ಕೋವಿಡ್‌ ಟೈಂನಲ್ಲಿ ಹೆಣದ ಮೇಲೆ ಹಣ ಹೊಡೆದ ಯಡಿಯೂರಪ್ಪರನ್ನ ಉಚ್ಚಾಟಿಸಿ: ಪ್ರಿಯಾಂಕ್ ಖರ್ಗೆ

Published : Nov 10, 2024, 07:43 AM IST
ಕೋವಿಡ್‌ ಟೈಂನಲ್ಲಿ ಹೆಣದ ಮೇಲೆ ಹಣ ಹೊಡೆದ ಯಡಿಯೂರಪ್ಪರನ್ನ ಉಚ್ಚಾಟಿಸಿ: ಪ್ರಿಯಾಂಕ್ ಖರ್ಗೆ

ಸಾರಾಂಶ

ಅಧಿಕಾರಿಗಳು ಕೊಟ್ಟ ಸಲಹೆಗಳನ್ನು ಕೂಡ ತಳ್ಳಿ ಹಾಕಿ ಅಕ್ರಮವಾಗಿ ಚೀನಾದಿಂದ ಪಿಪಿಇ ಕಿಟ್ ಖರೀದಿಸಿದ್ದಾರೆ. ಯಡಿಯೂರಪ್ಪ ಹಾಗೂ ಶ್ರೀರಾಮುಲು ಅವರ ಅಧಿಕಾರ ದುರುಪಯೋಗ ಮೈಕಲ್‌ ಕುನ್ಹಾ ಅವರ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಹೆಣದ ಮೇಲೆ ಹಣ ಹೊಡೆ ದಿರುವ ಇವರ ಬಗ್ಗೆ ಇನ್ನೂ ಸಾಕಷ್ಟು ವರದಿ ಬರುವುದು ಬಾಕಿಯಿದೆ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು(ನ.10):  ಲಜ್ಜೆಗೆಟ್ಟ ಬಿಜೆಪಿ ಸರ್ಕಾರದವರು ಅಧಿಕಾರಿಗಳ ಸಲಹೆ ಕೂಡ ತಳ್ಳಿ ಹಾಕಿ ಕೋರೋನಾ ವಿಚಾರದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ. ಹೆಣದ ಮೇಲೆ ಹಣ ಹೊಡೆದಿರುವುದು ಸಾಬೀತಾಗಿದ್ದು, ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಬಿ.ಎಸ್.ಯಡಿಯೂರಪ್ಪ ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ. 

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಧಿಕಾರಿಗಳು ಕೊಟ್ಟ ಸಲಹೆಗಳನ್ನು ಕೂಡ ತಳ್ಳಿ ಹಾಕಿ ಅಕ್ರಮವಾಗಿ ಚೀನಾದಿಂದ ಪಿಪಿಇ ಕಿಟ್ ಖರೀದಿಸಿದ್ದಾರೆ. ಯಡಿಯೂರಪ್ಪ ಹಾಗೂ ಶ್ರೀರಾಮುಲು ಅವರ ಅಧಿಕಾರ ದುರುಪಯೋಗ ಮೈಕಲ್‌ ಕುನ್ಹಾ ಅವರ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಹೆಣದ ಮೇಲೆ ಹಣ ಹೊಡೆ ದಿರುವ ಇವರ ಬಗ್ಗೆ ಇನ್ನೂ ಸಾಕಷ್ಟು ವರದಿ ಬರುವುದು ಬಾಕಿಯಿದೆ ಎಂದು ಹೇಳಿದರು.  

ವಕ್ಫ್ ವಿವಾದ: ಬಿಜೆಪಿಯವ್ರು ಗೋಸುಂಬೆಗಿಂತ ವೇಗವಾಗಿ ಬಣ್ಣ ಬದಲಿಸ್ತಾರೆ - ಪ್ರಿಯಾಂಕ್ ಖರ್ಗೆ

ಬಿಜೆಪಿಯವರಿಗೆ ನೈತಿಕತೆ ಇದ್ದರೆ ವಿಜಯೇಂದ್ರ ಅವರು ಹದಿನೈದು ನಿಮಿಷದಲ್ಲಿ ರಾಜೀನಾಮೆ ನೀಡಬೇಕು. ಯಡಿಯೂರಪ್ಪ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಬೇಕು ಎಂದು ಆಗ್ರಹಿಸಿದರು. 

ಹಗರಣದಲ್ಲಿ ಮೋದಿಗೆ ಪಾಲು: 

ದೇಶದಲ್ಲಿ ಕಡಿಮೆ ಬೆಲೆಗೆ ಪಿಪಿಇ ಕಿಟ್ ಲಭ್ಯವಿದ್ದರೂ ಚೀನಾದಿಂದ 3 ಲಕ್ಷ ಕಿಟ್ ತರಿಸಿದ್ದಾರೆ. ಮೋದಿ ಅವರಿಗೂ ಇದರಲ್ಲಿ ಪಾಲು ಇದೆಯೇ? ಎಂದು ಪ್ರಶ್ನಿಸಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮತ್ತೆ ಟಿಪ್ಪು ಜಯಂತಿ ವಿವಾದ ಭುಗಿಲು
ಉ.ಕ. ಚರ್ಚೆ ವೇಳೆ ವಿಪಕ್ಷಕ್ಕೆ ತಿರುಗೇಟು: ಸಿಎಲ್‌ಪಿ ನಿರ್ಧಾರ