ಸಿದ್ದರಾಮಯ್ಯ ಮಾಡಿದ ಪಾಪದಿಂದ ನಾನು ಕಾಂಗ್ರೆಸ್‌ ಬಿಟ್ಟೆ: ಸಚಿವ ಸುಧಾಕರ

By Kannadaprabha NewsFirst Published Jan 25, 2023, 1:45 AM IST
Highlights

 ಸಿದ್ದರಾಮಯ್ಯನವರು ಜನತಾದಳದಲ್ಲಿದ್ದು, ಎಲ್ಲ ಬಗೆಯ ಅಧಿಕಾರ ಅನುಭವಿಸಿದ ಬಳಿಕ, ಅಧಿಕಾರದ ಆಸೆಗಾಗಿ ಕಾಂಗ್ರೆಸ್‌ಗೆ ಬಂದರು. ಇವರು ಮಾಡಿದ ಪಾಪದ ಕೆಲಸದಿಂದಾಗಿಯೇ ನಾನು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬಂದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಚಿಕ್ಕಬಳ್ಳಾಪುರ (ಜ.25) : ಸಿದ್ದರಾಮಯ್ಯನವರು ಜನತಾದಳದಲ್ಲಿದ್ದು, ಎಲ್ಲ ಬಗೆಯ ಅಧಿಕಾರ ಅನುಭವಿಸಿದ ಬಳಿಕ, ಅಧಿಕಾರದ ಆಸೆಗಾಗಿ ಕಾಂಗ್ರೆಸ್‌ಗೆ ಬಂದರು. ಇವರು ಮಾಡಿದ ಪಾಪದ ಕೆಲಸದಿಂದಾಗಿಯೇ ನಾನು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬಂದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಚುನಾವಣೆಯಲ್ಲಿ ಗೆದ್ದ ಬಳಿಕ, ಅನೈತಿಕವಾಗಿ ಜೆಡಿಎಸ್‌ ಜೊತೆ ಸೇರಿ ಸರ್ಕಾರ ರಚಿಸಲು ನಮ್ಮನ್ನು ಬಲಿಪಶು ಮಾಡಿದರು. ಈಗ ‘ಪ್ರಜಾಧ್ವನಿ’ ಯಾತ್ರೆಯ ಹೆಸರಿನಲ್ಲಿ ನನ್ನ ವಿರುದ್ಧ ಪ್ರಚಾರ ಸಭೆ ಮಾಡಿದ್ದಾರೆ. ಆದರೆ, ನಾನು ಮಾಡಿದ ಆರೋಪಗಳಿಗೆ ಒಂದೇ ಒಂದು ಉತ್ತರ ನೀಡಲು ಕಾಂಗ್ರೆಸ್‌ ನಾಯಕರಿಗೆ ಸಾಧ್ಯವಾಗಿಲ್ಲ ಎಂದರು.

ಸ್ತ್ರೀಶಕ್ತಿ ಸಾಲಮನ್ನಾ; ರೈತರು, ಸ್ತ್ರೀಶಕ್ತಿಗೆ ಸಾಲ ಮೊತ್ತ ಹೆಚ್ಚಳ

ನನಗೆ ಕಾಂಗ್ರೆಸ್‌ ಟಿಕೆಟ್‌ ದೊರೆಯುವಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇ ಇಲ್ಲ. ನನಗೆ 2013ರಲ್ಲಿ ಟಿಕೆಟ್‌ ಕೊಡಿಸಿದ್ದು ನನ್ನ ರಾಜಕೀಯ ಗುರುಗಳಾದ ಎಸ್‌.ಎಂ.ಕೃಷ್ಣ ಹಾಗೂ ಡಾ.ಜಿ.ಪರಮೇಶ್ವರ್‌. ನಾನು ಸಿದ್ದರಾಮಯ್ಯ ಬಳಿ ಟಿಕೆಟ್‌ಗಾಗಿ ಸಹಾಯ ಕೇಳಿಯೇ ಇಲ್ಲ. ಶಾಸಕನಾದ ಬಳಿಕ ನನ್ನನ್ನು ವಿಶ್ವಾಸದಿಂದ ನೋಡಿದ್ದಾರೆ. ಆಗ ನಾನೂ ಅವರನ್ನು ಸಮರ್ಥನೆ ಮಾಡಿದ್ದೆ. ಆದರೆ, ತಪ್ಪು ಮಾಡಿದಾಗ ಅದನ್ನು ನೇರವಾಗಿ ಖಂಡಿಸಿದ್ದೇನೆ ಎಂದರು.

ಸಿದ್ದರಾಮಯ್ಯ ಜನತಾದಳದಲ್ಲಿದ್ದಾಗ ಉಪಮುಖ್ಯಮಂತ್ರಿಯಾಗಿದ್ದರು. ಅಂದ ಮೇಲೆ ಕಾಂಗ್ರೆಸ್‌ಗೆ ಏಕೆ ಬಂದರು, ಆಶಯಕ್ಕಾ?, ಬದ್ಧತೆಗಾ?. ಇವರು ಮಾತ್ರ ಬಹಳ ಪವಿತ್ರರು, ನಾವೆಲ್ಲರೂ ಅಪವಿತ್ರರಾ?. ಇಷ್ಟುವಯಸ್ಸಾಗಿರುವವರೇ ಹೀಗೆ ಮಾಡುವಾಗ, ಯುವಕರಾದವರು ನಾವೇನು ಮಾಡಬೇಕು?. ಜಿಲ್ಲೆಗೆ ಮೆಡಿಕಲ್‌ ಕಾಲೇಜ್‌ ತಂದವರು ಯಾರೆಂದು ಚಿಕ್ಕಮಕ್ಕಳನ್ನು ಕೇಳಿದರೂ ಹೇಳುತ್ತಾರೆ ಎಂದರು.

ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಗೇ ಅಧಿಕಾರ : ಅರುಣ್‌ಸಿಂಗ್‌

‘ಹೇಗಾದರೂ ಮಾಡಿ ಸುಧಾಕರ್‌ ಅವರನ್ನು ಸೋಲಿಸಿ, ದಮ್ಮಯ್ಯ’ ಎಂದು ಸಿದ್ದರಾಮಯ್ಯನವರು ಅಂಗಲಾಚುತ್ತಿದ್ದಾರೆ. ನನ್ನನ್ನು ಸೋಲಿಸಲು ಕರಿ ಚಿರತೆಯನ್ನು ಕರೆ ತರುವುದಾಗಿ ಹೇಳುತ್ತಿದ್ದಾರೆ. ಇದು ಕರಿ ಚಿರತೆಯಲ್ಲ, ಕಳ್ಳ ಚಿರತೆ. ದಲಿತ ಎಂದು ಬೋಗಸ್‌ ಪ್ರಮಾಣ ಪತ್ರ ನೀಡಿ, ಐದು ವರ್ಷ ಶಾಸಕನಾಗಿದ್ದವರನ್ನು ಚಿಕ್ಕಬಳ್ಳಾಪುರದ ಜನತೆ ಸುಮ್ಮನೆ ಬಿಡುತ್ತಾರೆಯೇ?. ಇಂತವರು ಹತ್ತು ಜನ ಬರಲಿ, ನಾನು ಹೆದರುವುದಿಲ್ಲ ಎಂದು ಕಿಡಿ ಕಾರಿದರು.

click me!