ಎಲೆಕ್ಷನ್‌ಗೆ ಸಿದ್ಧರಾಗಿ: ಲೋಕಸಭೆ ಚುನಾವಣೆಗೆ ಈಗಲೇ ಪ್ರಧಾನಿ ರಣಕಹಳೆ

Published : Jan 18, 2023, 03:00 AM IST
ಎಲೆಕ್ಷನ್‌ಗೆ ಸಿದ್ಧರಾಗಿ: ಲೋಕಸಭೆ ಚುನಾವಣೆಗೆ ಈಗಲೇ ಪ್ರಧಾನಿ ರಣಕಹಳೆ

ಸಾರಾಂಶ

ದಿಲ್ಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಯಶಸ್ವಿ ತರೆ, ಯವಸಮೂಹ, ಸಮಾಜದ ಎಲ್ಲಾ ವರ್ಗಗಳನ್ನು ತಲುಪುವ ಯತ್ನ ಮಾಡಿ, ‘ಅಮೃತ ಕಾಲ’ವನ್ನು ‘ಕರ್ತವ್ಯದ ಕಾಲ’ವಾಗಿ ಬದಲಾಯಿಸಿ ಅಭಿವೃದ್ಧಿ ಮಾಡಿ: ನರೇಂದ್ರ ಮೋದಿ. 

ನವದೆಹಲಿ(ಜ.18):  2024ರ ಲೋಕಸಭಾ ಚುನಾವಣೆಗೆ ಬಿಜೆಪಿಯ ರಣಕಹಳೆ ಮೊಳಗಿಸಿರುವ ಪ್ರಧಾನಿ ನರೇಂದ್ರ ಮೋದಿ, ಇನ್ನು ಕೇವಲ 400 ದಿನ ಮಾತ್ರವೇ ಬಾಕಿ ಇದೆ. ಮತದಾರರನ್ನು ತಲುಪಲು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಇನ್ನಷ್ಟು ಶ್ರಮ ಪಡಬೇಕು. ಉಳಿದ ಸಮಯದಲ್ಲಿ ನಾವು ಮತದಾರರಿಗೆ ಸಾಧ್ಯವಿರುವ ಎಲ್ಲಾ ಸೇವೆ ಮಾಡಬೇಕು, ಈ ಮೂಲಕ ಹೊಸ ಇತಿಹಾಸ ಸೃಷ್ಟಿಸಲು ಮುಂದಾಗಬೇಕು ಎಂದು ಕರೆ ಕೊಟ್ಟಿದ್ದಾರೆ.

ಇಲ್ಲಿ ಮಂಗಳವಾರ ಮುಕ್ತಾಯಗೊಂಡ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ‘ಗಡಿ ಭಾಗ ಸೇರಿದಂತೆ ಗ್ರಾಮಗಳಲ್ಲಿ ಸಂಘಟನೆಯನ್ನು ಬಲಪಡಿಸಲು ಪಕ್ಷ ಹೆಚ್ಚು ಗಮನ ಕೊಡಬೇಕು. ಪಕ್ಷದ ನಾಯಕರು, ಸಮಾಜದ ಎಲ್ಲಾ ವರ್ಗಗಳ ಜನರನ್ನು ತಲುಪಬೇಕು. ಬಿಜೆಪಿ ಇದೀಗ ಕೇವಲ ರಾಜಕೀಯ ಆಂದೋಲನವಾಗಿ ಉಳಿದಿಲ್ಲ, ಬದಲಾಗಿ ಜನರ ಆರ್ಥಿಕ-ಸಾಮಾಜಿಕ ಕಲ್ಯಾಣದ ಗುರಿಯೊಂದಿಗೆ ಸಾಮಾಜಿಕ ಆಂದೋಲನವಾಗಿ ಬದಲಾಗಿದೆ. ನಾವೀಗ ‘ಅಮೃತ ಕಾಲ’ದಲ್ಲಿ ಇದ್ದೇವೆ. ಅದನ್ನು ‘ಕರ್ತವ್ಯ ಕಾಲ’ಕ್ಕೆ ಕೊಂಡೊಯ್ದಾಗ ಮಾತ್ರವೇ ಅಭಿವೃದ್ಧಿಯಲ್ಲಿ ಹೊಸ ಶಖೆ ಬರೆಯಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖವಾಗಬೇಕು’ ಎಂದು ಕರೆಕೊಟ್ಟರು.

ಬಿಎಸ್‌ವೈ ಜತೆ ಮೋದಿ ಮಾತುಕತೆ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಡೀತಾ ಚರ್ಚೆ..?

ಇದೇ ವೇಳೆ ‘ಈ ಬಾರಿ 18-25ರ ವಯೋಮಾನದ ಯುವಸಮೂಹದ ಮೇಲೆ ಹೆಚ್ಚಿನ ಗಮನ ಹರಿಸಬೇಕು. ಕಾರಣ, ಅವರಿಗೆ ಇತಿಹಾಸದ ಹೆಚ್ಚಿನ ಅರಿವು, ಹಿಂದಿನ ಸರ್ಕಾರಗಳ ದುರಾಡಳಿತ ಹಾಗೂ ನಾವು ಉತ್ತಮ ಆಡಳಿತದ ಕಡೆಗೆ ಹೇಗೆ ಹೆಜ್ಜೆ ಹಾಕುತ್ತಿದ್ದೇವೆ ಎಂಬುದರ ಅರಿವು ಇರುವುದಿಲ್ಲ. ಹೀಗಾಗಿ ಅವರಿಗೆ ನಾವು ಈ ವಿಷಯದ ಅರಿವು ಮೂಡಿಸಿ, ಉತ್ತಮ ಆಡಳಿತಕ್ಕಾಗಿ ಪ್ರಜಾಸತಾತ್ಮಕವಾಗಿ ಮಾರ್ಗದಲ್ಲಿ ಹೇಗೆ ಹೊಸ ಆಡಳಿತ ಭಾಗವಾಗಬಹುದು ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಅಷ್ಟುಮಾತ್ರವಲ್ಲ, ಚುನಾವಣಾ ದೃಷ್ಟಿಕೋನವನ್ನು ಬದಿಗೊತ್ತಿ ಅಲ್ಪಸಂಖ್ಯಾತ ಬೋಹ್ರಾ, ಪಸ್ಮಂದಾ ಮತ್ತು ಸಿಖ್‌ ಸಮುದಾಯವನ್ನು ತಲುಪುವ ಯತ್ನ ಮಾಡಬೇಕು’ ಎಂದು ಕರೆಕೊಟ್ಟರು. 2 ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಕ್ಷದ ಹಿರಿಯ ನಾಯಕರು, ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಸೇರಿ 350ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ