ಬಿಜೆಪಿ ಸರ್ಕಾರದಿಂದ ಕುಡಿಯುವ ನೀರಲ್ಲೂ ರಾಜಕೀಯ: ಡಾ.ಜಿ.ಪರಮೇಶ್ವರ್‌

By Govindaraj SFirst Published Dec 20, 2022, 12:30 AM IST
Highlights

ಕುಡಿಯುವ ನೀರಿನಲ್ಲೂ ಬಿಜೆಪಿ ಸರ್ಕಾರ ರಾಜಕೀಯ ಮಾಡುತ್ತಿದೆ. ರಾಜ್ಯ ಮತ್ತು ತುಮಕೂರು ಜಿಲ್ಲೆಯಲ್ಲಿ ಎಲ್ಲೂ ಇಲ್ಲದ ಬೆಸ್ಕಾಂ ಇಲಾಖೆಯ ಕಾರ್ಯಚರಣೆ ಕೊರಟಗೆರೆಯಲ್ಲಿ ಮಾತ್ರ ಏಕೆ. ಶುದ್ದ ಕುಡಿಯುವ ನೀರಿಲ್ಲದೇ ಬಡಜನರ ಆರೋಗ್ಯಕ್ಕೆ ಸಮಸ್ಯೆ ಆದರೇ ಅದಕ್ಕೆ ರಾಜ್ಯ ಸರಕಾರವೇ ಜವಾಬ್ದಾರಿ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಆಕ್ರೋಶ ವ್ಯಕ್ತಪಡಿಸಿದರು.

ಕೊರಟಗೆರೆ (ಡಿ.20): ಕುಡಿಯುವ ನೀರಿನಲ್ಲೂ ಬಿಜೆಪಿ ಸರ್ಕಾರ ರಾಜಕೀಯ ಮಾಡುತ್ತಿದೆ. ರಾಜ್ಯ ಮತ್ತು ತುಮಕೂರು ಜಿಲ್ಲೆಯಲ್ಲಿ ಎಲ್ಲೂ ಇಲ್ಲದ ಬೆಸ್ಕಾಂ ಇಲಾಖೆಯ ಕಾರ್ಯಚರಣೆ ಕೊರಟಗೆರೆಯಲ್ಲಿ ಮಾತ್ರ ಏಕೆ. ಶುದ್ದ ಕುಡಿಯುವ ನೀರಿಲ್ಲದೇ ಬಡಜನರ ಆರೋಗ್ಯಕ್ಕೆ ಸಮಸ್ಯೆ ಆದರೇ ಅದಕ್ಕೆ ರಾಜ್ಯ ಸರಕಾರವೇ ಜವಾಬ್ದಾರಿ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಆಕ್ರೋಶ ವ್ಯಕ್ತಪಡಿಸಿದರು.

ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ಬೂತ್‌ ಸಮಿತಿಯ ಸರ್ವಸದಸ್ಯರ ಸಭೆಯ ನಂತರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಡಜನರಿಂದ ವಸೂಲಿ ಮಾಡಿದ ಕುಡಿಯುವ ನೀರಿನ ಹಣ ಎಲ್ಲಿ ಹೋಯ್ತು. ಕುಡಿಯುವ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ರಾಜಕಾರಣ ಮಾಡುತ್ತಿದೆ. ಗುತ್ತಿಗೆದಾರ ವಸೂಲಿ ಮಾಡಿರುವ ನೀರಿನ ಹಣದ ವಿಚಾರದಲ್ಲಿ ಸರಕಾರ ತನಿಖೆ ನಡೆಸಲಿ. ಬೆಸ್ಕಾಂ ಇಲಾಖೆ ತಕ್ಷಣ ನೀರಿನ ಘಟಕಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹ ಮಾಡಿದರು.

Latest Videos

ಕಾಂಗ್ರೆಸ್‌ನಲ್ಲಿ ಜಾತಿ ಆಧಾರಿತ ಸಿಎಂ ಆಯ್ಕೆ ಇಲ್ಲ: ಡಾ.ಜಿ.ಪರಮೇಶ್ವರ್‌

ಪರ್ಸೆಂಟೇಜ್‌ ಸರಕಾರ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಚಾರ ತಾಂಡವ, ಪೇಟ್ರೊಲ್‌-ಡಿಸೇಲ್‌ ಏರಿಕೆ, ಗ್ಯಾಸ್‌ ಬೆಲೆ ಏರಿಕೆ ಮತ್ತು ರೌಡಿಸಂಗೆ ಆದ್ಯತೆ ನೀಡುತ್ತಿರುವ ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರಕಾರದ ವೈಫಲ್ಯವನ್ನು ಗ್ರಾಮೀಣ ಜನರಿಗೆ ತಲುಪಿಸುವ ಕೆಲಸವನ್ನು ಬೂತ್‌ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರು ಸಕ್ರಿಯವಾಗಿ ಮಾಡಲಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ ಜಯಕುಮಾರ್‌, ಕೆಪಿಸಿಸಿ ಕಾರ್ಯದರ್ಶಿ ದಿನೇಶ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರ್‌ಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಅರಕೆರೆಶಂಕರ್‌, ಅಶ್ವತ್ಥನಾರಾಯಣ್‌, ಯುವಧ್ಯಕ್ಷ ವಿನಯ್‌ಕುಮಾರ್‌, ಮುಖಂಡರಾದ ಬಲರಾಮಯ್ಯ, ಓಬಳರಾಜು, ಕೆಂಪರಾಮಯ್ಯ, ಕುಮಾರ್‌, ವೆಂಕಟಬಾಬು, ಅರವಿಂದ್‌, ರವಿಕುಮಾರ್‌, ಸೇರಿದಂತೆ ಇತರರು ಇದ್ದರು.

58 ಸಾವಿರ ಸದಸ್ಯತ್ವ ಡಿಜಿಟಲ್‌ ಕಾರ್ಡು: ಕೊರಟಗೆರೆ ಕ್ಷೇತ್ರದ 242ಬೂತ್‌ನಲ್ಲಿ ಕಾಂಗ್ರೆಸ್‌ ಸದಸ್ಯತ್ವ ನೊಂದಣಿ ಆಗಿರುವ ಸದಸ್ಯರಿಗೆ ಭಾವಚಿತ್ರ ಇರುವಂತಹ 58ಸಾವಿರ ಡಿಜಿಟಲ್‌ ಕಾರ್ಡು ವಿತರಣೆ ಮಾಡಿದ್ದೇವೆ. ಕಾಂಗ್ರೆಸ್‌ ಪಕ್ಷದಿಂದ ತಳಮಟ್ಟದಿಂದ ಸಂಘಟನೆಯ ಅಭಿಯಾನ ನಡೆಯಲಿದೆ. ತುಮಕೂರು ಜಿಲ್ಲೆಯಲ್ಲಿ ಕೊರಟಗೆರೆ ಕ್ಷೇತ್ರವು ಮೊದಲನೇ ಸ್ಥಾನದಲ್ಲಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರ್‌ ಮಾಹಿತಿ ನೀಡಿದರು.

ಅದೃಷ್ಟವಿದ್ದರೆ ಮುಂದಿನ ಸಲ ಸಿಎಂ ಆಗುವೆ: ಡಾ.ಜಿ.ಪರಮೇಶ್ವರ್‌

ರಾಜ್ಯ ಸರಕಾರದ ಮೀಸಲಾತಿ ಹೆಚ್ಚಳದ ಆದೇಶವನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ಲೋಕಾಸಭೆಯ ಸದನದಲ್ಲೇ ಬಿಜೆಪಿ ಕೇಂದ್ರ ಸರಕಾರದ ಸಚಿವರೇ ಮೀಸಲಾತಿ ಹೆಚ್ಚಳದ ತಿರಸ್ಕಾರದ ಮಾಹಿತಿ ನೀಡಿದ್ದಾರೆ. ರಾಜ್ಯ ಸರಕಾರ ಮೀಸಲಾತಿ ಹೆಚ್ಚಳವನ್ನು ಸಂವಿಧಾನ ಬದ್ದವಾಗಿ ಮಾಡದೇ ರಾಜಕೀಯ ಪ್ರೇರಿತವಾಗಿ ಮಾಡಿದೆ.
-ಡಾ.ಜಿ.ಪರಮೇಶ್ವರ್‌. ಶಾಸಕ. ಕೊರಟಗೆರೆ

click me!