ರಾಹುಲ್‌ರನ್ನು ಜೈಲಿಗೆ ಹಾಕ್ಲಿ ನೋಡೋಣ: ಬಿಜೆಪಿ ಸರ್ಕಾರದ ವಿರುದ್ಧ ಖರ್ಗೆ ಗುಡುಗು

Published : Mar 21, 2023, 06:58 AM IST
ರಾಹುಲ್‌ರನ್ನು ಜೈಲಿಗೆ ಹಾಕ್ಲಿ ನೋಡೋಣ: ಬಿಜೆಪಿ ಸರ್ಕಾರದ ವಿರುದ್ಧ ಖರ್ಗೆ ಗುಡುಗು

ಸಾರಾಂಶ

ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಯಾವತ್ತೂ ಹೆದರಿಲ್ಲ, ಹೆದರುವುದೂ ಇಲ್ಲ. ಎಷ್ಟುದಿನ ಅವರಿಗೆ ಕಷ್ಟಕೊಡುತ್ತಾರೋ ಕೊಡಲಿ, ಏನು ಅವರನ್ನು ಜೈಲಿಗೆ ಹಾಕುತ್ತಾರೋ? ತೆಗೀತಾರೋ ನೋಡಿಯೇ ಬಿಡೋಣ ಎಂದು ಎಐಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ಬೆಳಗಾವಿ (ಮಾ.21) : ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಯಾವತ್ತೂ ಹೆದರಿಲ್ಲ, ಹೆದರುವುದೂ ಇಲ್ಲ. ಎಷ್ಟುದಿನ ಅವರಿಗೆ ಕಷ್ಟಕೊಡುತ್ತಾರೋ ಕೊಡಲಿ, ಏನು ಅವರನ್ನು ಜೈಲಿಗೆ ಹಾಕುತ್ತಾರೋ? ತೆಗೀತಾರೋ ನೋಡಿಯೇ ಬಿಡೋಣ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನಗರದ ಸಿಪಿಎಡ್‌ ಮೈದಾನದಲ್ಲಿ ಸೋಮವಾರ ಕಾಂಗ್ರೆಸ್‌ ಯುವ ಕ್ರಾಂತಿ ಸಮಾವೇಶದಲ್ಲಿ ಮಾತನಾಡಿ, ರಾಹುಲ…ರಾಹುಲ್ ಗಾಂಧಿ(Rahul gandhi) ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4 ಸಾವಿರ ಕಿ.ಮೀ. ಪಾದಯಾತ್ರೆ ಮಾಡಿದ್ದಾರೆ. ಜಮ್ಮು ಕಾಶ್ಮೀರ ಭಾಷೆಯಲ್ಲಿ ರಾಹುಲಗಾಂಧಿ ಅವರು 46 ದಿನಗಳ ಹಿಂದೆ ಹೇಳಿದ ಮಾತಿಗೆ ಸಂಬಂಧಿಸಿ ಪೊಲೀಸರು ದೆಹಲಿಯಲ್ಲಿರೋ ಅವರ ಮನೆಗೆ ಬಂದು ಸಾಕ್ಷಿ ಕೊಡಿ ಎಂದು ಕೇಳಿದ್ದಾರೆ. ಇಲ್ಲಿ ಗುತ್ತಿಗೆದಾರರು ಸಾಕ್ಷ್ಯ ಕೊಟ್ಟರೂ ತನಿಖೆ ಮಾಡುತ್ತಿಲ್ಲ. 40 ಪರ್ಸೆಂಟ್‌ ಅವರಿಗೆ 60 ಪರ್ಸೆಂಟ್‌ ನಿಮಗೆ, ಒಟ್ಟಾರೆ 100 ಪರ್ಸೆಂಟ್‌ ಕಮಿಷನ್‌. .100 ಕೆಲಸ ಇದ್ದರೆ .200 ಎಸ್ಟಿಮೇಟ್‌ ಮಾಡುತ್ತಾರೆ. ಮೊದಲು ಅದನ್ನು ತನಿಖೆ ಮಾಡಿ ಆ ಮೇಲೆ ರಾಹುಲ್‌ ಗಾಂಧಿ ಮನೆಗೆ ಬನ್ನಿ ಎಂದು ವ್ಯಂಗ್ಯವಾಡಿದರು.

ಬೆಳಗಾವಿಯಲ್ಲಿ ಯುವಕ್ರಾಂತಿ, ಯುವಜನತೆಗೆ ಪ್ರತ್ಯೇಕ ಯುವಪ್ರಣಾಳಿಕೆ: ಡಿಕೆಶಿ ಘೋಷಣೆ

ನಡ್ಡಾ ರಿಮೋಟ್‌ ಕಂಟ್ರೋಲ್‌(JP Nadda Remote Control) ಎಲ್ಲಿದೆ?: ಬೆಳಗಾವಿಗೆ ಇತ್ತೀಚೆಗೆ ಆಗಮಿಸಿದ್ದ ಪ್ರಧಾನಿ ಮೋದಿ(PM Narendra Modi) ಅವರು ನನ್ನ ಬಗ್ಗೆ ಮಾತನಾಡಿದ್ದಾರೆ. ಖರ್ಗೆ(Mallikarjun kharge) ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರೂ ರಿಮೋಟ್‌ ಕಂಟ್ರೋಲ್‌ ಬೇರೆಯವರ ಬಳಿ ಇದೆ ಎಂದರು. ಹೌದು, ನನ್ನ ರಿಮೋಟ್‌ ಕಂಟ್ರೋಲ್‌ ಬೇರೆಯವರ ಬಳಿಯೇ ಇದೆ. ಆದರೆ, ನಿಮ್ಮ ಪಕ್ಷದ ಅಧ್ಯಕ್ಷ ನಡ್ಡಾ ರಿಮೋಟ್‌ ಕಂಟ್ರೋಲ್‌ ಎಲ್ಲಿದೆ ಎಂದು ಖರ್ಗೆ ವ್ಯಂಗ್ಯವಾಡಿದರು.

ಅದಾನಿ ಬಗ್ಗೆ ಮಾತನಾಡಿದ ನನ್ನ ಮತ್ತು ರಾಹುಲ್‌ ಗಾಂಧಿ(Rahul gandhi) ಭಾಷಣವನ್ನು ತೆಗೆದು ಹಾಕಿದರು. ನಮಗೆ ಸತ್ಯ ಹೇಳಲು ಬಿಡಲ್ಲ. ನೀವು ನೂರು ಸಾರಿ ಅಸತ್ಯ ಹೇಳುತ್ತೀರಿ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ ಖರ್ಗೆ, ಇದು ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣನ ಊರು. ಈ ಊರಿನಲ್ಲಿ ವೀರ ಶೂರರು ಇದ್ದಾರೆ. ನಿಮ್ಮ ಇಡಿ, ಸಿಬಿಐ ಮಣಿಸಲಾಗಲ್ಲ. ರಾಹುಲ್‌ ಗಾಂಧಿ ಎಂದೂ ಹೆದರಿಲ್ಲ, ಹೆದರುವುದೂ ಇಲ್ಲ ಎಂದರು.

ಕಾಂಗ್ರೆಸ್‌ ಗ್ಯಾರಂಟಿ- 4 'ಯುವನಿಧಿ' ಘೋಷಣೆ: ನಿರುದ್ಯೋಗಿಗಳಿಗೆ ಮಾಸಿಕ 3 ಸಾವಿರ ರೂ. ಭತ್ಯೆ

ನಮ್ಮನ್ನ ಮಣ್ಣಲ್ಲಿ ಹುಗಿಯಲು ಎಷ್ಟೇ ಪ್ರಯತ್ನಿಸಿ ನಾವು ಬೀಜ ಇದ್ದೀವಿ. ಮತ್ತೆ ಚಿಗುರುತ್ತೇವೆ ಎಂದು ಖರ್ಗೆ ಶಾಯರಿ ಮೂಲಕ ಪ್ರಧಾನಿ ಮೋದಿಗೆ ಟಾಂಗ್‌ ನೀಡಿದರು.

ನಾನು ಎಐಸಿಸಿ ಅಧ್ಯಕ್ಷ ಆದ ಮೇಲೆ ಮೊದಲ ಬಾರಿ ಬೆಳಗಾವಿಗೆ ಬಂದಿದ್ದೇನೆ. ಬೆಳಗಾವಿ ಕಾಂಗ್ರೆಸ್‌ ಪಕ್ಷಕ್ಕೆ ಪವಿತ್ರವಾದ ಭೂಮಿ. ಮಹಾತ್ಮ ಗಾಂಧಿ ಇದೇ ನೆಲದಲ್ಲಿ ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷರಾಗಿದ್ದರು. ಇಂದು ನೀವೆಲ್ಲರೂ ಸೇರಿ ಅದೇ ಭೂಮಿಯಲ್ಲಿ ನನಗೆ ಅದೇ ಸ್ಥಾನದಲ್ಲಿ ಕೂರಿಸಿದ್ದಕ್ಕೆ ಧನ್ಯವಾದಗಳು.

- ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!