ಭ್ರಷ್ಟರ ವಿರು​ದ್ಧದ ಹೋರಾಟ ನಿಲ್ಲಲ್ಲ: ಸಚಿನ್‌ ಪೈಲಟ್‌

Published : Jun 12, 2023, 01:30 AM IST
ಭ್ರಷ್ಟರ ವಿರು​ದ್ಧದ ಹೋರಾಟ ನಿಲ್ಲಲ್ಲ: ಸಚಿನ್‌ ಪೈಲಟ್‌

ಸಾರಾಂಶ

ಯ​ವ​ಕರ ಉತ್ತಮ ಭವಿ​ಷ್ಯ​ಕ್ಕಾಗಿ ನಾನು ಹೋರಾ​ಡುವೆ. ದೇಶಕ್ಕೆ ಇಂದು ಯುವ​ಕರ ರಾಜ​ಕೀಯ ಬೇಕಿ​ದೆ’ ಎಂದರು. ಈ ಮೂಲಕ ಮುಖ್ಯ​ಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರ ಹುದ್ದೆಯ ಮೇಲೆ ತಮಗೆ ಕಣ್ಣಿದೆ ಎಂದು ಪರೋ​ಕ್ಷ​ವಾಗಿ ನುಡಿ​ದ​ ಸಚಿನ್‌ ಪೈಲಟ್‌ 

ಜೈಪುರ(ಜೂ.12):  ರಾಜ​ಸ್ಥಾನ ಮುಖ್ಯ​ಮಂತ್ರಿ ಅಶೋಕ್‌ ಗೆಹ್ಲೋಟ್‌ ವಿರುದ್ಧ ಕತ್ತಿ ಮಸೆ​ಯು​ತ್ತಿ​ರುವ ಕಾಂಗ್ರೆಸ್‌ ಮುಖಂಡ ಸಚಿನ್‌ ಪೈಲಟ್‌ ಅವರು ಭಾನು​ವಾರ ಹೊಸ ಪಕ್ಷ ಸ್ಥಾಪನೆ ಮಾಡ​ಲಿ​ದ್ದಾರೆ ಎಂಬ ವರ​ದಿಗಳು ಹುಸಿ​ಯಾ​ಗಿವೆ. ತಂದೆಯ ಪುಣ್ಯ​ಸ್ಮ​ರ​ಣೆ ವೇಳೆ ಮಾತ​ನಾ​ಡಿದ ಅವರು, ‘ಭ್ರಷ್ಟಾ​ಚಾ​ರದ ವಿರುದ್ಧದ ಹೋರಾಟ ನಿಲ್ಲಲ್ಲ. ನನ್ನ ಬೇಡಿ​ಕೆ​ಗಳು ಈಡೇ​ರು​ವ​ವ​ರೆಗೆ ನಾನು ಹಿಂದಡಿ ಇಡು​ವು​ದಿಲ್ಲ ಹಾಗೂ ಸ್ವಚ್ಛ ರಾಜ​ಕೀ​ಯವೇ ನನ್ನ ಆದ್ಯತೆ’ ಎಂದಿ​ದ್ದಾ​ರೆ.

ತಂದೆ ರಾಜೇಶ್‌ ಪೈಲಟ್‌ ಅವರ ಪುಣ್ಯ​ಸ್ಮ​ರಣೆ ನಿಮಿತ್ತ ಅವರ ಪುತ್ಥ​ಳಿ​ಯೊಂದನ್ನು ಅನಾ​ವ​ರಣ ಮಾಡಿದ ಪೈಲ​ಟ್‌, ​‘​ಯ​ವ​ಕರ ಉತ್ತಮ ಭವಿ​ಷ್ಯ​ಕ್ಕಾಗಿ ನಾನು ಹೋರಾ​ಡುವೆ. ದೇಶಕ್ಕೆ ಇಂದು ಯುವ​ಕರ ರಾಜ​ಕೀಯ ಬೇಕಿ​ದೆ’ ಎಂದರು. ಈ ಮೂಲಕ ಮುಖ್ಯ​ಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರ ಹುದ್ದೆಯ ಮೇಲೆ ತಮಗೆ ಕಣ್ಣಿದೆ ಎಂದು ಪರೋ​ಕ್ಷ​ವಾಗಿ ನುಡಿ​ದ​ರು

ಕರ್ನಾಟಕದಲ್ಲಿ ಸುಭದ್ರ ಸರ್ಕಾರ ರಚನೆ ಬೆನ್ನಲ್ಲೇ ಅಲುಗಾಡುತ್ತಿದೆ ರಾಜಸ್ಥಾನ ಕಾಂಗ್ರೆಸ್ ಸರ್ಕಾರ!

ಇದೇ ವೇಳೆ, ‘ನನ್ನ ದನಿ ದುರ್ಬಲ ಆಗಿಲ್ಲ. ನಾನು ಹಿಂದಡಿ ಇಡಲ್ಲ. ಸ್ವಚ್ಛ ರಾಜ​ಕೀ​ಯವೇ ನನ್ನ ಆದ್ಯ​ತೆ ಆಗಿದ್ದು, ಬೇಡಿಕೆ ಈಡೇ​ರು​ವ​ವ​ರ​ಗೆ ನಾನು ಸುಮ್ಮ​ನಿ​ರು​ವು​ದಿ​ಲ್ಲ’ ಎಂದರು. ಈ ಮೂಲಕ ಹಿಂದಿನ ವಸುಂಧರಾ ರಾಜೇ ನೇತೃ​ತ್ವದ ಬಿಜೆಪಿ ಸರ್ಕಾ​ರ​ದ ಭ್ರಷ್ಟಾ​ಚಾರ ಪ್ರಕ​ರ​ಣ​ಗಳ ತನಿಖೆ ನಡೆ​ಯ​ಬೇಕು ಎಂಬ ತಮ್ಮ ಹಿಂದಿನ ಬೇಡಿ​ಕೆ​ಯನ್ನು ಪರೋ​ಕ್ಷ​ವಾಗಿ ಉಲ್ಲೇಖಿ​ಸಿ​ದ​ರು.

ಇತ್ತೀ​ಚೆಗೆ, ಪೈಲಟ್‌ ತಂದೆಯ ಪುಣ್ಯ​ಸ್ಮ​ರಣೆ ದಿನ​ವಾದ ಜ.11ರಂದು ಹೊಸ ಪಕ್ಷ ಕಟ್ಟ​ಲಿ​ದ್ದಾ​ರೆ ಎಂದು ವರ​ದಿ​ಯಾ​ಗಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್‌ ವರಿ​ಷ್ಠರು ತಮ್ಮ ದೂತ​ರನ್ನು ಕಳಿಸಿ ಸಚಿನ್‌ ಪೈಲಟ್‌ ಹಾಗೂ ಅವರ ಬಣ​ ನಾಯ​ಕ​ರನ್ನು ಸಮಾ​ಧಾನ ಮಾಡಲು ಯತ್ನಿ​ಸಿ​ದ್ದರು. ಇದರ ಬೆನ್ನಲ್ಲೇ ಶುಕ್ರ​ವಾರ ಕಾಂಗ್ರೆಸ್‌ ಪ್ರಧಾನ ಕಾರ್ಯ​ದರ್ಶಿ ಕೆ.ಸಿ. ವೇಣು​ಗೋ​ಪಾಲ್‌ ಅವರು, ‘ಪೈ​ಲಟ್‌ ಕಾಂಗ್ರೆಸ್‌ ಬಿಡಲ್ಲ. ಹೊಸ ಪಕ್ಷ ಸ್ಥಾಪನೆ ಕೇವಲ ವದಂತಿ’ ಎಂದಿ​ದ್ದ​ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಸತಿ ಯೋಜನೆಗಳಿಗೆ ಸಹಾಯಧನ ಹೆಚ್ಚಳಕ್ಕೆ ಚಿಂತನೆ: ಸಚಿವ ಜಮೀರ್‌ ಅಹಮದ್‌
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ