'ಯುವಕರು ಕೆಲಸ ಕೇಳಿದ್ರೆ ಲಂಚ ಕೇಳ್ತಾರೆ, ಯುವತಿಯರು ಕೆಲಸ ಕೇಳಿದ್ರೆ ಮಂಚಕ್ಕೆ ಕರೀತಾರೆ'

Published : Apr 07, 2021, 07:59 PM IST
'ಯುವಕರು ಕೆಲಸ ಕೇಳಿದ್ರೆ ಲಂಚ ಕೇಳ್ತಾರೆ, ಯುವತಿಯರು ಕೆಲಸ ಕೇಳಿದ್ರೆ ಮಂಚಕ್ಕೆ ಕರೀತಾರೆ'

ಸಾರಾಂಶ

ಬೀದರ್​ನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೀದರ್, (ಏ.07):  ಯುವಕರು ಕೆಲಸ ಕೇಳಿದರೆ ಲಂಚ ಕೇಳುತ್ತಾರೆ. ಯುವತಿಯರು ಕೆಲಸ ಕೇಳಿದರೆ ಮಂಚಕ್ಕೆ ಕರಿತಾರೆ. ಇಂತಹ ಲಂಚ, ಮಂಚದ ಸರ್ಕಾರ ಬೇಕಾ..? ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಬೀದರ್​ನ ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಯಾವಾಗ ನಿಮ್ಮ ಓಟು ಮಲ್ಲಿಕಾರ್ಜುನ್ ಖರ್ಗೆ, ಸಿದ್ದರಾಮಯ್ಯ ಹಾಗೂ ಧರ್ಮಸಿಂಗ್ ಅವರಿಗೆ ಬಿತ್ತೋ ಆಗ ಕಲಂ 371 ಜಾರಿಗೆ ಬಂತು. ಆದರೆ ನಾವು ಇವತ್ತು ಎನಾದರೂ ಅನುದಾನ ಕೇಳಿದರೆ ಲಂಚ ಕೇಳ್ತಾರೆ. ಯುವಕ, ಯುವತಿಯರು ಕೆಲಸ ಕೇಳಿದರೆ ಮಂಚಕ್ಕೆ ಕರಿತಾರೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ  ವಾಗ್ದಾಳಿ ನಡೆಸಿದರು.

BSY ಮತ್ತು ವಿಜಯೇಂದ್ರಗೆ ಯತ್ನಾಳ್ ಮತ್ತೊಂದು ಸವಾಲು.. ನಿಜ ಬಣ್ಣ ಬಯಲು!

ಹೈದ್ರಾಬಾದ್ ಕರ್ನಾಟಕದ ಜನ ಆರ್ಟಿಕಲ್ 371ಜೆ ಗೆ ಬೇಡಿಕೆ ಇಟ್ಟಿದ್ರೋ ಆಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇತ್ತು. ಎಲ್ ಕೆ ಅಡ್ವಾಣಿ ಡೆಪ್ಯುಟಿ ಪ್ರೈಮ್ ಮಿನಿಸ್ಟರ್ ಆಗಿದ್ರು. ಆಗ ಲಿಖಿತ ರೂಪದಲ್ಲಿ ಬರೆದು ಕಳುಹಿಸುತ್ತಾರೆ ಆರ್ಟಿಕಲ್ 371 ಕೊಡಲು ಸಾಧ್ಯವಿಲ್ಲ ಅಂತ ತಿರಸ್ಕಾರ ಮಾಡಿ ಕಳಿಸ್ತಾರೆ ಎಂದು ಕಿಡಿಕಾರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ