ಅಣ್ಣಾಮಲೈ ಜೋಕರ್‌ ಎಂದ ದಯಾನಿಧಿ ಮಾರನ್‌ಗೆ ದುರಂಹಕಾರ: ಮೋದಿ ಕಿಡಿ

Published : Apr 11, 2024, 05:43 AM IST
ಅಣ್ಣಾಮಲೈ ಜೋಕರ್‌ ಎಂದ ದಯಾನಿಧಿ ಮಾರನ್‌ಗೆ ದುರಂಹಕಾರ: ಮೋದಿ ಕಿಡಿ

ಸಾರಾಂಶ

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಡಿಎಂಕೆ ಸಚಿವ, ಕೇಂದ್ರದ ಮಾಜಿ ಸಚಿವ ದಯಾನಿಧಿ ಮಾರನ್‌ ಜೋಕರ್‌ ಎಂದು ಹೀಯಾಳಿಸಿದ್ದಾರೆ.

ಕೊಯಮತ್ತೂರು (ಏ.11): ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಡಿಎಂಕೆ ಸಚಿವ, ಕೇಂದ್ರದ ಮಾಜಿ ಸಚಿವ ದಯಾನಿಧಿ ಮಾರನ್‌ ಜೋಕರ್‌ ಎಂದು ಹೀಯಾಳಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದರ ಜೊತೆ ಮಾತನಾಡುವ ವೇಳೆ ಅಣ್ಣಾಮಲೈ ಬಗ್ಗೆ ಪ್ರಶ್ನಿಸಿದಾಗ, ‘ಅಣ್ಣಾಮಲೈ ಬಿಜೆಪಿಯ ಉದಯೋನ್ಮುಖ ತಾರೆಯೇ ಎಂಬ ಪ್ರಶ್ನೆಗೆ ಅದು ಯಾರು? ನೀವು ಆ ಜೋಕರ್ ಬಗ್ಗೆ ಮಾತನಾಡುತ್ತಿದ್ದೀರಿ. ಅವರು ಕುಂಟ ಬಾತುಕೋಳಿ ’ ಎಂದು ವ್ಯಂಗ್ಯವಾಡಿದ್ದರು.

ದ್ರಾವಿಡ ನಾಡಿನಲ್ಲಿ ಪ್ರಧಾನಿ ಮೋದಿ ಅಬ್ಬರದ ರೋಡ್​ ಶೋ, 4 ಸ್ಥಾನ ಟಾರ್ಗೆಟ್‌!

ಇದಕ್ಕೆ ಕೊಯಮತ್ತೂರಿನ ಮೆಟ್ಟುಪಾಳ್ಯಂದಲ್ಲಿ ನಡೆದ ರ್‍ಯಾಲಿಯಲ್ಲಿ ತಿರುಗೇಟು ನೀಡಿದ ಪ್ರಧಾನಿ ಮೋದಿ, ‘ಡಿಎಂಕೆ ನಾಯಕರೊಬ್ಬರು ಅಣ್ಣಾಮಲೈಗೆ ಜೋಕರ್‌ ಎಂದು ಅಹಂಕಾರದಿಂದ ಅವಹೇಳನಕಾರಿ ಪದ ಬಳಸಿದ್ದಾರೆ. ಈ ದುರಹಂಕಾರ ತಮಿಳುನಾಡಿನ ಸಂಸ್ಕೃತಿಗೆ ವಿರುದ್ಧವಾಗಿದೆ. ಈ ದುರಂಕಾರ ಜನರಿಗೆ ಎಂದಿಗೂ ಇಷ್ಟವಾಗುವುದಿಲ್ಲ. ಮಾಜಿ ಐಪಿಎಸ್ ಅಧಿಕಾರಿ, ಹಿಂದುಳಿದ ವರ್ಗದಿಂದ ಬಂದ ಯುವಕನಿಗೆ ಡಿಎಂಕೆ ಬಳಸುವ ಪದಗಳು ಪಕ್ಷದ ನೈಜ ಸ್ವರೂಪ ತೋರಿಸುತ್ತದೆ’ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!