
ನವದೆಹಲಿ, (ಅ.6): ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯಿಂದ ದಿಢೀರ್ ಬುಲಾವ್ ಬಂದ ಹಿನ್ನೆಲೆ ನವದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಈಗ ಜಾಲಿ ಮೂಡ್ನಲ್ಲಿದ್ದಾರೆ.
ಹೌದು...ನಿನ್ನೆ (ಅ.05) ಸೋನಿಯಾಗಾಂಧಿಯವರನ್ನ ಭೇಟಿಯಾದ ಸಿದ್ದರಾಮಯ್ಯ ಅವರು ಕೆಲ ಮಹತ್ವದ ರಾಜಕೀಯ ಬಗ್ಗೆ ಚರ್ಚಿಸಿದ್ದಾರೆ. ಇದಾದ ಬಳಿಕ ಇಂದು (ಅ.06) ಸಿದ್ದರಾಮಯ್ಯ ಅವರು ದೆಹಲಿ ರೌಂಡ್ ಹೊಡೆದಿದ್ದಾರೆ.
ರಾಜಕೀಯ ಜಂಜಾಟವನ್ನು ಬಿಟ್ಟು ಜಾಲಿ ಮೂಡ್ನಲ್ಲಿ ಶಾಪಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ದೆಹಲಿಯ ಜನಪ್ರಿಯ ಸ್ಥಳ ಕಾನಾಟ್ ಪ್ಲೇಸ್ನಲ್ಲಿ ಶಾಪಿಂಗ್ ಮಾಡಿ ಸುತ್ತಾಡಿದ್ದಾರೆ. ಅಲ್ಲದೇ ಕಾನಾಟ್ ಪ್ಲೇಸ್ನ ಕಾಫಿ ಶಾಪ್ನಲ್ಲಿ ಕೆಲ ಹೊತ್ತು ಸಿದ್ದರಾಮಯ್ಯ ಕಾಲ ಕಳೆದಿದ್ದಾರೆ.
ಈ ವೇಳೆ ಸಿದ್ದರಾಮಯ್ಯಗೆ ಶಾಸಕ ಜಮೀರ್ ಅಹಮದ್ ಖಾನ್, ಪ್ರಕಾಶ್ ರಾಠೋಡ್, ಐವನ್ ಡಿಸೋಜಾ, ಅಶೋಕ್ ಪಟ್ಟಣ್ ಸಾಥ್ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.