
ಉತ್ತರ ಕನ್ನಡ, [ನ.04]: ಅನರ್ಹ ಶಾಸಕರ ಬಗ್ಗೆ ಸಿಎಂ ಮಾತನ್ನಾಡಿರುವ ಆಡಿಯೋ ಕೈ ಪಾಳಯಕ್ಕೆ ಅಸ್ತ್ರವಾಗಿದ್ದು, ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಹೊಸಹೊಸ ತಿರುವನ್ನು ಪಡೆಯುತ್ತಿದೆ.
ಈ ಹಿನ್ನೆಯಲ್ಲಿ ಇದನ್ನು ರಾಜ್ಯ ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಸಭೆಯಲ್ಲಿ ಯಾರು ರೇಕಾರ್ಡ್ ಮಾಡಿ ಬಳಿಕ ಲೀಕ್ ಮಾಡಿದ್ದಾರೆ ಎನ್ನುವುದನ್ನು ತನಿಖೆ ನಡೆಸಿದೆ. ಇದರ ಮಧ್ಯೆ ಸಿದ್ದರಾಮಯ್ಯ ಆಡಿಯೋ ಬಿಡುಗಡೆ ಮಾಡಿದವರ ಕ್ಲೂ ಕೊಟ್ಟು ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುವಂತೆ ಮಾಡಿದ್ದಾರೆ.
ಆಡಿಯೋ ಕೇಸ್: ಸುಪ್ರೀಂನಲ್ಲಿ ಕೈ ಮೇಲು, BSY, ಅನರ್ಹ ಶಾಸಕರಿಗೆ ಸಂಕಷ್ಟ
ಇಂದು [ಮಂಗಳವಾರ] ಮುಂಡಗೋಡದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪಾ ನಿಮ್ ಮನೆಯೊಳಗೇ ಕಳ್ಳರು ಇದ್ದಾರೆ. ಯಡಿಯೂರಪ್ಪರನ್ನು ಸಿಕ್ಕಿಸಿ ಹಾಕಲು ಆಡಿಯೋ, ವಿಡಿಯೋ ಬಿಟ್ಟಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.
ಅನರ್ಹರನ್ನು ಎರಡೂವರೆ ತಿಂಗಳು ಐಷಾರಾಮಿ ಹೋಟೆಲ್ನಲ್ಲಿ ಯಡಿಯೂರಪ್ಪ ಇಟ್ಟಿದ್ರು, ಆದರೆ, ನಾನು ಇಟ್ಟಿಲ್ಲ, ಅಮಿತ್ ಶಾ ಇಟ್ಟಿದ್ದು ಅಂತ ಯಡಿಯೂರಪ್ಪ ಹೇಳಿದ್ರು, ಈಗ ಅಮಿತ್ ಶಾನೇ ಯಡಿಯೂರಪ್ಪನರನ್ನು ಗುದ್ದುತ್ತಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿಯಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿದರು.
ಬಿಜೆಪಿಯವರ ಆಡಿಯೋ, ವಿಡಿಯೋ ರೆಕಾರ್ಡ್ ನಳಿನ್ ಕುಮಾರ್ ಕಟೀಲ್, ಉಮೇಶ್ ಕತ್ತಿ ಕೊಟ್ಟಿರ್ಬೇಕು. ಅಮಿತ್ ಶಾ ಕರ್ನಾಟಕದಲ್ಲಿ ನೇರವಾಗಿ ಪಕ್ಷಾಂತರ ಮಾಡಿಸಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.
ಮೊನ್ನೇ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಯಡಿಯೂರಪ್ಪನವರು ಆಪರೇಷನ್ ಕಮಲದ ಬಗ್ಗೆ ಮಾತನಾಡಿದ್ದರು. ಇದರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೆಸರು ಹೇಳಿದ್ದು, ಆ ವಿಡಿಯೋ ಇದೀಗ ಬಹಿರಂಗವಾಗಿದೆ.
ಈ ವಿಡಿಯೋವನ್ನೇ ಅಸ್ತ್ರವಾಗಿ ಮಾಡಿಕೊಂಡಿರುವ ರಾಜ್ಯ ಕಾಂಗ್ರೆಸ್ ರಾಜ್ಯಪಾಲರಿಗೆ ದೂರು ನೀಡಿದೆ. ಅಷ್ಟೇ ಅಲ್ಲದೇ ಇದನ್ನು ಸುಪ್ರೀಂಕೋರ್ಟ್ ಗೆ ತೆಗೆದುಕೊಂಡು ಹೋಗಿದ್ದು, ಈ ಬಗ್ಗೆ ಮಂಗಳವಾರ ವಿಚಾರಣೆ ನಡೆಸೋಣವೆಂದು ಸುಪ್ರೀಂಕೋರ್ಟ್ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.