ಬೆಂಗಳೂರು-ಮೈಸೂರಿನಲ್ಲಿ ಫೈನಾನ್ಸಿಯರ್‌ಗಳ ಮೇಲೆ ಐಟಿ ದಾಳಿ, ಅಭ್ಯರ್ಥಿಗಳಿಗಾಗಿ ಸಂಗ್ರಹಿಸಿದ್ದ 15 ಕೋಟಿ ವಶಕ್ಕೆ!

Published : May 06, 2023, 12:45 PM ISTUpdated : May 06, 2023, 12:57 PM IST
ಬೆಂಗಳೂರು-ಮೈಸೂರಿನಲ್ಲಿ ಫೈನಾನ್ಸಿಯರ್‌ಗಳ ಮೇಲೆ ಐಟಿ ದಾಳಿ, ಅಭ್ಯರ್ಥಿಗಳಿಗಾಗಿ ಸಂಗ್ರಹಿಸಿದ್ದ 15 ಕೋಟಿ ವಶಕ್ಕೆ!

ಸಾರಾಂಶ

ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳಿಗೆ ನೀಡಲು ಅಪಾರ ಪ್ರಮಾಣದ ಹಣ  ಸಂಗ್ರಹಿಸಿದ್ದ ಸುಳಿವಿನ ಬೆನ್ನಲ್ಲೇ ಹಲವು ಫೈನಾನ್ಸಿಯರ್ ಗಳ ಮನೆಗಳ ಮೇಲೆ‌ ಐಟಿ ಅಧಿಕಾರಿಗಳು ದಾಳಿ  ನಡೆಸಿದ್ದು 15 ಕೋಟಿ ಮತ್ತು  5 ಕೋಟಿ ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು (ಮೇ.6): ರಾಜ್ಯ ವಿಧಾಸಭಾ ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳಿಗೆ ನೀಡಲು ಅಪಾರ ಪ್ರಮಾಣದ ಹಣ  ಸಂಗ್ರಹಿಸಿದ್ದ ಸುಳಿವಿನ ಬೆನ್ನಲ್ಲೇ ಹಲವು ಫೈನಾನ್ಸಿಯರ್ ಗಳ ಮನೆಗಳ ಮೇಲೆ‌ ಐಟಿ ಅಧಿಕಾರಿಗಳು ದಾಳಿ  ನಡೆಸಿದ್ದಾರೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಏಕಕಾಲಕ್ಕೆ ಈ ದಾಳಿ ನಡೆದಿದ್ದು, ಬೆಂಗಳೂರು ನಗರದ ಶಾಂತಿ ನಗರ, ಕಾಕ್ಸ್ ಟೌನ್, ಶಿವಾಜಿ ನಗರ, ಆರ್‌ಎಂವಿ ಎಕ್ಸ್‌ಟೆನ್ಶನ್, ಕನ್ನಿಂಗ್‌ಹ್ಯಾಮ್ ರಸ್ತೆ, ಸದಾಶಿವ ನಗರ, ಕುಮಾರಪಾರ್ಕ್ ವೆಸ್ಟ್ ಮತ್ತು ಫೇರ್‌ಫೀಲ್ಡ್ ಲೇಔಟ್ ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ಅಡಗುತಾಣಗಳಲ್ಲಿ ಸಂಗ್ರಹಿಸಲಾಗಿದ್ದ ಅಪಾರ ಪ್ರಮಾಣ ಹಣ ಮತ್ತು ಚಿನ್ನ ವಶಕ್ಕೆ ಪಡೆಯಲಾಗಿದೆ.  15 ಕೋಟಿ ನಗದು ಹಣ ಹಾಗೂ 5 ಕೋಟಿ ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಸುವರ್ಣ ನ್ಯೂಸ್ ಗೆ ಆದಾಯ ತೆರಿಗೆ ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಯಾವ ಅಭ್ಯರ್ಥಿ ಜೊತೆ ಫೈನಾನ್ಸಿಯರ್ ಸಂಪರ್ಕ ಹೊಂದಿದ್ದರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!