ಅಘೋಷಿತ ಲಾಕ್​ಡೌನ್​ ಮಾಡಿಸಿರುವುದಕ್ಕೆ ಡಿಕೆಶಿ ಫುಲ್ ಗರಂ

By Suvarna NewsFirst Published Apr 23, 2021, 6:40 PM IST
Highlights

ರಾಜ್ಯದಲ್ಲಿ ಅಘೋಷಿತ ಲಾಕ್​ಡೌನ್​ ಮಾಡಿಸಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬೆಂಗಳೂರು, (ಏ.23): ನಿನ್ನೆ (ಏ.22)ಒತ್ತಾಯ ಪೂರ್ವಕವಾಗಿ ಬಂದ್​ ಮಾಡಿಸಿದ್ದು, ವರ್ತಕ ಸಮುದಾಯದಲ್ಲಿ ಆತಂಕ ಮೂಡುವಂತೆ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏ.22ರಂದು ರಾಜ್ಯದಲ್ಲಿ ಅಘೋಷಿತ ಲಾಕ್​ಡೌನ್​ ಮಾಡಿಸಿರುವುದಕ್ಕೆ  ಇಂದು (ಶುಕ್ರವಾರ) ಕೆಪಿಸಿಸಿ ಕಾರ್ಯಾಧ್ಯಕ್ಷರ ಜೊತೆ ಡಿ.ಕೆ. ಶಿವಕುಮಾರ್​ ಸಭೆ ನಡೆಸಿದರು. ಈ ಸಭೆಯಲ್ಲಿ ‌ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಧ್ರುವನಾರಾಯಣ್​ ಹಾಗೂ ಕುಣಿಗಲ್​ ಶಾಸಕ ಡಾ. ರಂಗನಾಥ್​ ಭಾಗಿಯಾಗಿದ್ದರು.

Latest Videos

ಕೊರೋನಾ ಸಂಕಷ್ಟದಲ್ಲಿರೋ ಜನರಿಗೆ ನೆರವಾಗಿ: ತಮ್ಮ ಶಾಸಕರಿಗೆ ಸಿದ್ದು ಮನವಿ

ಈ ಸಭೆಯ ನಂತರ ಮಾತನಾಡಿದ ಡಿ.ಕೆ. ಶಿವಕುಮಾರ್​ ನಿನ್ನೆ (ಏ.22) ಅಘೋಷಿತವಾಗಿ ಅಂಗಡಿಗಳನ್ನ ಬಂದ್​​ ಮಾಡಿಸಿದ್ದಾರೆ. ಮೊನ್ನೆ ಮುಖ್ಯ ಕಾರ್ಯದರ್ಶಿ ಹೇಳಿದ್ದೇನು? ನಿನ್ನೆ ಮಾಡಿದ್ದೇನು..? ಎಂದು ಪ್ರಶ್ನಿಸಿದರು.

 ಸರ್ಕಾರ ಸಾಮಾನ್ಯ ಜನರನ್ನ ತಪ್ಪು ದಾರಿಗೆ ಎಳೀತಿದೆ, ಅವರ ಆರೋಗ್ಯದ ಬಗ್ಗೆ ಯೋಚನೆ ಮಾಡುತ್ತಿಲ್ಲ, ಅವರ ಆರ್ಥಿಕ ಸ್ಥಿತಿಗತಿ ಬಗ್ಗೆಯೂ ಯೋಚನೆ ಮಾಡುತ್ತಿಲ್ಲ. ನೀವು ಲಾಕ್​ಡೌನ್​ ಅನೌನ್ಸ್​​ ಮಾಡಿಲ್ಲ, ಆದರೆ ಏಕಾಏಕಿ ಬಂದ್​ ಮಾಡಿಸುತ್ತಿದ್ದೀರಿ ಎಂದು ಸರ್ಕಾರದ ನಡೆಗೆ ಕಿಡಿಕಾರಿದರು.

click me!