ಗೆಲವು ನಮ್ಮದೇ, ಮಂತ್ರಿಯೂ ನಾನೇ: ವಿಶ್ವನಾಥ್‌

Published : Nov 16, 2019, 08:22 AM ISTUpdated : Nov 16, 2019, 09:27 AM IST
ಗೆಲವು ನಮ್ಮದೇ, ಮಂತ್ರಿಯೂ ನಾನೇ: ವಿಶ್ವನಾಥ್‌

ಸಾರಾಂಶ

ಬಿಜೆಪಿ ಸೇರಲು ಶ್ರೀನಿವಾಸ್‌ ಪ್ರಸಾದ್‌ ಕಾರಣ| ಗೆಲವೂ ನಮ್ಮದೆ, ಮಂತ್ರಿಯೂ ನಾನೇ: ವಿಶ್ವನಾಥ್‌|

ಮೈಸೂರು[ನ.16]: ನಾನು ಜೆಡಿಎಸ್‌ ಬಿಟ್ಟು ಬಿಜೆಪಿ ಸೇರಲು ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಅವರೇ ಕಾರಣ ಎಂದು ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್‌.ವಿಶ್ವನಾಥ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಶ್ರೀನಿವಾಸ ಪ್ರಸಾದ್‌ ಮೂಲಕ ನನ್ನನ್ನು ಪಕ್ಷಕ್ಕೆ ಆಹ್ವಾನಿಸಿದರು. ಜೆಡಿಎಸ್‌ ಬಿಟ್ಟು ಬಿಜೆಪಿ ಅಧಿಕಾರಕ್ಕೆ ಬರಲು ನೀವೇ ಮುಂದೆ ನಿಲ್ಲಬೇಕು ಎಂದು ಪ್ರಸಾದ್‌ ಕೇಳಿದರು. ಅವರ ಮನೆಯಲ್ಲಿಯೇ ಎಲ್ಲವೂ ತೀರ್ಮಾನವಾಯಿತು. ಶ್ರೀನಿವಾಸ ಪ್ರಸಾದ್‌ ಹೊರತು ಬೇರೆ ಯಾರೇ ಹೇಳಿದರೂ ನಾನು ಬಿಜೆಪಿಗೆ ಒಪ್ಪುತ್ತಿರಲಿಲ್ಲ ಎಂದರು.

ಹುಣಸೂರು: ಸಿ. ಪಿ. ಯೋಗೇಶ್ವರ್ ಭಾವಚಿತ್ರವುಳ್ಳ 30 ಸಾವಿರ ಸೀರೆ ವಶ

ಗೆಲವೂ ನಮ್ಮದೆ, ಮಂತ್ರಿಯೂ ನಾನೇ:

ನಾವು ಪಕ್ಷಾಂತರಿಗಳಲ್ಲ. ನಾವು ಅಧಿಕಾರಕ್ಕಾಗಿ ಪಕ್ಷ ತ್ಯಾಗ ಮಾಡಲಿಲ್ಲ. ರಾಜ್ಯದಲ್ಲಿ ರಾಕ್ಷಸ ರಾಜಕಾರಣ, ಜಾತಿ ರಾಜಕಾರಣ ಹೆಚ್ಚಾದಾಗ ತ್ಯಾಗ ಮಾಡಬೇಕಾಯಿತು. ರಾಜಕೀಯ ಶುದ್ಧೀಕರಣಗೊಳಿಸುವ ಉದ್ದೇಶದಿಂದ ಈ ರಿಸ್ಕ್‌ ತೆಗೆದುಕೊಂಡಿದ್ದೇನೆ. ಈ ಉಪಚುನಾವಣೆಯಲ್ಲಿ ನಾವೇ ಗೆಲ್ಲಲಿದ್ದು, ಮಂತ್ರಿಯೂ ಆಗುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಎಚ್‌. ವಿಶ್ವನಾಥ್‌ ವಿಶ್ವಾಸ ವ್ಯಕ್ತಪಡಿಸಿದರು.

ಇದೇವೇಳೆ ಪ್ರಧಾನಿ ಮೋದಿ ಗುಣಗಾನ ಅವರು, ಮೋದಿಯನ್ನು ದೇವರಾಜ ಅರಸು ಅವರೊಂದಿಗೆ ಹೋಲಿಸಿದರು. ದೇವರಾಜ ಅರಸು ಅವರು ಹೇಗೆ ಜಾತಿ ಇಲ್ಲದ ಜಾತಿಯಿಂದ ಬಂದರೋ, ಹಾಗೆಯೇ ನರೇಂದ್ರಮೋದಿ ಅವರು ಜಾತಿ ಇಲ್ಲದ ಜಾತಿಯಿಂದ ಬಂದಿದ್ದಾರೆ ಎಂದರು.

ಸಿದ್ದು, ಹೆಚ್‌ಡಿಕೆ ಇಬ್ಬರೂ ಮುಗಿಬೀಳಲಿ, ಜನ ನಮ್ಮನ್ ಗೆಲ್ಲಿಸ್ತಾರೆ: ವಿಶ್ವನಾಥ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ