
ಬೆಂಗಳೂರು(ಡಿ. 10) ಗೋ ಹತ್ಯೆ ನಿಷೇಧ ಮಸೂದೆ ವಿಧಾನಸಭೆಯಲ್ಲಿ ಪಾಸ್ ಆಗಿದ್ದು ವಿಧಾನಪರಿಷತ್ ನಲ್ಲಿಯೂ ಪಾಸ್ ಆಗಿ ರಾಜ್ಯಪಾಲರ ಬಳಿ ತೆರಳುತ್ತದೆ ಎಂದು ಭಾವಿಸಿದ್ದವರಿಗೆ ಸಣ್ಣ ಶಾಕ್ ನ್ನು ಸರ್ಕಾರವೇ ನೀಡಿದೆ.
ಗುರುವಾರದ ಪರಿಷತ್ ಕಲಾಪದಲ್ಲಿ ಸಭಾಪತಿ ಕುರಿತ ಅವಿಶ್ವಾಸ ನಿರ್ಣಯ ಮತ್ತು ಸದನ ಮುಂದುವರಿಸುವ ಬಗ್ಗೆ ಉಂಟಾದ ಗದ್ದಲದಿಂದಾಗಿ ಗೋಹತ್ಯೆ ನಿಷೇಧ ವಿಧೇಯಕ ಮಂಡನೆಯೇ ಆಗಿಲ್ಲ. ಸಭಾಪತಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದು ಇನ್ನು ಏನು ಮಾಡುತ್ತಾರೆ.. ಎಂಬ ಪ್ರಶ್ನೆ ಎದ್ದೇಳುವಂತೆ ಮಾಡಿದೆ.
ಗೋಹತ್ಯೆ ನಿಷೇಧ ಬಿಲ್ ನಲ್ಲಿ ಏನಿದೆ?
ಅಧಿವೇಶನ ಕೊನೆಯಾಗಿದೆ. ಇನ್ನೊಂದು ಕಡೆ ಸಚಿವ ಅಶೋಕ್ ಗುರುವಾರ ಮಂಡನೆ ಮಾಡಿದ್ದರೆ ವಿಪಕ್ಷಗಳು ವಿಧೇಯಕ ಬೀಳಿಸುವ ಕೆಲಸ ಮಾಡುವ ಸಾಧ್ಯತೆ ಇತ್ತು ಎಂದು ಹೇಳಿಕೆ ನೀಡಿದ್ದಾರೆ. ಹಾಗಾಗಿ ಮುಂದಿನ ಸಚಿವ ಸಂಪುಟ ಸಭೆವರೆಗೆ ಕಾದು ನೋಡಿ ಎಂದಿದ್ದಾರೆ.
ಬಹುರ್ಚಿತ ಗೋಹತ್ಯೆ ನಿಷೇಧ ವಿಧೇಯಕ ವಿಧಾನಸಭೆಯಲ್ಲಿ ಮಂಡನೆಯಾಗಿ ಪಾಸ್ ಆಗಿದ್ದರೂ ಪರಿಷತ್ ನಲ್ಲಿ ಮಂಡನೆಯಾಗದೆ ಉಳಿದುಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.