'ದ್ಹನಿ ಎತ್ತದಿದ್ರೆ ಮೂಲೆಗೆ ಕೂರಿಸ್ತಾರೆ..' ಮಾಜಿ ಸಚಿವೆ ಮೋಟಮ್ಮ ಸಿಎಂ ಡಿಕೆಶಿ ವಿರುದ್ಧ ಗರಂ ಆಗಿದ್ಯಾಕೆ?

Published : Sep 04, 2026, 04:16 PM IST
Former minister Motamma

ಸಾರಾಂಶ

ಚಿಕ್ಕಮಗಳೂರಿನಲ್ಲಿ ನಡೆದ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಮಾಜಿ ಸಚಿವೆ ಮೋಟಮ್ಮ, ನೂತನ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡದಿರುವುದಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ರಾಜಕೀಯ ಮತ್ತು ಮನೆಯಲ್ಲಿ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಾಗಿ ಧ್ವನಿ ಎತ್ತಬೇಕು ಎಂದರು.

ಚಿಕ್ಕಮಗಳೂರು (ಸೆ.4): ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಬಳಿಕ ಡಿಕೆ ಶಿವಕುಮಾರ ನೇತೃತ್ವದ ರಚನೆಯಾದ ನೂತನ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಗುತ್ತೆ ಎಂಬ ನಿರೀಕ್ಷೆಯಿತ್ತು ಆದರೆ ಡಿಕೆಶಿ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸಚಿವ ಸ್ಥಾನ ನೀಡದಿರುವುದು ಪರೋಕ್ಷವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ಮಹಿಳೆಯರು ಧ್ವನಿ ಎತ್ತಬೇಕು ಇಲ್ಲದಿದ್ರೆ ಕೇರ್ ಮಾಡಲ್ಲ

ಇಂದು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ನಡೆದ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಮೋಟಮ್ಮ ಅವರು, ಮಹಿಳೆಯರು ಗಟ್ಟಿ, ಸಮರ್ಥರು ಅಂತಾ ತೋರಿಸದೇ ಇದ್ರೆ ಮೂಲೆಯಲ್ಲಿ ಕೂರಿಸ್ತಾರೆ. ನಮಗೆ ಅವಕಾಶ ಕೊಡಬೇಕೆಂದು ನೀವೆಲ್ಲ ಒಟ್ಟಾಗಿ ಒಗ್ಗಟ್ಟಾಗಿ ಮಾತನಾಡಬೇಕೆಂದು ನಾನು ಲಕ್ಷ್ಮಿ ಹೆಬ್ಬಾಳ್ಕರ್ ಗೆ ಹೇಳಿದ್ದೆ. ಸಚಿವ ಸ್ಥಾನ ನನಗೆ ಅಥವಾ ನಿನಗೆ ಅದು ಆಮೇಲೆ ಮೊದಲು ಮಹಿಳೆಯರಿಗೆ ಸಚಿವ ಸ್ಥಾನ ಬೇಕು ಅಂತಾ ಧ್ವನಿ ಎತ್ತಬೇಕು ಇಲ್ಲದಿದ್ರೆ ಕೇರ್‌ ಮಾಡಲ್ಲ ಎಂದರು.

ಪರೋಕ್ಷವಾಗಿ ಡಿಕೆಶಿ ವಿರುದ್ಧ ಅಸಮಾಧಾನ

ನಾವು ರಾಜಕಾರಣದಲ್ಲಾದ್ರೂ, ಮನೆಯಲ್ಲಾದ್ರೂ ಗಟ್ಟಿಯಾಗಿ ಮಾತನಾಡದಿದ್ರೆ ಯಾರು ತಾನೇ ಗುರುತಸ್ತಾರೆ? ಮನೆಯಲ್ಲೂ ಹೆಣ್ಣುಮಕ್ಕಳು ಗಟ್ಟಿ ಮಾಡದಿದ್ರೆ ಮಾವ ಗಂಡ ಯಾರೂ ಗುರುತಿಸಲ್ಲ, ಮೂಲೆಗೆ ಕೂರಿಸ್ತಾರೆ. ಹಾಗೆ ರಾಜಕಾರಣದಲ್ಲೂ ಮಹಿಳೆಯರು ತಮ್ಮ ಹಕ್ಕು, ಸ್ಥಾನಮಾನಕ್ಕಾಗಿ ಒಗ್ಗಟ್ಟಾಗಿ ಧ್ವನಿ ಎತ್ತಬೇಕು ಎಂದರು. ಪರೋಕ್ಷವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಜೆಪಿ ಪಾದಯಾತ್ರೆಗೆ ತಿರುಗೇಟು ನೀಡಲು ಕೈ ಬಿಗ್ ಪ್ಲಾನ್! ಈ ಒಂದು ಕಾರ್ಯಕ್ರಮಕ್ಕೆ ಇಡೀ ಸಚಿವ ಸಂಪುಟವೇ ಬಳ್ಳಾರಿಗೆ?
BJP Padayatra Karatagi: ಬಿಜೆಪಿ ಪಾದಯಾತ್ರೆಗೆ ಭರ್ಜರಿ ಸ್ವಾಗತ; ಇಂದು ಕಾರಗಿಯಲ್ಲಿ ನಡೆಯುವ ಕಾರ್ಯಕ್ರಮಗಳೇನು?