Karnataka Election Results 2023: ಉತ್ತರ ಕನ್ನಡದಲ್ಲಿ ಕೈ ಹಿಡಿದ ಮತದಾರರು, ಬಿಜೆಪಿಗೆ ಬರೀ ಇಬ್ಬರು!

Published : May 13, 2023, 09:24 PM ISTUpdated : May 13, 2023, 09:26 PM IST
Karnataka Election Results 2023: ಉತ್ತರ ಕನ್ನಡದಲ್ಲಿ ಕೈ ಹಿಡಿದ ಮತದಾರರು, ಬಿಜೆಪಿಗೆ ಬರೀ ಇಬ್ಬರು!

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವ ಆರು ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದರೆ, ಬಿಜೆಪಿ ಕೇವಲ ಎರಡು ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಅಚ್ಚರಿ ಎನ್ನುವಂತೆ ವಿಶ್ವೇಶ್ವರ ಹೆಗಡೆ ಕಾಗೇರಿ, ರೂಪಾಲಿ ನಾಯ್ಕ್‌ ಸೋಲು ಕಂಡಿದ್ದಾರೆ.  

ಬೆಂಗಳೂರು (ಮೇ.13): ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಕಳೆದ ಬಾರಿ ಕಾರವಾರ, ಕುಮಟಾ, ಭಟ್ಕಳ-ಹೊನ್ನಾವರ, ಶಿರಸಿ-ಸಿದ್ಧಾಪುರ ಹಾಗೂ ಯಲ್ಲಾಪುರ ಸೇರಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಕಂಡಿದ್ದರೆ, ಕಾಂಗ್ರೆಸ್‌ ತನ್ನ ಬದ್ರಕೋಟೆಯಾದ ಹಳಿಯಾಳದಲ್ಲಿ ಗೆಲುವಿನ ನಗು ಬೀರಿತ್ತು. ಆದರೆ, ಈ ಬಾರಿ ಕಾರವಾರ, ಭಟ್ಕಳ-ಹೊನ್ನಾವರ, ಶಿರಸಿ-ಸಿದ್ಧಾಪುರ ಹಾಗೂ ಯಲ್ಲಾಪುರ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಹಳಿಯಾಳ ಹಾಗೂ ಕುಮಟಾದಲ್ಲಿ ಕಾಂಗ್ಎಸ್,‌ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. 

ಜಿಲ್ಲೆಯಲ್ಲಿ ಒಟ್ಟು ಮತದಾರರು: 1194714
ಪುರುಷ ಮತದಾರರು: 599527
ಮಹಿಳಾ ಮತದಾರರು: 595180
ಇತರೆ: 7
ಶೇಕಡವಾರು ಮತದಾನ: 77.92%

ಕುಮಟಾದಲ್ಲಿ ದಿನಕರ, ಮುಳುಗಿದ ಸೂರಜ್‌: ನಿವೇದಿತ್‌ ಆಳ್ವಾ, ಸೂರಜ್‌ ನಾಯ್ಕ್‌ ಸೋನಿ ಹಾಗೂ ದಿನಕರ ಶೆಟ್ಟಿ ಅವರ ಫೈಟ್‌ನ ಕಾರಣದಿಂದಾಗಿ ಕುಮಟಾದಲ್ಲಿ ತ್ರಿಕೋನ ಫೈಟ್‌ ಏರ್ಪಟ್ಟಿತ್ತು. ಕಳೆದ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ದಿನಕರ ಶೆಟ್ಟಿ ಅಭೂತಪೂರ್ವ ಗೆಲುವು ಸಾಧಿಸಿದ್ದರು ಈ ಬಾರಿಯೂ ಅದನ್ನು ಪುನರಾವರ್ತನೆ ಮಾಡಲು ಯಶಸ್ವಿಯಾಗಿದ್ದಾರೆ. ಆಗ ಕಾಂಗ್ರೆಸ್‌ನ ಶಾರದಾ ಶೆಟ್ಟಿ ವಿರುದ್ಧ ಗೆಲುವು ಸಾಧಿಸಿದ್ದರೆ, ಈ ಬಾರಿ ಜೆಡಿಎಸ್‌ನ ಸೂರಜ್‌ ನಾಯ್ಕ್‌ ಸೋನಿಯಿಂದ ದೊಡ್ಡ ಮಟ್ಟದ ಪ್ರತಿರೋಧ ಎದುರಿಸಿಯೂ ಗೆಲುವು ಕಂಡಿದ್ದಾರೆ. ಹಾಲಕ್ಕಿ ಒಕ್ಕಲಿಗರು, ನಾಮಧಾರಿಗಳು, ಹವ್ಯಕರು ಇಲ್ಲಿನ ಪ್ರಬಲ ಜಾತಿಯಾಗಿದ್ದವು.

ಪಕ್ಷಅಭ್ಯರ್ಥಿಗಳುಪಡೆದ ಮತಅಂತರ
ಬಿಜೆಪಿ ದಿನಕರ ಶೆಟ್ಟಿ59966673 ಮತ
ಕಾಂಗ್ರೆಸ್‌ನಿವೇದಿತ್‌ ಆಳ್ವಾ19272ಸೋಲು
ಜೆಡಿಎಸ್‌ಸೂರಜ್‌ ನಾಯ್ಕ್‌ ಸೋನಿ59293ಸೋಲು


ಕಾಗೇರಿ ಓಟಕ್ಕೆ ಬ್ರೇಕ್‌ ಹಾಕಿದ ಭೀಮಣ್ಣ: ಶಿರಸಿ ಕ್ಷೇತ್ರದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ದೊಡ್ಡ ಸೋಲು ಕಂಡಿದ್ದಾರೆ. ಇದು ಬಿಜೆಪಿ ಪಾಲಿಗೂ ಆಘಾತಕಾರಿ ಸಂಗತಿ ಎನಿಸಿದೆ. ಸತತ ಏಳನೇ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಗೇರಿ ಓಟಕ್ಕೆ ನಾಮಧಾರಿ ಸಮುದಾಯದ ಭೀಮಣ್ಣ ನಾಯ್ಕ್ ಬ್ರೇಕ್‌ ಹಾಕಿದ್ದಾರೆ. ಈಗಾಗಲೇ ಎರಡು ಬಾರಿ ವಿಧಾನಸಭಾ ಕ್ಷೇತ್ರದಲ್ಲಿ ಫೈಟ್‌ ಮಾಡಿ ಸೋಲು ಕಂಡಿದ್ದ ಭೀಮಣ್ಣ ನಾಯ್ಕ್‌, ವಿಧಾನಪರಿಷತ್‌ನಲ್ಲೂ ಒಮ್ಮೆ ಸೋತಿದ್ದರು. ಈ ಬಾರಿ ಬಿಜೆಪಿ ಭದ್ರಕೋಟೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಕ್ಷಅಭ್ಯರ್ಥಿಗಳುಪಡೆದ ಮತಅಂತರ
ಬಿಜೆಪಿವಿಶ್ವೇಶ್ವರ ಹೆಗಡೆ ಕಾಗೇರಿ68175ಸೋಲು
ಕಾಂಗ್ರೆಸ್‌ಭೀಮಣ್ಣ ನಾಯ್ಕ್‌768878712 ಮತ
ಜೆಡಿಎಸ್‌ಉಪೇಂದ್ರ ಪೈ9138ಸೋಲು


ಯಲ್ಲಾಪುರಕ್ಕೆ ಮತ್ತೊಮ್ಮೆ ಹೆಬ್ಬಾರ: ಈ ಬಾರಿ ಯಲ್ಲಾಪುರದಲ್ಲಿ ಅಭ್ಯರ್ಥಿಗಳು ತಮ್ಮ ಪಕ್ಷವನ್ನು ಬದಲಾಯಿಸಿದ್ದರೂ, ಎದುರಾಳಿಗಳು ಹಳಬರೇ ಆಗಿದ್ದರು. ಆಪರೇಷನ್‌ ಕಮಲದ ಮೂಲಕ ಬಿಜೆಪಿಗೆ ಬಂದಿದ್ದ ಶಿವರಾಮ್‌ ಹೆಬ್ಬಾರ್‌ ಈ ಬಾರಿಯೂ ಗೆಲುವು ಕಾಣುವಲ್ಲಿ ಯಶ ಕಂಡಿದ್ದಾರೆ. ಹೆಬ್ಬಾರ್‌ ಕಾರಣದಿಂದಾಗಿ ಟಿಕೆಟ್‌ ಸಿಗದೇ ಇರಬಹುದು ಎಂದು ಅಂದಾಜಿಸಿದ್ದ ವಿಎಸ್‌ ಪಾಟೀಲ್‌ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದರಾದರೂ ಸೋಲು ಕಂಡಿದ್ದಾರೆ. ಯಲ್ಲಾಪುರ, ಮುಂಡಗೋಡ ಹಾಗೂ ಶಿರಸಿ ತಾಲೂಕಿನ ಬನವಾಸಿ ಹೋಬಳಿಗಳನ್ನು ಒಳಗೊಂಡ ಈ ಕ್ಷೇತ್ರದಲ್ಲಿ ಹವ್ಯಕ ಬ್ರಾಹ್ಮಣರು ಹಾಗೂ ನಾಮಧಾರಿ ಮತದಾರರೇ ಹೆಚ್ಚಿದ್ದರು. 2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಹೆಬ್ಬಾರ್‌ ಬಳಿಕ 2019ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದರು.

ಪಕ್ಷಅಭ್ಯರ್ಥಿಗಳುಪಡೆದ ಮತಅಂತರ
ಬಿಜೆಪಿಶಿವರಾಮ ಹೆಬ್ಬಾರ746994004 ಮತ
ಕಾಂಗ್ರೆಸ್‌ವಿ.ಎಸ್.ಪಾಟೀಲ್70695ಸೋಲು 
ಜೆಡಿಎಸ್‌ನಾಗೇಶ ನಾಯ್ಕ1662ಸೋಲು


ಸೈಲ್‌ ಮುಂದೆ ಶರಣಾದ ರೂಪಾಲಿ, ಕಾರವಾರ ಬಿಟ್ಟ ಬಿಜೆಪಿ: ಹಾಲಿ ಶಾಸಕಿಯಾಗಿದ್ದ ಬಿಜೆಪಿಯ ರೂಪಾಲಿ ನಾಯ್ಕ್‌ ಈ ಬಾರಿ ಹೀನಾಯ ಸೋಲು ಕಂಡಿದ್ದಾರೆ. ಮಾಜಿ ಶಾಸಕ ಸತೀಶ್‌ ಸೈಲ್‌ ದೊಡ್ಡ ಹೋರಾಟ ನೋಡಿ ಗೆಲುವು ಕಾಣುವಲ್ಲಿ ಯಶ ಕಂಡಿದ್ದಾರೆ. 2018ರ ಚುನಾವಣೆಯಲ್ಲಿ ಮೋದಿ ಅಲೆ ಹಾಗೂ ಪರೇಶ್‌ ಮೆಸ್ತ ಸಾವಿನಿಂದ ಉಂಟಾದ ಅಲೆಯಿಂದ ರೂಪಾಲಿ ನಾಯ್ಕ್‌ ಗೆಲುವು ಕಂಡಿದ್ದರು. ಆದರೆ, ಅಭಿವೃದ್ಧಿಯನ್ನು ಮುನ್ನಲೆಯಾಗಿಟ್ಟುಕೊಂಡು ಹೋಗುವಲ್ಲಿ ಸೋಲು ಕಂಡ ರೂಪಾಲಿ ಈಗ ಕ್ಷೇತ್ರವನ್ನೇ ಬಿಟ್ಟುಕೊಟ್ಟಿದ್ದಾರೆ.

ಪಕ್ಷಅಭ್ಯರ್ಥಿಗಳುಪಡೆದ ಮತಅಂತರ
ಬಿಜೆಪಿರೂಪಾಲಿ ನಾಯ್ಕ್‌75307ಸೋಲು
ಕಾಂಗ್ರೆಸ್‌ಸತೀಶ್ ಸೈಲ್774452138 ಮತ
ಜೆಡಿಎಸ್‌ಚೈತ್ರಾ ಕೊಠಾರ್‌ಕರ್2918ಸೋಲು

 

ಮಂಕಾಳು ವೈದ್ಯರಿಗೆ ಮೆಜೆಸ್ಟಿಕ್‌ ಗೆಲುವು ನೀಡಿದ ಭಟ್ಕಳ: ಈ ಬಾರಿ ಭಟ್ಕಳದಲ್ಲಿ ತ್ರಿಕೋನ ಪೈಪೋಟಿಯ ನಿರೀಕ್ಷೆ ಇತ್ತಾದರೂ, ಕೊನೆಗೆ ಸಾಧ್ಯವಾಗದ್ದು ಬಿಜೆಪಿಯ ಸುನೀಲ್‌ ನಾಯ್ಕ್‌ ಹಾಗೂ ಮಂಕಾಳು ವೈದ್ಯ ನಡುವಿನ ನೇರ ಫೈಟ್‌. ಕೊನೆಗೆ ಅಂದಾಜು 30 ಸಾವಿರ ಮತಗಳ ಅಂತರಕ್ಕಿಂತಲೂ ಹೆಚ್ಚು ಮತದಿಂದ ಮಂಕಾಳು ವೈದ್ಯ ಗೆಲುವು ಕಂಡಿದ್ದಾರೆ. ಸುನೀಲ್‌ ನಾಯ್ಕ್‌ ಪಾಲಿಗೆ ನಾಮಧಾರಿ ಸಮಾಜದ ಮತಗಳಿಗಿಂತ ಆಡಳಿತ ವಿರೋಧಿ ಮತಗಳೇ ಸೋಲಿಗೆ ಪ್ರಮುಖ ಕಾರಣವಾಗಿದೆ.

ಪಕ್ಷಅಭ್ಯರ್ಥಿಗಳುಪಡೆದ ಮತಅಂತರ
ಬಿಜೆಪಿಸುನೀಲ್‌ ನಾಯ್ಕ್‌67771ಸೋಲು
ಕಾಂಗ್ರೆಸ್ಮಂಕಾಳು ವೈದ್ಯ10044232671 ಮತ
ಜೆಡಿಎಸ್‌ನಾಗೇಂದ್ರ ನಾಯ್ಕ್‌1502ಸೋಲು


ಹಳಿಯಾಳದಲ್ಲಿ ಗೆದ್ದು ಬೀಗಿದ ದೇಶಪಾಂಡೆ: 10ನೇ ಬಾರಿಗೆ ಕಣದಲ್ಲಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಆರ್‌ವಿ ದೇಶಪಾಂಡೆ, ಬಿಜೆಪಿಯ ಸುನೀಲ್‌ ಹೆಗಡೆಯಿಂದ ದೊಡ್ಡ ಮಟ್ಟದ ಪೈಪೋಟಿ ಎದುರಿಸಿದರೂ ಕೊನೆಗೆ ಗೆಲುವು ಕಾಣುವಲ್ಲಿ ಯಶ ಕಂಡಿದ್ದಾರೆ. ಹಳಿಯಾಳ, ದಾಂಡೆಲಿ ಹಾಗೂ ಜೊಯಿಡಾ ಕ್ಷೇತ್ರಗಳನ್ನು ಒಳಗೊಂಡ ಸ್ಪರ್ಧಾ ಕಣ ಇದಾಗಿತ್ತು. ಈವರೆಗೂ 9 ಬಾರಿ ಸ್ಪರ್ಧಿಸಿ 8 ಬಾರಿ ಗೆಲುವು ಕಂಡಿದ್ದ ದೇಶಪಾಂಡೆಗೆ ಇದು 9ನೇ ಗೆಲುವು. ದೇಶಪಾಂಡೆ ಪಾಳಯದಿಂದ ಹೊರಬಂದಿದ್ದ ಎಲ್‌ಎಲ್‌ ಘೋಟ್ನೇಕರ್‌ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದು ಚುನಾವಣಾ ಲೆಕ್ಕಾಚಾರವನ್ನು ಕೊಂಚ ಬುಡಮೇಲು ಮಾಡಿತ್ತಾದರೂ ಇದರಿಂದ ದೇಶಪಾಂಡೆಗೆ ಯಾವುದೇ ಸಮಸ್ಯೆ ಆಗಲಿಲ್ಲ.

ಪಕ್ಷಅಭ್ಯರ್ಥಿಗಳುಪಡೆದ ಮತಅಂತರ
ಬಿಜೆಪಿ ಸುನೀಲ್‌ ಹೆಗಡೆ53617ಸೋಲು
ಕಾಂಗ್ರೆಸ್‌ಆರ್. ವಿ. ದೇಶಪಾಂಡೆ572403623 ಮತ
ಜೆಡಿಎಸ್‌ಎಸ್. ಎಲ್. ಘೋಟ್ನೇಕರ್28814ಸೋಲು

ಇದನ್ನೂ ಓದಿ: SIRSI VISHWESHWARA HEGADE KAGERI ELECTION RESULTS 2023: ಭೀಮಣ್ಣನ ಮುಂದೆ ಜಾರಿಬಿದ್ದ ಕಾಗೇರಿ!

ಇದನ್ನೂ ಓದಿ:  Karnataka assembly election: ಭಟ್ಕಳದಲ್ಲಿ ಬಿಜೆಪಿ-ಕಾಂಗ್ರೆಸ್ ಮಾತಿನ ಚಕಮಕಿ: ಲಘು ಲಾಠಿ ಪ್ರಹಾರ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ