ರಾಜಾಹುಲಿಗೆ ಸಚಿವರ ಬೆಂಬಲ, ಈಶ್ವರಪ್ಪಗೆ ಕಿರಿಯರ ನೀತಿಪಾಠ

Published : Apr 01, 2021, 04:02 PM ISTUpdated : Apr 01, 2021, 04:05 PM IST
ರಾಜಾಹುಲಿಗೆ ಸಚಿವರ ಬೆಂಬಲ, ಈಶ್ವರಪ್ಪಗೆ ಕಿರಿಯರ ನೀತಿಪಾಠ

ಸಾರಾಂಶ

ತಮ್ಮ ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ ಮಾಡುತ್ತಿದ್ದಾರೆ/ ಕೆಎಸ್ ಈಶ್ವರಪ್ಪ ಪತ್ರದ ನಂತರ ಸಚಿವರ ಪ್ರತಿಕ್ರಿಯೆ/ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು/ ನಾವೆಲ್ಲ ಬಿಎಸ್‌ವೈ ನೇತೃತ್ವದಲ್ಲಿ ಚುನಾವಣೆ ಎದುರಿಸಿದವರು/ ಮುಜುಗರ ತರುವ ಕೆಲಸ ಮಾಡಬಾರದಿತ್ತು

ಬೆಂಗಳೂರು(ಏ. 01)  ತಮ್ಮ ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಹೇಳಿದ್ದ ಈಶ್ವರಪ್ಪ ಹೈಕಮಾಂಡ್ ಗೆ ಪತ್ರ ರವಾನಿಸಿದ್ದರು.  ಇದಾದ ಮೇಲೆ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆದಿವೆ.

ಮಾದ್ಯಮ ಗಳಲ್ಲಿ ಕೆ ಎಸ್ ಈಶ್ವರಪ್ಪ ಸಿಎಂ ಮೇಲೆ ದೂರು ಎಂಬ ವಿಚಾರ ಕೇಳಿಬಂತು. ನಾವೆಲ್ಲಾ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಗೆದ್ದವರು. ಸಚಿವರನ್ನು ಮಾಡುವುದೂ ಸಿಎಂ ಪರಮಾಧಿಕಾರ. ಆದರೆ ಇವತ್ತು ಆಗಿರುವ ಬೆಳವಣಿಗೆ ದುರದೃಷ್ಟಕರ. ಶಾಸಕರು ಬಂದು ಅನುದಾನಕ್ಕೆ  ಬೇಡಿಕೆ  ಇಡುವುದು ಸಾಮಾನ್ಯ. ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವುದು ಸಿಎಂ ಪರಮಾಧಿಕಾರ. ಇದನ್ನು ಆಕ್ಷೇಪಿಸಿ ಈಶ್ವರಪ್ಪ ರಾಜ್ಯಪಾಲರ ಬಳಿ ದೂರು ನೀಡಿರುವುದು ಸರಿಯಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಈಶ್ವರಪ್ಪ  ವಿರುದ್ಧ ಶಾಸಕರ ದೂರು

ಶಾಸಕರ ಅಗತ್ಯಕ್ಕೆ ಅನುಗುಣವಾಗಿ ಸಿಎಂ ಅನುದಾನ ಬಿಡುಗಡೆ ಮಾಡಿದ್ದಾರೆ. ಹಣಕಾಸು ಸಚಿವರಾಗಿರುವ ಕಾರಣ ಸಿಎಂ ಅನುದಾನ ಹಂಚಿಕೆ ಮಾಡಿದ್ದಾರೆ. ಇವಾಗ ಈಶ್ವರಪ್ಪ ಗೆ ಏನಾದರೂ ಅಸಮಾಧಾನ, ಭಿನ್ನಾಭಿಪ್ರಾಯ ಇದ್ರೆ ಸಿಎಂ ಜೊತೆ ಚರ್ಚೆ ಮಾಡಬೇಕಿತ್ತು. ಅದು ಬಿಟ್ಟು ರಾಜ್ಯಪಾಲರ ಅಂಗಳಕ್ಕೆ ಇದನ್ನು ತೆಗೆದುಕೊಂಡು ಹೋಗೋದು ಒಳ್ಳೆ ಬೆಳವಣಿಗೆಯಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಈಶ್ವರಪ್ಪ ಒಬ್ಬ ಹಿರಿಯ ಸಚಿವರು. ಅವ್ರು ನಮಗೆ ಮಾರ್ಗದರ್ಶಕ ರಾಗಬೇಕು. ಏನೇ ವಿಷಯ ಇದ್ರು ಅದನ್ನು ಸಿಎಂ ಜೊತೆ ಚರ್ಚಿಸಬೇಕಿತ್ತು. ಅದು ಬಿಟ್ಟು ರಾಜ್ಯಪಾಲರ ಬಳಿ‌ ಹೋಗಿ ಅದನ್ನು ಜಾಹಿರ ಮಾಡೋದು, ಅವರಿಗೆ ಶೋಭೆ ತರುವುದಿಲ್ಲ ಎನ್ನುವುದು ಕೃಷಿ ಸಚಿವ ಬಿಸಿ ಪಾಟೀಲ್ ಅಭಿಪ್ರಾಯ. 

ಸಚಿವ ಸಂಪುಟ ಯಡಿಯೂರಪ್ಪ ನೇತೃತ್ವದಲ್ಲಿ ಇದೆ. ಯಡಿಯೂರಪ್ಪ ರನ್ನು ಸರ್ವಾನುಮತದಿಂದ ಸಿಎಂ ಸ್ಥಾನದಲ್ಲಿ ಕೂರಿಸಿದ್ದೇವೆ. ಯಾವುದೇ ಇಲಾಖೆಯ ಫೈಲ್ ನ್ನು ಸಿಎಂ ತರಿಸಿಕೊಳ್ಳಬಹುದು. ಜೊತೆಗೆ ಅನುದಾನ ಹಂಚಿಕೆ ಮಾಡುವ ಅಧಿಕಾರ ಕೂಡ ಅವರಿಗೆ ಇದೆ. ಇವಾಗ ಈಶ್ವರಪ್ಪ ಗೆ ಏನಾದರೂ ಭಿನ್ನಾಭಿಪ್ರಾಯ ಇದ್ರೆ ಸಿಎಂ ಜೊತೆ ಚರ್ಚಿಸಿ ಬಗೆ ಹರಿಸಿಕೊಳ್ಳಬೇಕಿತ್ತು. ಆದರೆ ಈಗ ಈಶ್ವರಪ್ಪ ಈ ರೀತಿ ಮಾಡಿರೋದು ಸರ್ಕಾರಕ್ಕೆ ಮುಜುಗರ ತಂದಿದೆ.  ಜನರಪರ ಅಭಿವೃದ್ಧಿ ಗೆ ಒತ್ತು ಕೊಡಬೇಕೇ ವಿನಹ,  ಈ ರೀತಿಯ ಸಣ್ಣ ತಪ್ಪುಗಳಿಂದ ಆಡಳಿತ ಯಂತ್ರವನ್ನು‌ ನಿಧಾನ ಮಾಡುವ ಕೆಲಸ ಮಾಡಬಾರದು ಎಂದು ಆರೋಗ್ಯ ಸಚಿವ ಸುಧಾಕರ್ ಸಲಹೆ ನೀಡಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ