ಗ್ಯಾರಂಟಿಗೆ ಲಂಚ ಕೊಡಬೇಡಿ, ಯಾರಾದರೂ ಕೇಳಿದರೆ ನನಗೇ ದೂರಿ, ಒದ್ದು ಒಳಗೆ ಹಾಕುತ್ತೇವೆ: ಡಿಕೆಶಿ

Published : Jun 04, 2023, 03:00 AM IST
ಗ್ಯಾರಂಟಿಗೆ ಲಂಚ ಕೊಡಬೇಡಿ, ಯಾರಾದರೂ ಕೇಳಿದರೆ ನನಗೇ ದೂರಿ, ಒದ್ದು ಒಳಗೆ ಹಾಕುತ್ತೇವೆ: ಡಿಕೆಶಿ

ಸಾರಾಂಶ

‘ಕಾಂಗ್ರೆಸ್‌ ನೇತೃ​ತ್ವದ ರಾಜ್ಯ ಸರ್ಕಾರ ಜಾರಿ ಮಾಡು​ತ್ತಿ​ರುವ ಗ್ಯಾರಂಟಿ​ ಯೋಜನೆ ಜಾರಿಗೆ ಯಾರಾ​ದರೂ ಲಂಚ ಕೇಳಿ​ದರೆ ನೇರ​ವಾಗಿ ನನಗೆ ದೂರು ನೀಡಬ​ಹುದು. ಅಂತ​ಹ​ವ​ರ​ನ್ನು ಒದ್ದು ಒಳಗೆ ಹಾಕು​ತ್ತೇವೆ’ ಎಂದು ಉಪ​ಮು​ಖ್ಯ​ಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ಎಚ್ಚ​ರಿಕೆ ನೀಡಿ​ದ್ದಾರೆ.

ಹಾರೋ​ಹಳ್ಳಿ/ಕನ​ಕ​ಪುರ (ಜೂ.04): ‘ಕಾಂಗ್ರೆಸ್‌ ನೇತೃ​ತ್ವದ ರಾಜ್ಯ ಸರ್ಕಾರ ಜಾರಿ ಮಾಡು​ತ್ತಿ​ರುವ ಗ್ಯಾರಂಟಿ​ ಯೋಜನೆ ಜಾರಿಗೆ ಯಾರಾ​ದರೂ ಲಂಚ ಕೇಳಿ​ದರೆ ನೇರ​ವಾಗಿ ನನಗೆ ದೂರು ನೀಡಬ​ಹುದು. ಅಂತ​ಹ​ವ​ರ​ನ್ನು ಒದ್ದು ಒಳಗೆ ಹಾಕು​ತ್ತೇವೆ’ ಎಂದು ಉಪ​ಮು​ಖ್ಯ​ಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ಎಚ್ಚ​ರಿಕೆ ನೀಡಿ​ದ್ದಾರೆ. ಶನಿವಾರ ಇಡೀ ದಿನ ಸ್ವಕ್ಷೇತ್ರದಲ್ಲಿ ಕಾಲ ಕಳೆದ ಡಿಕೆಶಿ, ಕನಕಪುರ ಕ್ಷೇತ್ರವ್ಯಾಪ್ತಿಯ ಹಲವೆಡೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮತ​ದಾ​ರರು ಹಾಗೂ ಕಾಂಗ್ರೆಸ್‌ ಕಾರ್ಯ​ಕ​ರ್ತ​ರಿಗೆ ಕೃತಜ್ಞತೆ ಸಲ್ಲಿ​ಸಿದರು. ಈ ವೇಳೆ ಮಾತನಾಡಿ, ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ​ಗ​ಳನ್ನು ಇಡೀ ದೇಶ ಎದುರು ನೋಡು​ತ್ತಿದೆ. ಕಾಂಗ್ರೆಸ್‌ ಪಕ್ಷ ನುಡಿ​ದಂತೆ ನಡೆ​ದು ಐದು ಗ್ಯಾರಂಟಿ​ಗ​ಳನ್ನು ಈಡೇ​ರಿ​ಸಿದೆ. ಈ ಯೋಜ​ನೆ​ಗಳ ಫಲಾ​ನು​ಭ​ವಿ​ಯಾ​ಗಲು ಯಾರೂ ಲಂಚ ಕೊಡ​ಬೇ​ಕಾ​ಗಿಲ್ಲ ಎಂದ​ರು.

ಕನಕಪುರಕ್ಕೆ ಮೆಡಿಕಲ್‌ ಕಾಲೇಜು: ಕನಕಪುರ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡಲು ತೀರ್ಮಾನಿಸಿದ್ದೇನೆ. ಈ ಹಿಂದೆ ಈ ಕ್ಷೇತ್ರಕ್ಕೆ ಮೆಡಿಕಲ್‌ ಕಾಲೇಜು ಮಂಜೂರಾಗಿತ್ತು. ಆದರೆ, ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ರದ್ದು ಮಾಡಿ ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋದರು. ಕನ​ಕ​ಪು​ರಕ್ಕೆ ಆದ ಅನ್ಯಾಯ ಸರಿಪಡಿಸುವುದು ನನ್ನ ಮೊದಲ ಕೆಲಸ. ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜು ಸ್ಥಾಪನೆ ಸಂಬಂಧ ಮುಖ್ಯಮಂತ್ರಿ ಬಳಿ ಪ್ರಸ್ತಾಪ ಮಾಡಿ​ದ್ದೇನೆ. ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಿ ಕ್ಷೇತ್ರದ ಜನತೆಗೆ ಕೊಟ್ಟಮಾತನ್ನು ಉಳಿಸಿಕೊಳ್ಳು​ತ್ತೇನೆ ಎಂದರು. ಮುಂದಿನ ದಿನಗಳಲ್ಲಿ ಕನಕಪುರ ಹಾಗೂ ರಾಮನಗರ ಜಿಲ್ಲೆಗೆ ಪ್ರತಿ ವಾರ ಒಂದು ದಿನ ಮೀಸಲಿಡುತ್ತೇನೆ. ಇಲ್ಲಿ ಪ್ರತ್ಯೇಕ ಕಚೇರಿ ಆರಂಭಿಸುತ್ತೇನೆ ಎಂದು ಭರವಸೆ ನೀಡಿದರು.

ಹೃದಯ ರೋಗಿಗಳ ಸಂಖ್ಯೆ ಹೆಚ್ಚಳ ಆತಂಕಕಾರಿ ಬೆಳವಣಿಗೆ: ಡಾ.ಸಿ.ಎನ್‌.ಮಂಜುನಾಥ್‌

ಡಿಕೆಶಿಗೆ ತವರಲ್ಲಿ ಅದ್ದೂರಿ ಸ್ವಾಗತ: ಶನಿವಾರ ಇಡೀ ದಿನ ಸ್ವಕ್ಷೇತ್ರದಲ್ಲಿ ಕಾಲ ಕಳೆದ ಡಿಕೆಶಿಯವರು, ತಾಲೂ​ಕಿನ ಹಾರೋ​ಹಳ್ಳಿ, ಕಬ್ಬಾಳು, ಕಲ್ಲ​ಹಳ್ಳಿ, ಶಿವ​ನ​ಹಳ್ಳಿ, ಸಾತ​ನೂರು, ದೊಡ್ಡಾ​ಲ​ಹಳ್ಳಿ, ಕೋಡಿ​ಹಳ್ಳಿ ಹಾಗೂ ಕನ​ಕ​ಪುರ ನಗರ ಸೇರಿದಂತೆ ಕನಕಪುರ ಕ್ಷೇತ್ರವ್ಯಾಪ್ತಿಯ ಹಲವೆಡೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಬೆಳಗ್ಗೆ ಕಬ್ಬಾಳಿನಲ್ಲಿರುವ ಕಬ್ಬಾ​ಳಮ್ಮ ದೇಗು​ಲ​ದಲ್ಲಿ ಪೂಜೆ ಸಲ್ಲಿ​ಸಿದರು. ಈ ವೇಳೆ, ಡಿಕೆ​ಶಿಗೆ ಬೃಹತ್‌ ಕೊಬ್ಬರಿ ಹಾರ ಹಾಕಿ​, ಜನಪದ ಕಲಾತಂಡಗಳ ಮೂಲಕ ಸ್ವಾಗತ ಕೋರ​ಲಾ​ಯಿ​ತು. ಕಲ್ಲ​ಹ​ಳ್ಳಿ​ಯಲ್ಲಿ ಮಹಿ​ಳೆ​ಯರು ಪೂರ್ಣಕುಂಭದೊಂದಿಗೆ ಸ್ವಾಗ​ತಿ​ಸಿ​ದರು. ಗ್ರಾಮಸ್ಥರು ಬೃಹತ್‌ ಸೇಬಿನ ಹಾರ ಹಾಕಿ, ಬರಮಾಡಿಕೊಂಡರು. 

ಬಳಿಕ, ತಾಲೂಕಿನ ಪುರಾಣ ಪ್ರಸಿದ್ಧ ಕ್ಷೇತ್ರ ಚಿಕ್ಕತಿರುಪತಿ ಎಂದೇ ಖ್ಯಾತಿ ಪಡೆದಿರುವ ಕಲ್ಲಹಳ್ಳಿಯ ಶ್ರೀನಿವಾಸ ದೇವಾಲಯದಲ್ಲಿ ಅವರು ಪೂಜೆ ಸಲ್ಲಿಸಿದರು. ನಂತರ, ಕನ​ಕ​ಪು​ರ​ಲ್ಲಿನ ಸ್ವಾತಂತ್ರ್ಯ ಹೋರಾ​ಟ​ಗಾರರಾದ ಎಸ್‌.ಕ​ರಿ​ಯಪ್ಪ ಸಮಾ​ಧಿಗೆ ಪುಷ್ಪ ನಮನ ಸಲ್ಲಿ​ಸಿ​ದರು. ದೇಶ ಹಾಗೂ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ ಐದು ಉಚಿತ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ಬಿಜೆಪಿ ಹಾಗೂ ಜೆಡಿಎಸ್‌ನವರ ದು:ಖ, ದುಗುಡ ಹೆಚ್ಚಾಗಿದೆ. ಬಿಜೆಪಿ ಮತ್ತು ಜೆಡಿ​ಎಸ್‌ನವರು ಇಂತಹ ಕಾರ್ಯ​ಕ್ರ​ಮ​ಗ​ಳನ್ನು ನೀಡ​ಲಿಲ್ಲ. ಮೋದಿಯವರು ಹೇಳಿದಂತೆ ಜನರ ಖಾತೆಗೆ 15 ಲಕ್ಷ ಬರ​ಲಿಲ್ಲ, ರೈತರ ಸಾಲ​ಮನ್ನಾ ಆಗ​ಲಿಲ್ಲ. ಜನ​ರಿಗೆ ಅಚ್ಛೇ​ ದಿನ್‌ ಬರಲೇ ಇಲ್ಲ ಎಂದು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ ವಿರುದ್ಧ ಕಿಡಿ​ಕಾ​ರಿ​ದ​ರು.

ಹೆಣ್ಣುಮಕ್ಕಳಿಗೆ ‘ಗೃಹಲಕ್ಷ್ಮೇ’ ಯೋಜನೆ ಮೂಲಕ ತಿಂಗಳಿಗೆ 2 ಸಾವಿರ ಕೊಡುತ್ತೇವೆ. ಆದರೆ, ಮನೆಯ ಯಜ​ಮಾನಿ ಯಾರು ಅಂತ ಕುಟುಂಬ​ದ​ವ​ರೇ ತೀರ್ಮಾನ ಮಾಡಿಕೊ​ಳ್ಳ​ಬೇಕು. ಅತ್ತೆ-ಸೊಸೆ ಯಾರೂ ಜಗಳ ಮಾಡಿ​ಕೊ​ಳ್ಳ​ಬಾ​ರದು. ಒಂದು ವೇಳೆ ಮನೆಯೊಡತಿ ಹೆಸರಲ್ಲಿ ಗಂಡಸರ ಬ್ಯಾಂಕ್‌ ಖಾತೆ ಕೊಟ್ಟರೆ ಆ ಅರ್ಜಿ ಊರ್ಜಿತವಾಗುವುದಿಲ್ಲ. ಮುಂದಿನ ತಿಂಗಳಿನಿಂದ ಗೃಹಜ್ಯೋತಿ ಯೋಜನೆ ಆರಂಭವಾಗ​ಲಿದೆ. ಪದವಿ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜ​ನೆ​ಯಲ್ಲಿ 3 ಸಾವಿರ ಕೊಡು​ತ್ತೇವೆ. ಜೂನ್‌ 11ರಿಂದ ಮಹಿಳೆಯರಿಗೆ ಉಚಿತ ಬಸ್‌ ಪಾಸ್‌ ಸಿಗ​ಲಿ​ದೆ. 

ಸಂಸತ್‌ ಭವನ ಉದ್ಘಾಟನೆ ಮೋದಿ ಪಟ್ಟಾಭಿಷೇಕದಂತೆ ನಡೆದಿದೆ: ಎಚ್‌.ವಿಶ್ವನಾಥ್‌ ಆರೋಪ

ಹೆಣ್ಣು ಮಕ್ಕಳು ಎಲ್ಲಿಗೆ ಬೇಕಾದರೂ ಹೋಗಿ, ಓಡಾಡಿ ಬರ​ಬ​ಹುದು. ಆದರೆ, ಕೆಎಸ್‌ಆರ್‌ಟಿಸಿ ನಡೆ​ಯ​ಬೇ​ಕಲ್ಲ. ಆದ್ದ​ರಿಂದ ಗಂಡ​ಸರು ಮಾತ್ರ ಟಿಕೆಟ್‌ ಪಡೆದು ಪ್ರಯಾಣ ಮಾಡ​ಬೇಕು ಎಂದು ಹೇಳಿ​ದ​ರು. ಈಗ ನಾನು ಮತ್ತು ಸಿದ್ದರಾಮಯ್ಯ, ಸಚಿವ ಸಂಪುಟದ ಸಚಿವರೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ನಿಮಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳಬೇಕಿದೆ. ಕನಕಪುರದಲ್ಲಿ ಹಾದು ಹೋಗಿ​ರುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂಬಂಧ ನಾನು ಹಾಗೂ ಸುರೇಶ್‌ ಗುತ್ತಿಗೆದಾರರನ್ನು ಭೇಟಿ ಮಾಡಿ ಈ ಕಾಮಗಾರಿ ಮುಕ್ತಾಯಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ನಾನು ಕ್ಷೇತ್ರದ ಎಲ್ಲ ಜನರ ಜೇಬಿಗೆ ಹಣ ಹಾಕಲು ಸಾಧ್ಯವಿಲ್ಲ. ಆದರೆ, ನಿಮ್ಮ ಆಸ್ತಿ ಮೌಲ್ಯ ಹೆಚ್ಚಾಗುವಂತೆ ಮಾಡುತ್ತೇನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Speaker UT Khader: ದಶಕಗಳಲ್ಲೇ ಅಪರೂಪದ ಘಟನೆ, ಸ್ಪೀಕರ್‌ ಖಾದರ್‌ ಎದ್ದು ಹೋದರು! ಲಿಖಿತ ಉತ್ತರ ಕೊಡದ್ದಕ್ಕೆ ಅಸಮಾಧಾನ
ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್ ಟಿಕೆಟ್ ಕಗ್ಗಂಟಿನ ಫೈಟ್‌ನಲ್ಲಿ ಮೆತ್ತಗಾದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ!