
ಬೆಂಗಳೂರು(ಜು.06): ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ದಿನದಿಂದ ದಿನಕ್ಕೆ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದ ಮೇಲೆ ಪ್ರೀತಿ ಹೆಚ್ಚಾಗುತ್ತಿದ್ದು, ಸೋಮವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ನಾನು ‘ಚಾಮರಾಜಪೇಟೆ ಅಳಿಯ’ ಎಂದಿದ್ದಾರೆ.
ಬಾದಾಮಿ ಕ್ಷೇತ್ರ ತ್ಯಜಿಸಿ ಮುಂದಿನ ಚುನಾವಣೆಗೆ ಸಿದ್ದರಾಮಯ್ಯ ಚಾಮರಾಜಪೇಟೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿರುವ ಬೆನ್ನಲ್ಲೇ ನಾನು ‘ಚಾಮರಾಜಪೇಟೆ ಅಳಿಯ’ ಎಂದಿರುವುದು ಕುತೂಹಲ ಕೆರಳಿಸಿದೆ.
ಬೆಂಗಳೂರಿನಲ್ಲಿರುವ ಮಲೆಮಹದೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ‘ಚಾಮರಾಜಪೇಟೆ 2ನೇ ಮುಖ್ಯ ರಸ್ತೆಯಲ್ಲಿ ನಮ್ಮ ಮಾವನವರ ಮನೆ ಇತ್ತು. ಈಗಲೂ ಬಾಡಿಗೆಗೆ ಕೊಟ್ಟಿದ್ದಾರೆ. ಹೀಗಾಗಿ ನಾನು ಚಾಮರಾಜಪೇಟೆ ಅಳಿಯ’ ಎಂದು ಹೇಳಿದರು.
‘ನಾನು ಶಾಸಕನಾಗುವ ಮೊದಲೂ ಸಹ ಇಲ್ಲಿಗೆ ಬರುತ್ತಿದ್ದೆ. ಹೀಗಾಗಿ ಈ ಭಾಗದ ಜನರೆಲ್ಲಾ ನನ್ನ ನೋಡಿದ್ದಾರೆ. ಇದು ನಮ್ಮ ಊರು. ಇಲ್ಲಿನ ಜನ ನಮ್ಮ ಊರಿನ ಜನ ಇದ್ದ ಹಾಗೆ. ಅಲ್ಲದೆ ಪ್ರತಿ ಶಿವರಾತ್ರಿಗೂ ಬೆಂಗಳೂರಿನ ಚಾಮರಾಜಪೇಟೆಯ ಮಲೆ ಮಹದೇಶ್ವರ ದೇವಾಲಯಕ್ಕೆ ಬರುತ್ತೇನೆ. ಈ ಬಾರಿಯೂ ಕೊರೋನಾ ತೊಲಗಲಿ ಎಂದು ಮಲೆ ಮಹದೇಶ್ವರನಲ್ಲಿ ಪ್ರಾರ್ಥಿಸಿದ್ದೇನೆ’ ಎಂದರು.
ನಾನು ಶಾಸಕನಾಗುವ ಮೊದಲೂ ಸಹ ಚಾಮರಾಜಪೇಟೆಗೆ ಬರುತ್ತಿದ್ದೆ. ಹೀಗಾಗಿ ಈ ಭಾಗದ ಜನರೆಲ್ಲಾ ನನ್ನ ನೋಡಿದ್ದಾರೆ. ಇದು ನಮ್ಮ ಊರು. ಇಲ್ಲಿನ ಜನ ನಮ್ಮ ಊರಿನ ಜನ ಇದ್ದ ಹಾಗೆ. ಪ್ರತಿ ಶಿವರಾತ್ರಿಗೂ ಇಲ್ಲಿನ ಮಲೆ ಮಹದೇಶ್ವರ ದೇವಾಲಯಕ್ಕೆ ಬರುತ್ತೇನೆ.
- ಸಿದ್ದರಾಮಯ್ಯ, ವಿಪಕ್ಷ ನಾಯಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.