ವಿರುಪಾಕ್ಷಪ್ಪ-ವಿಜಯೇಂದ್ರ ಭೇಟಿ: ಒಳ ಹಂತದಲ್ಲಿ ಎನಾಗಿದೆಯೋ ಎಂದ BJP ಸಂಭವನೀಯ ಅಭ್ಯರ್ಥಿ

Published : Nov 21, 2020, 05:15 PM ISTUpdated : Nov 21, 2020, 05:17 PM IST
ವಿರುಪಾಕ್ಷಪ್ಪ-ವಿಜಯೇಂದ್ರ ಭೇಟಿ: ಒಳ ಹಂತದಲ್ಲಿ ಎನಾಗಿದೆಯೋ ಎಂದ BJP ಸಂಭವನೀಯ ಅಭ್ಯರ್ಥಿ

ಸಾರಾಂಶ

ಮೊನ್ನೆ ಶಿರಾದಲ್ಲಿ ಬಿಜೆಪಿಯನ್ನು ಗೆಲ್ಲಿಸುವುದರಲ್ಲಿ ಪ್ರಮುಖ ರೂವಾರಿ ಬಿ.ವೈ ವಿಜಯೇಂದ್ರ ಇದೀಗ ಉತ್ತರ ಕರ್ನಾಟಕದ ಮೇಲೆ ಕಣ್ಣಿಟ್ಟಿದ್ದು, ಮೊದಲ ಭೇಟಿ ವೇಳೆಯೇ ರಾಯಚೂರು ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.

ರಾಯಚೂರು, (ನ.21): ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯಬೇಕಿದ್ದು, ಇನ್ನೂ ದಿನಾಂಕ ಘೋಷಣೆಯಾಗಿಲ್ಲ. ಆಗಲೇ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದ್ದು, ರಾಜ್ಯ ಕಾರ್ಯಕಾರಣಿ ಸಭೆ ನಡೆಸುವ ಮೂಲಕ ಮಸ್ಕಿ ಬೈ ಎಲೆಕ್ಷನ್‌ಗೆ ರಣಕಹಳೆ ಊದಿದೆ.

ಹೌದು... ಮಸ್ಕಿ ಉಪಚುನಾವಣೆ ಗುರಿ ಇಟ್ಟುಕೊಂಡು ಶುಕ್ರವಾರ ಸಿಂಧನೂರಿನಲ್ಲಿ ಬಿಜೆಪಿ ರಾಜ್ಯ ಕಾರ್ಯಕರಣಿ ಸಭೆ ನಡೆಸಿದ್ದು, ಸಭೆ ಬಳಿಕ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಂಸದ ಕೆ. ವಿರುಪಾಕ್ಷಪ್ಪ ನಿವಾಸಕ್ಕೆ ಭೇಟಿ ನೀಡಿದ್ದಾರೆ. ರಾಯಚೂರಿಗೆ ತಮ್ಮ ಮೊದಲ ಭೇಟಿ  ಮೂಲಕ ಜಿಲ್ಲಾ ರಾಜಕಾರಣದಲ್ಲಿ ಹಲ್‌ಚಲ್ ಎಬ್ಬಿಸಿದ್ದಾರೆ.

ಮಸ್ಕಿ ಬೈ ಎಲೆಕ್ಷನ್‌ಗೆ ಸಂಘಟನಾ ಚತುರ ಎಂಟ್ರಿ, ಮಹತ್ವದ ಘೋಷಣೆ 

ಮಸ್ಕಿ ಕ್ಷೇತ್ರದಲ್ಲಿ ಕುರುಬ ಸಮುದಾಯದ ಮತಗಳು ಅಧಿಕವಾಗಿರುವುದನ್ನ ಮನಗಂಡು ವಿಜಯೇಂದ್ರ ಅವರು ವಿರುಪಾಕ್ಷಪ್ಪನವರನ್ನ ಸಂಪರ್ಕಿಸಿದ್ದು, ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ವಿಜಯೇಂದ್ರ ಅವರು ಕೆವಿಎಸ್‌ ಭೇಟಿ ಮೂಲಕ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಕ್ರಿಯೆಟ್ ಮಾಡಿ ಹೋಗಿದ್ದಾರೆ. ಇದು ಒಂದು ರಾಜಕೀಯ ತಂತ್ರವೂ ಕೂಡ ಹೌದು. 

ಸಂಭನೀಯ ಅಭ್ಯರ್ಥಿ ಪ್ರತಿಕ್ರಿಯೆ
ಇನ್ನು ಈ ಬಗ್ಗೆ ಕೊಪ್ಪಳದ ಮುನಿರಾಬಾದ್‌ನಲ್ಲಿ ಇಂದು (ಶನಿವಾರ) ಪ್ರತಿಕಿಯಿಸಿರುವ ಮಸ್ಕಿಯ ಸಂಭವನೀಯ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್, ವಿಜಯೇಂದ್ರ ಅವರು ಸೌಜನ್ಯದ ಭೇಟಿ ಎಂದು ಕೆ.ವಿ ಅವರೇ ಹೇಳಿದ್ದಾರೆ. ಕೆ.ವಿರುಪಾಕ್ಷಪ್ಪ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಹೋಗಲ್ಲಾ ಎಂದಿದ್ದಾರೆ. ಆದರೆ ಒಳ ಹಂತದಲ್ಲಿ ಎನಾಗಿದೆಯೋ ನನಗೆ ಗೋತಿಲ್ಲಾ ಎಂದು ಹೇಳುವ ಮೂಲಕ  ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಮೂಡಿಸಿದರು.

ರಾಜ್ಯ ನಾಯಕರು ಚುನಾವಣೆ ಉಸ್ತುವಾರಿಯನ್ನು ಘೋಷಣೆ ಮಾಡಿದ್ದು, ಸೋಮಣ್ಣ ಮತ್ತು ರವಿಕುಮಾರ್ ಉಸ್ತುವಾರಿ ಇದ್ದಾರೆ. ಜೊತೆಯಲ್ಲಿ ವಿಜಯೇಂದ್ರ ಕೂಡ ಬರ್ತಾರೆ ಎಂದು ಹೇಳಿದರು. ಪ್ರತಾಪ್ ಗೌಡ ಪಾಟೀಲ್ ಅವರು ವಿಜಯೇಂದ್ರ ಅವರಿಗೆ ಮಸ್ಕಿ ಉಸ್ತುವಾರಿ ಕೊಡಿ ಎಂದು ಖುದ್ದು ಸಿಎಂಗೆ ಮನವಿ ಮಾಡಿದ್ದರು. ಆದ್ರೆ, ಪ್ರತಾಪ್ ಗೌಡರ ಆಸೆ ಈಡೇರಿಲ್ಲ. ಇದರಿಂದ ಪಾಟೀಲರು ಚುನಾವಣೆ ಏನಾಗಲಿದೆಯೋ ಎನ್ನುವ ಕೊಂಚ ಆತಂಕದಲ್ಲಿರುವುದಂತೂ ಸತ್ಯ.

ಬಸನಗೌಡ ತುರ್ವಿಹಾಳ್ ಕೈ ಅಭ್ಯರ್ಥಿ
ಬದಲಾದ ರಾಜಕೀಯ ವಿದ್ಯಾಮಾನಗಳಿಂದ ಪ್ರತಾಪ್ ಗೌಡ ಪಾಟೀಲ್, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ ಉಪಚುನಾವಣೆ ಎದುರಾಗಿದೆ. ಇದರಿಂದ ತಮ್ಮ ಮುಂದಿನ ರಾಜಕೀಯ ನೆಲೆ ಕಂಡುಕೊಳ್ಳಲು ಕಳೆದ ಚುನಾವಣೆಯಲ್ಲಿ ಕೇವಲ 213 ಮತಗಳಿಂದ ಸೋಲುಕಂಡಿದ್ದ ಬಿಜೆಪಿ ನಾಯಕ ಬಸವನಗೌಡ ತುರ್ವಿಹಾಳ್ ಅವರು ಈಗಾಗಲೇ ಕಾಂಗ್ರೆಸ್ ಸೇರಿದ್ದಾರೆ.

ಇದೇ ನ.23ರಂದು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಅಧಿಕೃತವಾಗಿ ಕೈ ಹಿಡಿಯಲಿದ್ದಾರೆ. ಅಲ್ಲದೇ ಅಂದಿನ ಸಮಾವೇಶದಲ್ಲಿಯೇ ಅಭ್ಯರ್ಥಿಯಾಗಿ ಬಸನಗೌಡ ತುರ್ವಿಹಾಳ್ ಅವರ ಹೆಸರು ಘೋಷಣೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಈ ಮೂಲಕ ಕಾಂಗ್ರೆಸ್ ಮಸ್ಕಿ ವಿಧಾನಸಭಾ ಉಪಚುನಾವಣೆಗೆ ಕಹಳೆ ಮೊಳಗಿಸಲಿದೆ,
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

CM-DCM ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಪುತ್ರ ಶಾಕಿಂಗ್ ಹೇಳಿಕೆ
ಸಿಎಂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್‌ ನೋಟೀಸ್: ವರುಣಾ ಕ್ಷೇತ್ರದ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ