ಸುಧಾಕರ್ ವಿನೂತನ ಪ್ರಚಾರ, ಬಿಜೆಪಿ ಬಾವುಟವೇ ಎಲ್ಲೂ ಇಲ್ಲ, ಯಾಕಂತೆ!

Published : Nov 20, 2019, 08:35 PM ISTUpdated : Nov 20, 2019, 08:37 PM IST
ಸುಧಾಕರ್ ವಿನೂತನ ಪ್ರಚಾರ, ಬಿಜೆಪಿ ಬಾವುಟವೇ ಎಲ್ಲೂ ಇಲ್ಲ, ಯಾಕಂತೆ!

ಸಾರಾಂಶ

ಡಾ. ಸುಧಾಕರ್ ಪ್ರಚಾರದ ವೈಖರಿ/ ಸೋಶಿಯಲ್ ಮೀಡಿಯಾದಲ್ಲಿ ವಿನೂತನ ವಿಡಿಯೋ/ ನಮ್ಮೂರಿಗೆ ಮೆಡಿಕಲ್ ಕಾಲೇಜು ಬರ್ತಿದೆ/ ಪುಣ್ಯಕೋಟಿ ಜಹಾಡಿನ ಸಾಳುಗಳನ್ನು ಬಳಸಿಕೊಂಡ ಸುಧಾಕರ್

ಚಿಕ್ಕಬಳ್ಳಾಪುರ(ನ. 20)  ಉಪಚುನಾವಣೆ ಅಖಾಡ ರಂಗೇರುತ್ತಲೇ ಇದೆ. ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. 4.56 ನಿಮಿಷದ ವಿಡಿಯೋ ಪಕ್ಕಾ ಸಿನಿಮಾದ ಶೈಲಿಯಲ್ಲಿ ನಿರ್ಮಾಣವಾಗಿದೆ.

ಸುಧಾಕರ್ ಅವರ ಗುಣಗಾನ ಮಾಡುತ್ತ ಸಾಗುವ ವಿಡಿಯೋದಲ್ಲಿ ಎಲ್ಲಿಯೂ ಯಾವ ಪಕ್ಷದ ಬಾವುಟ ಕಂಡುಬರುವುದಿಲ್ಲ. ಒಬ್ಬ ಬಾಲಕ ಸುಧಾಕರ ಅಣ್ಣ ಬರ್ತಾ ಇದ್ದಾರೆ ಎಲ್ಲರೂ ಬನ್ರೋ.. ಎಂದು ಕೂಗಿಕೊಂಡು ಬರುತ್ತಾನೆ. ಕೊನೆಯಲ್ಲಿ ಆತ ತಾನು ಮುಂದೆ ಡಾಕ್ಟರ್ ಆಗುತ್ತೇನೆ ಎಂದು ಹೇಳುತ್ತಾರೆ.

ಕಾಂಗ್ರೆಸ್‌ಗೆ ಲಾಸ್ಟ್ ಮಿನಿಟ್ ಶಾಕ್, ಕೈ ಬುಟ್ಟಿಗೆ ಸುಧಾಕರ್ ಕೈ

ಪೂಣ್ಯಕೋಟಿಯ ಕತೆಯ ಸಾಲುಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಮೆಡಿಕಲ್ ಕಾಲೇಜಿನ ವಿಚಾರ ಮತ್ತಷ್ಟು ಹೈಲಟ್ ಮಾಡಲಾಗಿದೆ. ಕೊಟ್ಟ ಭಾಷೆಗೆ ತಪ್ಪಲಾರ, ಕೆಟ್ಟ ಯೋಚನೆ ಮಾಡಲಾರ ಎಂದು ಸುಧಾಕರ್ ಗುಣಗಾನ ಹಾಡಿನಲ್ಲಿ ಇದೆ.

ಸುಧಾಕರ್ ಅವರ ಭಾಷಣದ ತುಣುಕುಗಳನ್ನು ಬಳಸಿಕೊಳ್ಳಲಾಗಿದೆ. ಮಡಿಕಲ್ ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರ ಮಾಡುವ ಹುನ್ನಾರ ಇತ್ತು. ಆದರೆ ಅದೆಲ್ಲವನ್ನು ಮೀರಿ ಮೆಡಿಕಲ್ ಕಾಲೇಜು  ತಂದಿದ್ದೇನೆ. ಕೊಟ್ಟ ಭರವಸೆಗಳನ್ನು ಈಡೇರಿಸಲು ಸಮ್ಮಿಶ್ರ ಸರಕಾರ ತಾರತಮ್ಯ ಧೋರಣೆ ತಾಳಿತ್ತು. ಈಗ ಮತ್ತೆ ನಿಮ್ಮ ಮುಂದೆ ಬಂದಿದ್ದೇನೆ. ರಾಜೀನಾಮೆ ಕೊಟ್ಟ ಮೇಲೆ ಎಲ್ಲ ಭರವಸೆ ಈಡೇರುತ್ತಿದೆ ಎಂದು ಹೇಳಿಕೊಂಡು ಸಾಗುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹ ಸಚಿವ ಅಮಿತ್‌ ಶಾ - ರಾಹುಲ್ ಗಾಂಧಿ ಮತಚೋರಿ ಸಮರ
ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ