ಪಕ್ಷದ ಚಿಹ್ನೆಗಾಗಿ ಆಯೋಗದ ಮೊರೆ ಹೋದ ನಟ ಕಮಲ್‌

By Kannadaprabha NewsFirst Published Dec 18, 2020, 8:08 AM IST
Highlights

ತಮ್ಮ ಪಕ್ಷದ ಚಿಹ್ನೆಗಾಗಿ ನಟ ಕಮಲ್ ಹಾಸನ್  ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದು ಅವರು ಬೇಡಿಕೆ ಇಟ್ಟ ಚಿಹ್ನೆ ಯಾವುದು..?

ಚೆನ್ನೈ (ಡಿ.18): 2021ರ ತಮಿಳುನಾಡು ವಿಧಾನಸಭೆ ಚುನಾವಣಾ ಅಖಾಡಕ್ಕಿಳಿಯಲು ತಮ್ಮ ಪಕ್ಷಕ್ಕೆ ಬ್ಯಾಟರಿ ಟಾರ್ಚ್ ಅನ್ನು ಚಿಹ್ನೆಯನ್ನಾಗಿ ನೀಡಬೇಕೆಂಬ ನಟ ಕಮಲ್‌ ಹಾಸನ್‌ ನೇತೃತ್ವದ ಮಕ್ಕಳ್‌ ನೀದಿ ಮಯ್ಯಂ(ಎಂಎನ್‌ಎಂ) ಕೋರಿಕೆಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. 

ಕಮಲ್‌ರಿಂದ ತಮಿಳುನಾಡು ರಾಜಕಾರಣದ ದಿಕ್ಕು ಬದಲಿಸುವ ಘೋಷಣೆ! .

ಯಾವುದೇ ಕಾರಣ ನೀಡದೆ ತಮಗೆ ಚಿಹ್ನೆ ನಿರಾಕರಿಸಿ, ಅದನ್ನು ಎಂಜಿಆರ್‌ ಮಕ್ಕಳ್‌ ಕಚ್ಚಿ ಎಂಬ ಪಕ್ಷಕ್ಕೆ ನೀಡಿರುವುದು ಕಮಲ್‌ ಹಾಸನ್‌ ಅವರ ಆಕ್ರೋಶಕ್ಕೆ ಕಾರಣವಾಗಿದೆ. 

ಈ ಹಿನ್ನೆಲೆಯಲ್ಲಿ ಅವರು ಕೇಂದ್ರ ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ. ಪ್ರಜಾಪ್ರಭುತ್ವ ಈಗ ಹಾಸಿಗೆ ಹಿಡಿದಿದೆ. ನಮಗೆ ಬ್ಯಾಟರಿ ಟಾಚ್‌ರ್‍ ಕೊಡದಿದ್ದರೆ, ನಾವು ಲೈಟ್‌ ಹೌಸ್‌ ಆಗುತ್ತೇವೆ ಎಂದು ಕಮಲ್‌ ಹೇಳಿದ್ದಾರೆ.

click me!