ಮೀಸಲಾತಿ ಕುರಿತು ಯತ್ನಾಳ್‌ರಿಂದ ಕಲಿಯಬೇಕಾದದ್ದು ಏನೂ ಇಲ್ಲ: ವಿಜಯೇಂದ್ರ

By Kannadaprabha NewsFirst Published Sep 24, 2024, 6:00 AM IST
Highlights

ತಿರುಪತಿ ಲಾಡಿನಲ್ಲಿ ಪ್ರಾಣಿಯ ಕೊಬ್ಬು ಮಿಶ್ರಣ ಆಘಾತಕಾರಿ‌ ಮತ್ತು ದುರದೃಷ್ಟಕರ ಬೆಳೆವಣಿಗೆ. ಆಂಧ್ರ ಮತ್ತು ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಆಂಧ್ರ ಸರ್ಕಾರದಿಂದ ಕೇಂದ್ರ ಮಾಹಿತಿ ಪಡೆಯುತ್ತಿದೆ. ಆಂಧ್ರ ಸರ್ಕಾರ ತನಿಖೆ ನಡೆಸುತ್ತಿದ್ದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

ಚಿತ್ರದುರ್ಗ(ಸೆ.24):  ರಾಜ್ಯದ ಜನರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಜನಸೇವೆ ಬಗ್ಗೆ ಗೊತ್ತಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಂದ ಕಲಿಯಬೇಕಾದದ್ದು ಏನೂ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಯಡಿಯೂರಪ್ಪ ಅವರು ವಿರೋಧ ಮಾಡುತ್ತಿದ್ದಾರೆಂಬ ಯತ್ನಾಳ್‌ ಆರೋಪಕ್ಕೆ ಸೋಮವಾರ ಮಾತನಾಡಿದ ಅವರು, ಈ ವಿಚಾರದಲ್ಲಿ ಹೆಚ್ಚಿಗೆ ಮಾತಾಡಲ್ಲ ಎಂದರು.

Latest Videos

ಸಿದ್ದರಾಮಯ್ಯ ಸರ್ಕಾರ ಯಾವುದೇ ಕ್ಷೇತ್ರಕ್ಕೆ ಒಂದು ರೂಪಾಯಿ ಅನುದಾನ ನೀಡಿಲ್ಲ: ವಿಜಯೇಂದ್ರ

ತಿರುಪತಿ ಲಾಡಿನಲ್ಲಿ ಪ್ರಾಣಿಯ ಕೊಬ್ಬು ಮಿಶ್ರಣ ಆಘಾತಕಾರಿ‌ ಮತ್ತು ದುರದೃಷ್ಟಕರ ಬೆಳೆವಣಿಗೆ. ಆಂಧ್ರ ಮತ್ತು ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಆಂಧ್ರ ಸರ್ಕಾರದಿಂದ ಕೇಂದ್ರ ಮಾಹಿತಿ ಪಡೆಯುತ್ತಿದೆ. ಆಂಧ್ರ ಸರ್ಕಾರ ತನಿಖೆ ನಡೆಸುತ್ತಿದ್ದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದರು.

click me!