ಇಡಿ ವಿಚಾರಣೆಯ ನೋವು ಕಾಂಗ್ರೆಸ್‌ನವರಿಗೂ ಗೊತ್ತಾಗಲಿ: ಶ್ರೀರಾಮುಲು

Published : Jun 15, 2022, 05:50 AM IST
ಇಡಿ ವಿಚಾರಣೆಯ ನೋವು ಕಾಂಗ್ರೆಸ್‌ನವರಿಗೂ ಗೊತ್ತಾಗಲಿ: ಶ್ರೀರಾಮುಲು

ಸಾರಾಂಶ

*  ಇದುವರೆಗೂ ಜನರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿ ಕಾಟ ಕೊಟ್ಕಂಡು ಬರ್ತಿದ್ದ ಕಾಂಗ್ರೆಸ್‌  *  ಕಾಲಚಕ್ರದಲ್ಲಿ ಒಬ್ಬರು ಕೆಳಗೆ ಬೀಳಬೇಕು, ಒಬ್ಬರು ಮೇಲೇರಬೇಕು *  ಇವತ್ತು ಕಾಲಚಕ್ರದಲ್ಲಿ ಬಿಜೆಪಿ ಮೇಲುಗೈ ಆಗಿದೆ. ಕಾಂಗ್ರೆಸ್‌ ನವರಿಗೆ ಕೆಳಗೆ ಇರೋ ಕೆಟ್ಟಪರಿಸ್ಥಿತಿ ಬಂದಿದೆ 

ಚಿತ್ರದುರ್ಗ(ಜೂ.15):  ಕಾನೂನು ಎಲ್ಲರಿಗೂ ಒಂದೇ ಆಗಿದ್ದು ಅದು ರಾಹುಲ್‌ ಗಾಂಧಿ ಹೊರತಾಗಿಲ್ಲ. ಇಡಿ ವಿಚಾರಣೆ ನೋವು ಏನು ಅಂತ ಕಾಂಗ್ರೆಸ್‌ನವರಿಗೂ ಗೊತ್ತಾಗಲಿ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್‌ನವರು ಇದುವರೆಗೂ ಜನರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿ ಕಾಟ ಕೊಟ್ಕಂಡು ಬರ್ತಿದ್ದರು. ಕಾಲಚಕ್ರದಲ್ಲಿ ಒಬ್ಬರು ಕೆಳಗೆ ಬೀಳಬೇಕು, ಒಬ್ಬರು ಮೇಲೇರಬೇಕು. ಇವತ್ತು ಕಾಲಚಕ್ರದಲ್ಲಿ ಬಿಜೆಪಿ ಮೇಲುಗೈ ಆಗಿದೆ. ಕಾಂಗ್ರೆಸ್‌ ನವರಿಗೆ ಕೆಳಗೆ ಇರೋ ಕೆಟ್ಟಪರಿಸ್ಥಿತಿ ಬಂದಿದೆ. ಇದು ರಿವೇಂಜ್‌ ಅಲ್ಲ. ಹಳೇ ಹಗರಣ ಕಾಂಗ್ರೆಸ್‌ ಎದುರಿಸುತ್ತಿದ್ದು ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಬಿಜೆಪಿ ಯಾವತ್ತೂ ರಿವೇಂಜ್‌ ಪಾಲಿಟಿಕ್ಸ್‌ ಮಾಡಿಲ್ಲವೆಂದರು.

ಕಾಂಗ್ರೆಸ್‌ ಭ್ರಷ್ಟಾಚಾರ ಪ್ರಜಾಪ್ರಭುತ್ವದ ಅಂಗವೆಂದು ಭಾವಿಸಿದೆ: ಪ್ರತಾಪ್‌ ಸಿಂಹ

ಇಡಿ, ಐಟಿಯನ್ನು ಬಿಜೆಪಿ ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಬಿಡಲಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀರಾಮುಲು ಅನುಭವ ಇರುವ ರಾಜಕಾರಣಿಗಳು ಐಟಿ, ಇಡಿ ಬಗ್ಗೆ ಮಾತನಾಡ್ತಾರೆ ಅಂದ್ರೆ ಇತಿಹಾಸ ಮರೆತಿರಬೇಕು ಅನ್ನಿಸುತ್ತೆ ಎಂದು ವ್ಯಂಗ್ಯವಾಡಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ