನೀರಾ​ವರಿ ಯಜ​ನೆ​ಗ​ಳನ್ನು ಪೂರ್ಣ​ಗೊ​ಳಿಸಿ ರೈತ​ರಿಗೆ ದೊಡ್ಡ ಕೊಡುಗೆ ಕೊಡ​ಬೇ​ಕಾ​ಗಿದೆ. ಬ್ರಿಮ್ಸ್‌​ನಲ್ಲಿ ತಜ್ಞ ವೈದ್ಯರ ನೇಮ​ಕಾತಿ, ಟ್ರಾಮಾ ಕೇಂದ್ರ ಆರಂಭ ಹೀಗೆಯೇ ಅನೇಕ ಸಮ​ಸ್ಯೆ​ಗ​ಳನ್ನು ಈಡೇ​ರಿ​ಸ​ಲಾ​ಗುವುದು, ಬಿಜೆಪಿ ಸರ್ಕಾ​ರ​ದ​ಲ್ಲಿ ಬೀದರ್‌ ನೂತನ ವಿಶ್ವ ವಿದ್ಯಾ​ಲ​ಯ ಘೋಷಣೆ ಮಾಡಿ ಒಂದೂ ಹುದ್ದೆ ತುಂಬಿಲ್ಲ ಅದಕ್ಕೆ ನಾವು ಕಾಯ​ಕಲ್ಪ ನೀಡಲು ಮುಂದಾ​ಗು​ತ್ತೇವೆ ಎಂದರು.

ಕಾಂಗ್ರೆಸ್‌ ಶಾಸ​ಕ​ರಿ​ಲ್ಲದ ಕ್ಷೇತ್ರ​ದಲ್ಲಿ ಕೈಪಾ​ಳ​ಯದ ಮುಖಂಡರದ್ದೆ ಆಡ​ಳಿ​ತ:

ಕಾಂಗ್ರೆಸ್‌ ಶಾಸ​ಕ​ರಿ​ಲ್ಲದ ಕ್ಷೇತ್ರ​ದಲ್ಲಿ ಕೈಪಾ​ಳ​ಯದ ಮುಖಂಡರ ಸಲ​ಹೆ​ಗ​ಳೊಂದಿಗೆ ಅಭಿ​ವೃದ್ಧಿ ಮಾಡ್ತೇವೆ. ಆಯಾ ಕ್ಷೇತ್ರ​ದಲ್ಲಿ ಕಾಂಗ್ರೆಸ್‌ ಆಡ​ಳಿ​ತವೇ ಇದೆ ಎಂಬಂತೆ ಅಭಿ​ವೃದ್ಧಿ ಮಾಡ್ತೇವೆ, ಕಾರ್ಯ​ಕ​ರ್ತ, ಮುಖಂಡ​ರಿಗೆ ನಿಗಮ, ಮಂಡ​ಳಿ​ಗ​ಳಲ್ಲಿ ಪ್ರಾತಿ​ನಿ​ಧ್ಯವನ್ನು ನೀಡುವು​ದಕ್ಕೆ ಮುಂದಾ​ಗು​ತ್ತೇ​ವೆ ಎಂದು ಸಚಿ​ವ​ ಈ​ಶ್ವರ ಖಂಡ್ರೆ ಭರ​ವಸೆ ನೀಡಿ​ದ​ರು.

ಬೀದರ್: ಈಶ್ವರ್ ಖಂಡ್ರೆಗೆ ಜಿಲ್ಲೆ ಉಸ್ತು​ವಾ​ರಿ, ಅಭಿ​ವೃ​ದ್ಧಿಯ ಜವಾ​ಬ್ದಾರಿ!

ಈ ಸಂದ​ರ್ಭ​ದಲ್ಲಿ ಸಚಿವ ರಹೀಮ್‌ ಖಾನ್‌ ಮಾತ​ನಾ​ಡಿ​ದ​ರು. ಅರ​ವಿಂದ​ಕು​ಮಾರ ಅರಳಿ, ಪಕ್ಷದ ಜಿಲ್ಲಾ​ಧ್ಯಕ್ಷ ಬಸ​ವ​ರಾಜ ಜಾಬ​ಶೆಟ್ಟಿ, ಪ್ರಧಾನ ಕಾರ್ಯ​ದರ್ಶಿ ದತ್ತಾ​ತ್ರೆಯ ಮೂಲಗೆ, ಮಾಜಿ ಶಾಸಕ ವಿಜ​ಯ​ಸಿಂಗ್‌, ಡಾ. ಗುರಮ್ಮ ಸಿದ್ದಾ​ರೆ​ಡ್ಡಿ, ಆನಂದ ದೇವ​ಪ್ಪ, ಇರ್ಷಾದ ಪೈಲ್ವಾನ್‌, ಪಂಡಿತ ಚಿದ್ರಿ, ಅಮೃ​ತ​ರಾವ್‌ ಚಿಮ​ಕೋಡೆ ಸೇರಿ​ದಂತೆ ಅನೇ​ಕರು ಉಪ​ಸ್ಥಿ​ತ​ರಿ​ದ್ದ​ರು.

ಜಿಲ್ಲಾ ಸಂಕೀರ್ಣ ನಿರ್ಮಾ​ಣಕ್ಕೆ ಬದ್ಧ

ಈಗಿ​ರುವ ಜಿಲ್ಲಾ​ಧಿ​ಕಾ​ರಿ​ಗಳ ಕಚೇರಿ ಕಟ್ಟ​ಡದ ಆವ​ರ​ಣ​ದ​ಲ್ಲಿಯೇ ಬೀದ​ರ್‌ ಜಿಲ್ಲಾ ಸಂಕೀರ್ಣ ನಿರ್ಮಾ​ಣಕ್ಕೆ ಬದ್ಧ​ವಾ​ಗಿ​ದ್ದೇವೆ. ಈ ಹಿಂದೆ ಸಿದ್ದ​ರಾ​ಮಯ್ಯ ಅವ​ರು ಶಂಕು​ಸ್ಥಾ​ಪನೆ ಮಾಡಿ​ದ್ದರೂ ಕೇವಲ ಸ್ಥಳ ನಿಗದಿ ಬಗ್ಗೆ ಅನ​ಗತ್ಯ ಕ್ಯಾತೆ ಎತ್ತಿ ಜಿಲ್ಲಾ ಸಂಕೀರ್ಣ ನಿರ್ಮಾಣ ಆಗ​ದಂತೆ ಬಿಜೆ​ಪಿ​ಯ​ವರು ನೋಡಿ​ಕೊಂಡರು ಆದರೆ ನಾವೀಗ ಜಿಲ್ಲಾ ಸಂಕೀರ್ಣ ಮಾಡಿ ತೋರಿ​ಸು​ತ್ತೇವೆ ಎಂದು ಖಂಡ್ರೆ ಭರ​ವಸೆ ನೀಡಿ​ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ