ಪ್ರಚಾರಕ್ಕಾಗಿ ರಾಜೀನಾಮೆ ವಿಚಾರ ತೇಲಿ ಬಿಟ್ಟರಾ ಸಾ.ರಾ.ಮಹೇಶ್?

Published : Oct 16, 2019, 11:37 AM ISTUpdated : Oct 16, 2019, 03:50 PM IST
ಪ್ರಚಾರಕ್ಕಾಗಿ ರಾಜೀನಾಮೆ ವಿಚಾರ ತೇಲಿ ಬಿಟ್ಟರಾ ಸಾ.ರಾ.ಮಹೇಶ್?

ಸಾರಾಂಶ

ಮೈಸೂರಿನ ಕೆ ಆರ್ ನಗರ ಕ್ಷೇತ್ರದ ಶಾಸಕ ಸಾ ರಾ ಮಹೆಶ್ ತಾವು ರಾಜೀನಾಮೆ ನೀಡಿದ್ದಾಗಿ ಹೇಳಿದ್ದು, ಆದರೆ ಇದೆಲ್ಲಾ ಸುಳ್ಳು ಎನ್ನಲಾಗುತ್ತಿದೆ. 

ಮೈಸೂರು [ಅ.16]: ತಾವು ರಾಜೀನಾಮೆ ನೀಡಿರುವುದಾಗಿ ಮೈಸೂರಿನ ಕೆ ಆರ್ ನಗರ ಕ್ಷೇತ್ರದ ಶಾಸಕ ಸಾ.ರಾ. ಮಹೇಶ್ ಹೇಳಿದ್ದು, ಆದರೆ ಇದೆಲ್ಲಾ ಸುಳ್ಳು ಮಾಹಿತಿಯಾಗಿದ್ದು, ಎಲ್ಲಾ ಪ್ರಚಾರಕ್ಕೆ ಮಾಡಿದ ಗಿಮಿಕ್ ಎನ್ನಲಾಗುತ್ತಿದೆ. 

"

ಸಾ.ರಾ .ಮಹೇಶ್ ರಾಜೀನಾಮೆ ಕೊಟ್ಟಿರುವುದೇ ಸುಳ್ಳು ಎನ್ನಲಾಗುತ್ತಿದ್ದು,  ಈ ಬಗ್ಗೆ ಸ್ವತಃ ಸ್ಪೀಕರ್ ಕೂ ಕೂಡ ಮಾಹಿತಿ ಇಲ್ಲ.  ಸಾ.ರಾ. ಮಹೇಶ್ ರಾಜೀನಾಮೆ ಬಗ್ಗೆ ಅಧಿಕಾರಿಗಳಿಗೂ ಮಾಹಿತಿ ಇಲ್ಲವೆಂದು ಸುವರ್ಣ ನ್ಯೂಸ್. ಕಾಮ್ ಗೆ ಸ್ಪೀಕರ್ ಕಚೇರಿ ಮೂಲಗಳು ಸ್ಪಷ್ಟನೆ ನೀಡಿವೆ. 

ಪ್ರಚಾರಕ್ಕಾಗಿ ರಾಜೀನಾಮೆ ವಿಚಾರ ತೇಲಿಬಿಟ್ಟರಾ? ಎನ್ನಲಾಗುತ್ತಿದ್ದು, ಸೆಪ್ಟೆಂಬರ್ 18 ರಂದೇ ತಾವು ರಾಜೀನಾಮೆ ನೀಡಿದ್ದಾಗಿ ತಿಳಿಸಿದ್ದು, ಆದರೂ ಕೂಡ  ಅ.10 ಮತ್ತು 11 ರಂದು ನಡೆದ ಎರಡು ದಿನಗಳ ಕಲಾಪಕ್ಕೆ ಹಾಜರಾಗಿದ್ದರು. 

ಶಾಸಕ ಸ್ಥಾನಕ್ಕೆ JDS ಶಾಸಕ ಸಾ ರಾ ಮಹೇಶ್ ರಾಜೀನಾಮೆ!?...

ರಾಜೀನಾಮೆ ನೀಡಿರುವುದಾಗಿ ಹೇಳಿರುವ ಸಾ ರಾ ಮಹೇಶ್ ನರ್ಹ ಶಾಸಕ ವಿಶ್ವನಾಥ್ ಅವರನ್ನು ಚಾಮುಂಡಿ ಬೆಟ್ಟಕ್ಕೆ ಆಹ್ವಾನಿಸಿ ಆಣೆ ಪ್ರಮಾಣದ ಬಗ್ಗೆ ಮಾತನಾಡಿದ್ದಾರೆ. ಒಟ್ನಲ್ಲಿ ಇದೆಲ್ಲವೂ ಇವರ ರಾಜಕೀಯ ಗಿಮಿಕ್ ಎಂದೇ ಹೇಳಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!