ಕನಕಪುರದಲ್ಲಿ ನೆಮ್ಮದಿಯ ಉಸಿರಾಟಕ್ಕೆ ಗೆದ್ದೇ ಗೆಲ್ಲುವೆ: ಆರ್ ಅಶೋಕ್

Published : May 03, 2023, 04:02 PM IST
ಕನಕಪುರದಲ್ಲಿ ನೆಮ್ಮದಿಯ ಉಸಿರಾಟಕ್ಕೆ ಗೆದ್ದೇ ಗೆಲ್ಲುವೆ: ಆರ್ ಅಶೋಕ್

ಸಾರಾಂಶ

ಕನಕಪುರದಲ್ಲಿ  ಕುಂತತ್ರ ರಾಜಕಾರಣ, ಗೂಂಡಗಿರಿ ರಾಜಕಾರಣ ಹೋಗಬೇಕು. ಅದಕ್ಕೆ ಜ‌ನ ನನಗೆ ಬೆಂಬಲ ನೀಡುತ್ತಿದ್ದಾರೆ ಎಂದ ಆರ್ ಅಶೋಕ್

ಬೆಂಗಳೂರು (ಮೇ.3): ನೂರಕ್ಕೆ ನೂರು ನಾನು ಗೆಲ್ಲುವ ಸಲುವಾಗಿ ನಾನು ಅಲ್ಲಿಗೆ ಹೋಗಿರೋದು. ಜನರಿಗೆ ವಂಶಪರಂಪರೆ ದುರಾಡಳಿತದ ಗಾಳಿ ಹೋಗಬೇಕು. ಕನಕಪುರ ದಲ್ಲಿ ಒಳ್ಳೆಯ ಉಸಿರಾಡುವ ಗಾಳಿ ಬರಬೇಕು. ಅಲ್ಲಿ ಉಸಿರುಗಟ್ಟಿದ ವಾತಾವರಣ ತೊಲಗಬೇಕು. ಅದಕ್ಕಾಗಿ ನಾನು ಅಲ್ಲಿ ಗೆದ್ದೇ ಗೆಲ್ಲುತ್ತವೆ ಅದಕ್ಕಾಗಿಯೇ ನಮ್ಮ ನಾಯಕರು ನನನ್ನು ಅಲ್ಲಿಗೆ ಕಳಿಸಿದ್ದಾರೆ. ನನ್ನ ಶ್ರೀಮತಿ ಅವರು ಸಹ ನನ್ನ ಪರವಾಗಿ ನಾಳೆ ಕನಕಪುರದಲ್ಲಿ ಪ್ರಚಾರ ಮಾಡುತ್ತಾರೆ. ಸಂಸದ ತೇಜಸ್ವಿ ಸೂರ್ಯ, ಅಮೀತ್ ಶಾ ಸೇರಿದಂತೆ ಹಲವು ನಾಯಕರು ಪ್ರಚಾರ ಮಾಡಲಿದ್ದಾರೆ. ನಾನು ಕನಕಪುರದಲ್ಲಿ ಗೆದ್ದೆ ಗೆಲ್ಲತ್ತೇನೆ ಎಂದು ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ. ಈ ಮೂಲಕ ಡಿಕೆ ಸಹೋದರರಿಗೆ ಟಾಂಗ್ ಕೊಟ್ಟಿದ್ದಾರೆ.

ಇವತ್ತು ಬಿಜೆಪಿ ಹವಾ ಕರ್ನಾಟಕದಲ್ಲಿದೆ. ಪ್ರಧಾನಿ ಮೋದಿ ಅವರ ಹವಾ ಇದೆ. ಸರ್ಕಾರ ರಚನೆಗೆ ಬೇಕಾಗಿರುವಷ್ಟು ಬಹುಮತ ನಮಗೆ ಸಿಗಲಿದೆ. ಅದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ನಾವು ಗೆಲ್ಲಲಿದ್ದೇವೆ. ಈಗಾಗ್ಲೇ ಹಲವಾರು ಸಮೀಕ್ಷೆಗಳು ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೆ ಅಂತ ರಿಪೋರ್ಟ್ ನೀಡಿವೆ. ಅದೇ ರೀತಿಯ ಜನ ಬೆಂಬಲ ಸಹ ಕಾಣುತ್ತಿದೆ. ಕಾಂಗ್ರೆಸ್ ಈ ದೇಶದಲ್ಲಿ ಧೂಳಿಪಟ ಆಗಿದೆ. ಇರುವಂತಹ ರಾಜ್ಯಗಳನ್ನೆಲ್ಲ ಕಾಂಗ್ರೆಸ್ ಕಳೆದುಕೊಳ್ಳುತ್ತಿದೆ.

ಭಜರಂಗದಳ ನಿಷೇಧಕ್ಕೆ ಸುರ್ಜೆವಾಲಾ ಹಠ, ಕಾಂಗ್ರೆಸ್ ಗೆ ಪ್ರಾಣಸಂಕಟ!

ರಾಜ್ಯಸ್ಥಾನ ಸರ್ಕಾರ ಸಹ ಇನ್ನೇನು ಎರಡು ತಿಂಗಳಲ್ಲಿ ಬಿದ್ದು ಹೋಗುತ್ತೆ. ಕಾಂಗ್ರೆಸ್ ನಲ್ಲಿ ಇರೋರೆಲ್ಲ ಒಂದು ಜೈಲ್ ನಲ್ಲಿ ಇದ್ದಾರೆ ಇಲ್ಲ ಬೇಲ್ ನಲ್ಲಿ ಇದ್ದಾರೆ. ಭ್ರಷ್ಟಾಚಾರ ಮಾಡಿ ಮಾಡಿ ಎಲ್ಲರೂ ಬೇಲ್ ತಕೊಂಡು ಬದುಕುತ್ತಿದ್ದಾರೆ. ಎಲೆಕ್ಷನ್ ಕಳೆದ ಮೇಲೆ ಎಲ್ರೂ ಮತ್ತೆ ಜೈಲ್ ಗೆ ಹೋಗುತ್ತಾರೆ. ಕನಕಪುರ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿರುವ ಸಚಿವ ಆರ್ ಅಶೋಕ್, ನಿನ್ನೆ ಕೂಡ ಕನಕಪುರದಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದೆ. ಪ್ರಚಾರ ಕಾರ್ಯ ಚೆನ್ನಾಗಿ ನಡೀತಾ  ಇದೆ ಒಳ್ಳೆಯ ಹವಾ ಇದೆ.

ತೆನೆ ಹೊಲದಲ್ಲಿ, ಕಮಲ ಕೊಳದಲ್ಲಿ, ಕಾಂಗ್ರೆಸ್‌ ಅಧಿಕಾರದಲ್ಲಿ: ಡಿ.ಕೆ.ಶಿ

ನಾವು ಒಳ್ಳೆಯ ಫೈಟ್ ಕೊಡ್ತಾ ಇದ್ದೇವೆ. ಅವ್ರು ಕಳೆದ 50 ವರ್ಷದಲ್ಲಿ ಫೈಟೇ ಇಲ್ಲ ಅಂತ ಹೇಳ್ತಾ ಇದ್ದರು. ಅಲ್ಲಿ‌ನ ಕುಂತತ್ರ ರಾಜಕಾರಣ, ಗೂಂಡಗಿರಿ ರಾಜಕಾರಣ ಹೋಗಬೇಕು. ಅದಕ್ಕೆ ಜ‌ನ ನನಗೆ ಬೆಂಬಲ ನೀಡುತ್ತಿದ್ದಾರೆ. ಇದೇ ಎಂಟನೇ ತಾರೀಖು ಅಮಿತ್ ಶಾ ಅವರು ದೊಡ್ಡ ಮಟ್ಟದ ರೋಡ್ ಶೋನಲ್ಲಿ ಪಾಲ್ಗೊಳಲ್ಲಿದ್ದಾರೆ. ಆ ಮೂಲಕ ಬಿಜೆಪಿಯನ್ನು ಆಯ್ಕೆ ಮಾಡಿದರೆ ನಮಗೆ ರಕ್ಷೆ ಸಿಗುತ್ತದೆ ಅನ್ನುವ ಭರವಸೆ ಜನರಲ್ಲಿ ತರಲಿದ್ದೇವೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ
ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ