ಶ್ರೀರಾಮುಲು-ಡಿ.ಕೆ. ಶಿವಕುಮಾರ್ ಹಣಾಹಣಿಗೆ ಮತ್ತೊಂದು ವೇದಿಕೆ ಸಿದ್ಧ

Published : Nov 30, 2018, 06:48 PM ISTUpdated : Nov 30, 2018, 06:49 PM IST
ಶ್ರೀರಾಮುಲು-ಡಿ.ಕೆ. ಶಿವಕುಮಾರ್ ಹಣಾಹಣಿಗೆ ಮತ್ತೊಂದು ವೇದಿಕೆ ಸಿದ್ಧ

ಸಾರಾಂಶ

ಬಳ್ಳಾರಿ ಲೋಕಸಭಾ ಉಪಚುನಾವಣೆ ವೇಳೆ ಬದ್ಧ ವೈರಿಗಳಂತೆ ಆರೋಪ-ಪ್ರತ್ಯಾರೋಪಗಳನ್ನ ಮಾಡಿದ್ದ ಡಿ.ಕೆ.ಶಿವಕುಮಾರ್ ಹಾಗೂ ಶ್ರೀರಾಮುಲು ಹಣಾಹಣಿಗೆ ಮತ್ತೊಂದು ವೇದಿಕೆ ಸಿದ್ಧವಾಗಿದೆ.

ಬೆಂಗಳೂರು, [ನ.30] ಬಳ್ಳಾರಿ ಲೋಕಸಭಾ ಉಪಚುನಾವಣೆ ಬಳಿಕ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಇಬ್ಬರು ಪ್ರಮುಖ ನಾಯಕರು ಎದುರುಗೊಳ್ಳುವ ಸಾಧ್ಯತೆ ಇದೆ. 

ತೆಲಂಗಾಣ ಉಸ್ತುವಾರಿಯಾಗಿ ನೇಮಕ ಆಗಿರುವ ಡಿ ಕೆ ಶಿವಕುಮಾರ್ ತನ್ನ ಪಕ್ಷದ ಗೆಲುವಿಗೆ ಶ್ರಮಿಸಲಿದ್ದಾರೆ. ಅಂತೆಯೇ ತೆಲಗು ಭಾಷೆ ಮಾತನಾಡುವ ಬಿಜೆಪಿಯ ಬಿ ಶ್ರೀರಾಮಲು ಸಹ ಅಲ್ಲಿನ ಕೆಲವು ಕ್ಷೇತ್ರಗಳಲ್ಲಿ ಮತ ಭೇಟೆ ಮಾಡಲಿದ್ದಾರೆ. 

ಸಿದ್ದರಾಮಯ್ಯ, ಡಿಕೆಶಿಗೆ ಹೊಸ ಟಾಸ್ಕ್ ಕೊಟ್ಟ ಕೈ ಹೈಕಮಾಂಡ್!

ಹೀಗಾಗಿ ಬಳ್ಳಾರಿ ಉಪಚುನಾವಣೆ ಬಳಿಕ ಮತ್ತೆ ಇಬ್ಬರು ನಾಯಕರು ಎದುರುಗೊಳ್ತಾರ ಎನ್ನುವ ಕುತೂಹಲ ಮೂಡಿಸಿದೆ. ಮಾಹಿತಿ ಪ್ರಕಾರ ಬಿ. ಶ್ರೀರಾಲಮಲು ಅವರಿಗೆ ತೆಲಂಗಾಣದಲ್ಲಿ ಪ್ರಚಾರ ಮಾಡಲು ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. 

ಡಿಸೆಂಬರ್ 1,2,3 ರಂದು ಮೂರು ದಿನಗಳ ಕಾಲ ಪ್ರಚಾರ ನಡೆಸಲು ವೇಳಾ ಪಟ್ಟಿ ಸಹ ನಿಗದಿ ಆಗಿದೆ ಎಂದು ತಿಳಿದು ಬಂದಿದೆ. ಹಾಗೊಂದು ವೇಳೆ ಶ್ರೀರಾಮಲು ಮತ್ತು ಡಿಕೆಶಿ ಪ್ರಚಾರ ಮಾಡಿದ್ದೆ ಆದಲ್ಲಿ, ರಾಜ್ಯ ರಾಜಕೀಯದಲ್ಲಿ ಒಂದು ಚರ್ಚೆಗೆ ಮತ್ತು ಕುತೂಹಲಕ್ಕೆ ಎಡೆಮಾಡಿಕೊಂಟಂತಾಗುತ್ತದೆ.

 ತೆಲಗಾಂಣದಲ್ಲಿ ಬಿಜೆಪಿ ಬೇರು ಇನ್ನೂ ಗಟ್ಟಿಯಾಗಿ ಊರಿಲ್ಲ. ಆದರೂ ಪಕ್ಷ ಸಂಘಟನೆ, ಲೋಕಸಭಾ ಚುನಾವಣಾ ದೃಷ್ಟಿಯಿಂದ ಈ ಚುನಾವಣೆ ಬಿಜೆಪಿಗೆ ಟೆಸ್ಟ್ ಇದ್ದಂತೆ. 

ಈಗಾಗಲೇ ರಾಜ್ಯದಿಂದ ವಕ್ತಾರರಾದ ಅಶ್ವತ್ ನಾರಾಯಣ್, ಪ್ರಕಾಶ್, ಮತ್ತು ಮಾಜಿ ಉಪಮೇಯರ್ ಹರೀಶ್ ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲು ತೆಲಂಗಾಣಕ್ಕೆ ತೆರಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!
ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!