ಸಿ.ಟಿ.ರವಿ ಘಟನೆ ಬೆನ್ನಲ್ಲೇ ಜಾಲತಾಣದಲ್ಲಿ ಭಾರಿ ಹಲ್​ಚಲ್​ ಸೃಷ್ಟಿಸ್ತಿದೆ ಲಕ್ಷ್ಮೀ ಹೆಬ್ಬಾಳ್ಕರ್​ ಹಳೆಯ ವಿಡಿಯೋ!

Published : Dec 21, 2024, 12:34 PM ISTUpdated : Dec 21, 2024, 06:23 PM IST
ಸಿ.ಟಿ.ರವಿ ಘಟನೆ ಬೆನ್ನಲ್ಲೇ ಜಾಲತಾಣದಲ್ಲಿ ಭಾರಿ ಹಲ್​ಚಲ್​ ಸೃಷ್ಟಿಸ್ತಿದೆ ಲಕ್ಷ್ಮೀ ಹೆಬ್ಬಾಳ್ಕರ್​ ಹಳೆಯ ವಿಡಿಯೋ!

ಸಾರಾಂಶ

ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ಅವಹೇಳನಕಾರಿ ಪದ ಬಳಸಿದ ಆರೋಪ ಎದುರಿಸುತ್ತಿದ್ದಾರೆ. ರವಿ ಬಂಧನ, ಜಾಮೀನು, ರಾಜಕೀಯ ವಾಗ್ದಾಳಿ ನಡೆದಿದೆ. ಇದರ ನಡುವೆ, ಹೆಬ್ಬಾಳ್ಕರ್​ 2018 ರಲ್ಲಿ ಜಯಮಾಲಾ ಅವರನ್ನು "ಸೇವೆ" ಎಂಬ ಪದ ಬಳಸಿ ಟೀಕಿಸಿದ್ದ ವಿಡಿಯೋ ವೈರಲ್​ ಆಗಿದೆ.  

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರಿಗೆ ಬಿಜೆಪಿಯ ಶಾಸಕ ಸಿ.ಟಿ.ರವಿ ಅವರು ಅತ್ಯಂತ ಕೆಟ್ಟ ಪದ ಪ್ರಯೋಗ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಹೆಣ್ಣೊಬ್ಬಳಿ ತೀರಾ ಅವಮಾನ ಆಗುವಂಥ, ಅಶ್ಲೀಲ ಎನ್ನಿಸಿಕೊಂಡಿರುವ ಶಬ್ದವನ್ನು ಸಿ.ಟಿ.ರವಿ ಅವರು ಹೇಳಿರುವ ಆರೋಪ ಎದುರಿಸುತ್ತಿದ್ದಾರೆ. ಈ ಬೆಳವಣಿಗೆಯ ನಂತರ ರಾಜಕೀಯದಲ್ಲಿ ಹೈಡ್ರಾಮಾನೇ ನಡೆದು ಹೋಗಿದೆ. ಪೊಲೀಸರು ರವಿ ಅವರನ್ನು ಅರೆಸ್ಟ್​ ಮಾಡಿದ್ದು, ಬಳಿಕ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದ್ದು ಆಗಿದೆ.  ಬಿಜೆಪಿ ವಿರುದ್ಧ ಕಾಂಗ್ರೆಸ್ಸಿಗರು ವಾಗ್ದಾಳಿ ನಡೆಸುತ್ತಿದ್ದರೆ, ಬಿಜೆಪಿಯವರು ರವಿ ಅವರು ಹೇಳಿದ್ದು ಆ ಶಬ್ದವಲ್ಲ, ಮತ್ತೊಂದು ಶಬ್ದ ಎಂದು ಸ್ಪಷ್ಟನೆ ಕೊಡುತ್ತಿದ್ದಾರೆ. ನಾನು ಲಕ್ಷ್ಮೀ ಅವರಿಗೆ ಆ ಕೆಟ್ಟ ಪದದ ಪ್ರಯೋಗ ಮಾಡಿದ್ದೇ ಆಗಿದ್ದಲ್ಲಿ, ಅದರ ದಾಖಲೆ ತೋರಿಸಿ ಎಂದೂ ಸಿ.ಟಿ.ರವಿ ಸವಾಲು ಎಸೆದದ್ದೂ ಆಗಿದೆ. ಒಟ್ಟಿನಲ್ಲಿ ಕಳೆದ ಎರಡು ದಿನಗಳಿಂದ ಈ ಘಟನೆ ಭಾರಿ ಕೋಲಾಹಲವನ್ನೇ ಸೃಷ್ಟಿಸುತ್ತಿದ್ದು, ಇಂದಿಗೂ ಆರೋಪ-ಪ್ರತ್ಯಾರೋಪಗಳು ಮುಗಿದಿಲ್ಲ.

ಆದರೆ ಇದರ ಬೆನ್ನಲ್ಲೇ ಬಿಜೆಪಿ ಬೆಂಬಲಿಗರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಹಳೆಯ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದ್ದು, ಸದ್ಯ ಸೋಷಿಯಲ್​  ಮೀಡಿಯಾದಲ್ಲಿ ಈ ವಿಡಿಯೋ ಹಲ್​ಚಲ್​ ಸೃಷ್ಟಿಸುತ್ತಿದೆ. 2018ರ ವಿಡಿಯೋ ಇದಾಗಿದೆ. ಇದು ನಟಿಯಾಗಿರುವ ಜಯಮಾಲಾ ಅವರು ಸಚಿವೆಯಾಗಿ ಆಯ್ಕೆಯಾಗಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಆ ಹುದ್ದೆ ಸಿಗದ ಸಂದರ್ಭದಲ್ಲಿ ಹೇಳಿದ ಮಾತು. ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಚಿತ್ರನಟಿ ಜಯಮಾಲಾ ಅವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮದೇ ಪಕ್ಷದ ಜಯಮಾಲಾ ಅವರ ಬಗ್ಗೆ ಲಕ್ಷ್ಮೀ ಅವರು ಮಾತನಾಡಿದ್ದು, ಅದಕ್ಕೆ ಜಯಮಾಲಾ ಅವರು ತುಂಬಾ ನೊಂದುಕೊಟ್ಟಿದ್ದು, ಬಳಿಕ ಲಕ್ಷ್ಮೀ ಅವರು ನಾನು ಹಾಗೆ ಹೇಳಿದ್ದಲ್ಲ, ಹೀಗೆ ಹೇಳಿದ್ದು ಎಂದು ಸಮಜಾಯಿಷಿ ಕೊಡಲು ಹೋಗಿ ಮತ್ತೆ ಪೇಚಿಗೆ ಸಿಲುಕಿರುವ ಘಟನೆಯಾಗಿದೆ.

ಅಮಿತ್​ ಶಾ ಭಾಷಣ ತಿರುಚಿದ್ರಾ ರಾಹುಲ್​? ಫುಲ್​ ವಿಡಿಯೋ ವೈರಲ್​- ವಿಪಕ್ಷ ನಾಯಕನ ವಿರುದ್ಧ ಮತ್ತೊಂದು ಕೇಸ್​?

ಜಯಮಾಲಾ ಅವರ ವಿರುದ್ಧ ಅಸಮಾಧಾನ ಹೊರಹಾಕುವ ಭರದಲ್ಲಿ ಲಕ್ಷ್ಮೀ ಅವರು,  ‘ನಮ್ಮ ರಾಜ್ಯ ನಾಯಕರಿಗೆ ಜಯಮಾಲಾ ಅವರ ಸೇವೆ ಬಹಳ ಇಷ್ಟ ಆಗಿರಬೇಕು, ಅದಕ್ಕಾಗಿ ಸಚಿವೆ ಸ್ಥಾನ ಕೊಟ್ಟಿದ್ದಾರೆ' ಎಂದಿದ್ದರು. ಇದು ಆಗ ಭಾರಿ ಕೋಲಾಹಲ ಸೃಷ್ಟಿಸಿತ್ತು. ಸೇವೆ ಎನ್ನುವ ಪದ ಹಾಗೂ ಅವರು ಅದನ್ನು ಬಳಸಿದ ರೀತಿಗೆ ಮಹಿಳಾ ಸಮುದಾಯದಿಂದ ಟೀಕೆಗಳು ಕೇಳಿಬಂದಿದ್ದವು. ಅಷ್ಟಕ್ಕೂ ಲಕ್ಷ್ಮೀ ಅವರು ಹೇಳಿದ್ದೇನೆಂದರೆ,  ‘ಇವತ್ತು ಜಿಲ್ಲೆಯಲ್ಲಿ ಸಂಘಟನೆ ಮಾಡಿದ್ದು ಯಾರು ಅಂತ ಕೇಳಿದ್ರೆ ಚಿಕ್ಕ ಮಗು ಕೂಡ ಹೇಳುತ್ತೆ. ಅಲ್ಲಿಂದ ಇಲ್ಲಿ ಬಂದು ಇಲ್ಲಿ ರಾಜ್ಯದಲ್ಲಿ ನಾನೇನೂ ಯಾವ ರೀತಿ ಕೆಲಸ ಮಾಡಿದ್ದೀನಿ, ಮಹಿಳಾ ಕಾಂಗ್ರೆಸ್‌ಗೆ ಎಷ್ಟುಜನ ಕರ್ಕೊಂಡು ಬಂದಿದ್ದೀನಿ, ಮಹಿಳಾ ಕಾಂಗ್ರೆಸ್‌ನ ಶೇಪ್‌ನ ಯಾವ ರೀತಿ ಚೇಂಜ್‌ ಮಾಡಿದೀನಿ ಅಂತ. ಇದನ್ನೆಲ್ಲಾ ಪರಿಗಣಿಸಬಹುದಿತ್ತು. ನನಗಂತೂ ಬಹಳ ವಿಶ್ವಾಸ ಇತ್ತು. ಆದರೆ ಜಯಮಾಲಾ ಅವರಿಗೆ ಸಚಿವೆ ಮಾಡಲಾಗಿದೆ.  20 ವರ್ಷಗಳಿಂದ ರಾಜಕೀಯದಲ್ಲಿದ್ದೀನಿ. ನಾನೇನು ಮೂರ್ಖಳಲ್ಲ.  ಡೆಲ್ಲಿನಲ್ಲೂ ಕೂಡ ನನಗೆ ಮಾಡ್ತೀವಿ ಅಂತ ಹೇಳಿ ಕಳ್ಸಿದ್ರು. ಲಾಸ್ಟ್‌ ಕೊನೆಗಳಿಗೆ ಅಲ್ಲಿ ಅದೇನಾಯ್ತೋ...ಅದೇನ್‌ ಕತೆ ಆಯ್ತೋ ನನಗೆ ಅರ್ಥ ಆಗ್ತಾ ಇಲ್ಲ. ಬಹುಶಃ ಜಯಮಾಲಾ ಅವರ ಸೇವೆ ರಾಜ್ಯ ನಾಯಕರಿಗೆ ಇಷ್ಟ ಆಗಿರಬೇಕು' ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದರು.
 
ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಜಯಮಾಲಾ ತುಂಬಾ ನೊಂದುಕೊಂಡಿದ್ದರು. ಈ ರೀತಿಯ ಪದ ನಮ್ಮದೇ ಪಕ್ಷದ ಅದೂ ಹೆಣ್ಣುಮಗಳೊಬ್ಬಳಿಂದ ನಿರೀಕ್ಷೆ ಮಾಡಿರಲಿಲ್ಲ. ಈ ಶಬ್ದ ನನಗೆ ತುಂಬಾ ನೋವು ಉಂಟು ಮಾಡಿದೆ ಎಂದಿದ್ದರು. ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಸೇವೆ ಎನ್ನುವ ಶಬ್ದ ಭಾರಿ ಟೀಕೆಗೆ ಗುರಿಯಾಗುತ್ತಲೇ ಹಾಗೂ ಜಯಮಾಲಾ ಅವರ ರಿಯಾಕ್ಷನ್​ ನೋಡಿದ ಅವರು, ಕೂಡಲೇ ಸಮಜಾಯಿಷಿ ಕೊಟ್ಟರು. ನಮ್ಮದು ಉತ್ತರ ಕರ್ನಾಟಕ. ಉತ್ತರ ಕರ್ನಾಟಕ ಶೈಲಿಯಲ್ಲಿ ಸೇವೆ ಎಂದರೆ ಅದು ಉರುಳು ಸೇವೆ ಅಂತೀವಿ.  ಹರಕೆ ಸೇವೆ ಅಂತೀವಿ ಮತ್ತು ಪಕ್ಷದ ಸೇವೆ ಅಂತೀವಿ. ನಾನು ಆ ಅರ್ಥದಲ್ಲಿ ಜಯಮಾಲಾ ಅವರು ಪಕ್ಷದ ಸೇವೆ ಮಾಡಿದ್ದಾರೆ ಅಂತ ಹೇಳಿದ್ದೀನಿ. ನಮ್ಮ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥ ಮಾಡಿಕೊಂಡಿವೆ ಎಂದಿದ್ದರು!  

ಕಾಂಗ್ರೆಸ್​ ಸರ್ಕಾರ ಅಂಬೇಡ್ಕರ್​ರನ್ನು ನಡೆಸಿಕೊಂಡ ಇಂಚಿಂಚು ಮಾಹಿತಿ ನೀಡಿದ ಸಚಿವ ರಿಜೆಜು! ಭಾರಿ ಚರ್ಚೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ಧರಾಮಯ್ಯ ಮಾತು ಎತ್ತಿದ್ರೆ ಸಾಬ್ರು ಸಾಬ್ರು ಅಂತ ಜಪ ಮಾಡ್ತಾರೆ: ಶಾಸಕ ಯತ್ನಾಳ್ ವ್ಯಂಗ್ಯ!
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ