ಕುಟುಂಬ ಕದನ: ಬಳ್ಳಾರಿ ನಗರ ಕ್ಷೇತ್ರದಲ್ಲಿ ರೆಡ್ಡಿ ಕುಟುಂಬದ ಜಿದ್ದಾ​ಜಿ​ದ್ದಿ?

Published : Feb 20, 2023, 12:30 AM IST
ಕುಟುಂಬ ಕದನ: ಬಳ್ಳಾರಿ ನಗರ ಕ್ಷೇತ್ರದಲ್ಲಿ ರೆಡ್ಡಿ ಕುಟುಂಬದ ಜಿದ್ದಾ​ಜಿ​ದ್ದಿ?

ಸಾರಾಂಶ

ಜನಾ​ರ್ದನ ರೆಡ್ಡಿ ಸೋದರ ಸೋಮ​ಶೇ​ಖರ ರೆಡ್ಡಿ ಕ್ಷೇತ್ರದ ಹಾಲಿ ಶಾಸ​ಕ, ಈ ಬಾರಿ ಕ್ಷೇತ್ರ​ದಿಂದ ಜನಾ​ರ್ದನ ರೆಡ್ಡಿ ಪತ್ನಿ ಅರು​ಣಾ ಕಣ​ಕ್ಕಿ​ಳಿ​ವ ಸಾಧ್ಯ​ತೆ. 

ಕೆ.ಎಂ.ಮಂಜುನಾಥ್‌

ಬಳ್ಳಾರಿ(ಫೆ.20): ಕೈ-ಕಮಲ ಪಕ್ಷಗಳ ನಡುವೆ ಸಾಂಪ್ರದಾಯಿಕ ಹೋರಾಟಕ್ಕೆ ಸಾಕ್ಷಿ​ಯಾ​ಗುತ್ತಾ ಬಂದಿದ್ದ ಬಳ್ಳಾರಿ ನಗರ ಕ್ಷೇತ್ರದಲ್ಲಿ ಈ ಬಾರಿ ಗಣಿ ಧಣಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಅಸ್ವಿತ್ವಕ್ಕೆ ತಂದ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ದ ಪ್ರವೇಶ ತೀವ್ರ ಕುತೂ​ಹಲ ಮೂಡಿ​ಸಿ​ದೆ.

ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಬಳ್ಳಾರಿಯಲ್ಲಿ ಕಮಲ ರಾರಾಜಿಸಲು ಕಾರಣವಾಗಿದ್ದೇ 1999ರಲ್ಲಿ ಸೋನಿಯಾಗಾಂಧಿ ಹಾಗೂ ಸುಷ್ಮಾಸ್ವರಾಜ್‌ ಅವರ ನಡು​ವಿನ ಲೋಕಸಭಾ ಚುನಾವಣಾ ಸ್ಪರ್ಧೆ. 2004ರಲ್ಲಿ ಈಗಿನ ಸಾರಿಗೆ ಸಚಿ​ವ ಬಿ.ಶ್ರೀರಾಮುಲು ಬಿಜೆಪಿಯಿಂದ ಸ್ಪರ್ಧಿಸಿ ಮೊದಲ ಬಾರಿ ಕಮಲ ಅರ​ಳಿ​ಸಿ​ದ​ರೆ, 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿ​ಸಿದ್ದ ಜನಾ​ರ್ದನ ರೆಡ್ಡಿ ಸೋದ​ರ ಜಿ.ಸೋಮಶೇಖರ ರೆಡ್ಡಿ ಗೆದ್ದಿದ್ದಾ​ರೆ. 2013ರಲ್ಲಿ ಕಾಂಗ್ರೆಸ್‌ನ ಅನಿಲ್‌ಲಾಡ್‌ ಜಯ ಪಡೆದರೆ, 2018ರಲ್ಲಿ ಸೋಮಶೇಖರ ರೆಡ್ಡಿ ಮತ್ತೆ ಜಯ ಗಳಿಸಿದ್ದಾರೆ.

ಸಂಡೂರಿನಿಂದಲೇ ವಿಜಯದ ಕಹಳೆ ಮೊಳಗಿಸಲು ಶಾ ಆಗಮನ : ಶ್ರೀರಾಮುಲು

ಕಮಲ ಪಕ್ಕಾ, ಕೈಗೆ ಸಿಗುತ್ತಿಲ್ಲ ಲೆಕ್ಕ: ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೀಗ ಜಿ.ಸೋಮಶೇಖರ ರೆಡ್ಡಿ ಶಾಸಕ. ಮುಂದಿ​ನ ಚುನಾ​ವ​ಣೆ​ಯಲ್ಲೂ ಬಿಜೆ​ಪಿ​ಯಿಂದ ಅವರೇ ಟಿಕೆಟ್‌ ಆಕಾಂಕ್ಷಿ. ಇನ್ನು ಕಾಂಗ್ರೆಸ್‌ನಲ್ಲಿ ಸ್ಪರ್ಧಾ​ಕಾಂಕ್ಷಿ​ಗಳ ದೊಡ್ಡ​ಪ​ಟ್ಟಿಯೇ ಇದೆ. ಮಾಜಿ ಸಚಿವ ಮುಂಡ್ಲೂರು ದಿವಾಕರಬಾಬು, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಭರತ್‌ ರೆಡ್ಡಿ, ಅಲ್ಲಂ ಪ್ರಶಾಂತ್‌ ಮುಂಚೂಣಿಯಲ್ಲಿರುವ ಹೆಸರು. ಇವರಲ್ಲದೆ ಅರ್ಜಿ ಸಲ್ಲಿಸಿದವರು 15ಕ್ಕೂ ಹೆಚ್ಚು ಮಂದಿ ಇದ್ದಾ​ರೆ.
ಸದ್ಯ ಕ್ಷೇತ್ರ​ದಲ್ಲಿ ಜನಾರ್ದನ ರೆಡ್ಡಿ ಅವ​ರ ನೂತನ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹೆಚ್ಚು ಸದ್ದು ಮಾಡುತ್ತಿದ್ದು, ರೆಡ್ಡಿ ತಮ್ಮ ಪತ್ನಿ ಲಕ್ಷ್ಮಿ ಅರುಣಾ ಅವರನ್ನೇ ಇಲ್ಲಿಂದ ಕಣ​ಕ್ಕಿ​ಳಿ​ಸುವ ಸುಳಿವು ನೀಡಿ​ದ್ದಾರೆ. ಒಂದು ವೇಳೆ ಅರುಣಾ ರೆಡ್ಡಿ ಕಣ​ಕ್ಕಿ​ಳಿ​ಯು​ವುದು ಖಚಿ​ತ​ವಾ​ದರೆ ರೆಡ್ಡಿ ಕುಟುಂಬದ ನಡು​ವಿನ ಸಮ​ರ​ಕ್ಕೆ ಈ ಕ್ಷೇತ್ರ ವೇದಿಕೆ ಒದ​ಗಿ​ಸ​ಲಿ​ದೆ. ಹೀಗಾಗಿ ಬಳ್ಳಾರಿ ನಗರ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆ​ಯು​ತ್ತಿ​ದೆ.

ಕ್ಷೇತ್ರ​ದಲ್ಲಿ ಕಾಂಗ್ರೆ​ಸ್‌​ನಿಂದ ಟಿಕೆಟ್‌ ಆಕಾಂಕ್ಷಿ​ಯಾ​ಗಿ​ರುವ ಉದ್ಯಮಿ, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಪುತ್ರರೂ ಆಗಿ​ರು​ವ ಭರತ್‌ ರೆಡ್ಡಿ ಈಗಾಗಲೇ ಮತದಾರರ ಓಲೈಕೆ ಶುರು ಮಾಡಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಕುಕ್ಕರ್‌ಗಳನ್ನು ತಾವೇ ಖುದ್ದು ಮನೆಗಳಿಗೆ ತೆರಳಿ ವಿತರಿಸಿ​ದ್ದಾರೆ. ಇನ್ನು ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಮಹಿಳಾ ಮತದಾರರನ್ನು ಗುರಿಯಾಗಿಸಿಕೊಂಡು ಮನೆಮನೆಗೆ ಸೀರೆ ವಿತರಿಸಲು ಯೋಜನೆ ರೂಪಿಸಿಕೊಂಡಿದ್ದಾರೆ.

ಕಾಂಗ್ರೆಸ್‌ ಗೆದ್ದರೆ 1 ಸಾವಿರಕ್ಕೆ ಹಮಾಲರಿಗೆ ನಿವೇಶನ: ಮಾಜಿ ಸಚಿವ ದಿವಾಕರಬಾಬು ಭರವಸೆ

ಜಾತಿವಾರು ಲೆಕ್ಕಾಚಾರ ಜೋರು

ಬಳ್ಳಾರಿ ನಗರ ಕ್ಷೇತ್ರದಲ್ಲಿ ಒಟ್ಟು 2,47,405 ಮತದಾರರಿದ್ದಾರೆ. ಈ ಪೈಕಿ 1,20,421 ಪುರುಷರು ಹಾಗೂ 1,26,984 ಮಹಿಳಾ ಮತದಾರರಿದ್ದಾರೆ. ಜಾತಿವಾರು ಲೆಕ್ಕದಲ್ಲಿ ವೀರಶೈವ ಲಿಂಗಾಯತ 35 ಸಾವಿರ, ಪರಿಶಿಷ್ಟಜಾತಿ 50 ಸಾವಿರ, ಪರಿಶಿಷ್ಟಪಂಗಡ 20,800 ಹಾಗೂ ಮುಸ್ಲಿಂ ಮತದಾರರು 44,500ದ ಆಜು​ಬಾಜು ಇರ​ಬ​ಹು​ದು. ಕಾಂಗ್ರೆಸ್‌ ಪರಿಶಿಷ್ಟಜಾತಿ, ಮುಸ್ಲಿಂ, ಕುರುಬ ಸಮುದಾಯದ ಮತಗಳನ್ನು ನಂಬಿಕೊಂಡಿದೆ. ಬಿಜೆಪಿ ಲಿಂಗಾಯತ, ಬ್ರಾಹ್ಮಣ, ಬಲಿಜ, ಪರಿಶಿಷ್ಟಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಮೇಲೆ ಕಣ್ಣಿ​ಟ್ಟಿದೆ. ಹೊಸ ಪಕ್ಷ ಸ್ಥಾಪಿಸಿ ಪತ್ನಿಯನ್ನು ಅಖಾಡಕ್ಕೆ ಇಳಿಸಲು ಸಜ್ಜಾಗಿರುವ ಜನಾರ್ದನ ರೆಡ್ಡಿ, ಎಸ್ಸಿ-ಎಸ್ಟಿ, ಮುಸ್ಲಿಂ, ಕುರುಬ ಮತ​ಗಳನ್ನು ಬಾಚಿ​ಕೊ​ಳ್ಳುವ ವಿಶ್ವಾಸದಲ್ಲಿದ್ದಾರೆ.

ಕ್ಷೇತ್ರ ಪರಿ​ಚ​ಯ

ಕಳೆದ ಆರೂವರೆ ದಶಕದಲ್ಲಿ ಬಳ್ಳಾರಿ ನಗ​ರ ಕ್ಷೇತ್ರ​ದಲ್ಲಿ ನಡೆದ 14 ಚುನಾವಣೆಗಳಲ್ಲಿ 6 ಬಾರಿ ಕಾಂಗ್ರೆಸ್‌, 3 ಬಾರಿ ಬಿಜೆಪಿ, 2 ಬಾರಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ. ಹಾಲಿ ಸಾರಿಗೆ ಸಚಿವ ಬಿ.ಶ್ರೀ​ರಾ​ಮುಲು ಈ ಕೇತ್ರ​ದಲ್ಲಿ ಕಮಲ ಅರ​ಳಿ​ಸಿದ್ದು, ಸೋಮ​ಶೇ​ಖರ ರೆಡ್ಡಿ ಅವರು ಎರಡು ಬಾರಿ ಗೆದ್ದಿ​ದ್ದಾರೆ. ಹಾಲಿ ಶಾಸ​ಕರೂ ಆಗಿ​ರುವ ಸೋಮ​ಶೇ​ಖರ ರೆಡ್ಡಿ ಈ ಬಾರಿಯೂ ಬಿಜೆಪಿ ಅಭ್ಯ​ರ್ಥಿ​ಯಾ​ಗುವ ನಿರೀಕ್ಷೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?