ಅಗ್ನಿಪಥದಿಂದ ಭದ್ರತೆಗೆ ಆಪತ್ತು, ಇದು ಸೇನಾ ಖಾಸಗೀಕರಣ ಎಂದ ಎಲ್.ಹನುಮಂತಯ್ಯ‌!

Published : Jun 18, 2022, 07:15 PM IST
ಅಗ್ನಿಪಥದಿಂದ ಭದ್ರತೆಗೆ ಆಪತ್ತು, ಇದು ಸೇನಾ ಖಾಸಗೀಕರಣ ಎಂದ ಎಲ್.ಹನುಮಂತಯ್ಯ‌!

ಸಾರಾಂಶ

ನಮ್ಮ‌ ಸೇನಾ ವ್ಯವಸ್ಥೆಯನ್ನು ಖಾಸಗೀಕರ‌ಣ‌ ಮಾಡಲಾಗ್ತಿದೆ ಕೇಂದ್ರ ಸರ್ಕಾರಕ್ಕೆ ರಾಜ್ಯಸಭಾ‌ ಸದಸ್ಯ ಎಲ್.ಹನುಮಂತಯ್ಯ ಸಲಹೆ ಅಗ್ನಿಪಥದಲ್ಲಿ ನಿಜವಾದ ದೇಶ ರಕ್ಷಣೆಯ ಜವಾಬ್ದಾರಿ ಇರಲ್ಲ  

ಬೆಂಗಳೂರು(ಜೂ.18): ಕೇಂದ್ರ ಸರ್ಕಾರದ ಅಗ್ನಿಪಥಾ ಸೇನಾ ನೇಮಕಾತಿ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಹಲವು ರಾಜ್ಯಗಳಲ್ಲಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಇದರ ನಡುವೆ ರಾಜ್ಯಸಭಾ ಸದ್ಯ ಎಲ್ ಹನುಮಂತಯ್ಯ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಗ್ನಿಪಥ ಯೋಜನೆಯಿಂದ ಸೇನೆಯನ್ನೂ ಖಾಸಗೀಕರಣ ಮಾಡಲಾಗುತ್ತಿದೆ ಎಂದಿದ್ದಾರೆ.

ಅಗ್ನಿವೀರರನ್ನ‌ ಎಂಪ್ಲಾಯ್ಮೆಂಟ್‌ ಜನರೇಷನ್ ಸ್ಕೀಮ್‌ ಎಂದು ಪರಿಗಣಿಸ ಬಾರದು ಎಂದು ಕೇಂದ್ರ ಸರ್ಕಾರಕ್ಕೆ ಎಲ್.ಹನುಮಂತಯ್ಯ ಸಲಹೆ ನೀಡಿದ್ದಾರೆ. ಕೇಂದ್ರ ಸರ್ಕಾರ ಕಾಂಟ್ರಾಕ್ಟ್  ರೀತಿ ಅಗ್ನಿವೀರರನ್ನ‌ ಪರಿಗಣಿಸಲು ಮುಂದಾಗಿದೆ. ಈ ಹಿಂದೆ ಇದ್ದ‌ ಎಂಜಿ ಎನ್‌ಆರ್ ಇ‌ಜಿಎ ಮುಂದುವರಿಸಿ ಎಂದು ಸಲಹೆ ನೀಡಿದ್ದಾರೆ.

ಅಗ್ನಿಪಥ ದಿಕ್ಕಿಲ್ಲದ ಯೋಜನೆ, ಪ್ರತಿಭಟನಕಾರರಿಗೆ ಆಸ್ಪತ್ರೆಯಿಂದಲೇ ಬೆಂಬಲ ಸೂಚಿಸಿದ ಸೋನಿಯಾ ಗಾಂಧಿ!

ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದವರ ಸಲಹೆ‌ ಪರಿಗಣಿಸಬೇಕಿದೆ. ಲೆ. ಜನರಲ್ ಹರ್ವದ್ ಸಿಂಗ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.  ಕೇವಲ 4 ವರ್ಷ ದೇಶ ರಕ್ಷಣೆ ಮಾಡಿದರೆ‌ ಅವನಿಗೆ ‌ನಿಜವಾದ ದೇಶ ರಕ್ಷಣೆಯ ಜವಾಬ್ದಾರಿ ಇರುತ್ತಾ?ಯೋಧರನ್ನ‌ ಪೂರ್ಣವಾಗಿ ತಯಾರಿ ಮಾಡುವ ಯೋಜನೆ ಇದಲ್ಲ ಎಂದು ಹನುಮಂತಯ್ಯ ಹೇಳಿದ್ದಾರೆ.

ಬ್ರಿಗೇಡಿಯರ್ ರಾಹುಲ್ ಬೋನ್ಸ್ಲೆ ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಭಾರತಕ್ಕೆ ಚೀನಾ ಸೇರಿದಂತೆ ಇತರೆ ರಾಷ್ಟ್ರಗಳ ಭಯ ಇರುವಾಗ ಈ ಯೋಜನೆ ಸರಿಯಲ್ಲ ಎಂದಿದ್ದಾರೆ. ಇದೇ ವೇಳೆ ಸರ್ಕಾರ ಈ ಕುರಿತು ಚಿಂತನೆ ನಡೆಸಿಬೇಕು ಎಂದು ಕಿವಿ ಮಾತು ಹೇಳಿದ್ದಾರೆ.

1) ಯೋಜನೆಯನ್ನು ಪ್ರಾಯೋಗಿಕವಾಗಿ ಮಾಡಿ, ಇದರ ಸಾಧಕ ಬಾಧಕಗಳನ್ನ ಅರಿತು ನಂತರ ಯೋಜನೆ ವಿಸ್ತರಿಸುವ ಕೆಲಸ ಆಗಬೇಕು. ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ ದೇಶಾದ್ಯಂತ 24 ಲಕ್ಷ ಉದ್ಯೋಗ ಖಾಲಿ ಇವೆ. 

2) ಕಾಂಗ್ರೆಸ್ ಪಕ್ಷದಿಂದ ಯುವಕರ ಹೋರಾಟಕ್ಕೆ‌ ಬೆಂಬಲ ಇದೆ. ಹಲವು ಪಕ್ಷಗಳು ಹೋರಾಟಕ್ಕೆ ಬೆಂಬಲ ನೀಡುತ್ತಿದೆ. ಹೋರಾಟ ತೀವ್ರಗೊಳ್ಳುತ್ತಿದೆ. ಉಗ್ರ ಸ್ವರೂಪ ತಾಳುವ ಮೊದಲು ಕೇಂದ್ರ ಸರ್ಕಾರ ಯೋಜನೆ ಕುರಿತು ಮರುಪರಿಶೀಲನೆ ಮಾಡಬೇಕು.

ನಾಲ್ಕೇ ವರ್ಷದಲ್ಲಿ ನಿವೃತ್ತಿಯಾದ್ರೆ, ಅವರನ್ನ ಯಾರು ಮದ್ವೆ ಆಗ್ತಾರೆ ಎಂದ ಕನ್ಹಯ್ಯ ಕುಮಾರ್!

3) 4 ವರ್ಷಗಳ ಪಾರ್ಟ್ ಟೈಮ್ ಬಿಟ್ಟು ಫುಲ್ ಟೈಮ್ ಉದ್ಯೋಗ ನೀಡಬೇಕು. ದೇಶ ರಕ್ಷಣೆಯ ಮಿಲಿಟರಿ ಸೇವೆಯನ್ನ ಉದ್ಯೋಗದ ಇಲಾಖೆ ಎಂದು ಪರಿಗಣಿಸಬಾರದು

ವಿವಿಧ ರಾಜ್ಯಗಳಲ್ಲಿ‌ ನಡೆಯುತ್ತಿರುವ ಯುವಕರ ಹೋರಾಟಕ್ಕೆ‌ ಬೆಂಬಲ ಸೂಚಿಸಿರುವ ಹನುಮಂತಯ್ಯ, ಹೋರಾಟ ಬೆಂಬಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿಗೆ ನಿರ್ಧರಿಸಲಾಗಿದೆ.  ಕಾಂಗ್ರೆಸ್‌ನ ಎಲ್ಲಾ  ಲೋಕಸಭಾ, ‌ರಾಜ್ಯಸಭಾ‌ ಸದಸ್ಯರಿಂದ ನಾಳೆ‌ ಧರಣಿ ನಡೆಯಲಿದೆ ಎಂದು ಹನುಮಂತಯ್ಯ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ವೃತ್ತಿಪರ ಸೈನ್ಯವನ್ನು ಬೆಳೆಸುವ ಬದಲು, ಪಿಂಚಣಿ ಹಣವನ್ನು ಉಳಿಸಲು ಒಪ್ಪಂದದ ಮೇಲೆ ಸೈನಿಕರನ್ನು ನೇಮಕ ಪ್ರಸ್ತಾಪಿಸುವ ಈ ಅಗ್ನಿಪಥ್‌ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಬಸವರಾಜ ಭೋವಿ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಅಗ್ನಿಪಥ್‌ ಯೋಜನೆಯನ್ನು ಘೋಷಿಸಿದ್ದಾರೆ. ಅದರ ಮೂಲಕ ಸಶಸ್ತ್ರ ಪಡೆಗಳಿಗೆ ಯುವಕರನ್ನು ನೇಮಿಸಿಕೊಳ್ಳಲಾಗುವುದು. ಆದರೆ, ಈ ಕ್ರಮದಿಂದ ದೇಶದ ಯುವಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ನೈಜ ಪರಿಹಾರ ಸಿಗಲು ಸಾಧ್ಯವೇ ಇಲ್ಲವೆಂಬುದನ್ನು ಈ ಯೋಜನೆಯೆ ಸಾರುತ್ತಿದೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?