
ನವದೆಹಲಿ(ಮೇ.22): ಮೊದಲ ದಿನ 20 ಲಕ್ಷ ಕೋಟಿ ಎಂದು ದನಿ ಎತ್ತರಿಸಿ ಮಾತನಾಡುತ್ತಿದ್ದ ಬಿಜೆಪಿ ಸಂಸದರು ಈಗೀಗ ಕೇಂದ್ರ ಸರ್ಕಾರದ ಕೊರೋನಾ ಪ್ಯಾಕೇಜ್ ಬಗ್ಗೆ ಖಾಸಗಿಯಾಗಿ ಅಸಮಾಧಾನ ಹೊರ ಹಾಕುತ್ತಾರೆ.
ಅನೇಕ ಸಂಸದರು ತಮಗೆ ಆಪ್ತರಿರುವ ಪತ್ರಕರ್ತರ ಎದುರು ಸಣ್ಣ ದನಿಯಲ್ಲಿ ಹೇಳಿಕೊಳ್ಳುವ ಪ್ರಕಾರ, ಕನಿಷ್ಠ ಪಕ್ಷ ಒಂದು ಲಕ್ಷ ಕೋಟಿಯನ್ನಾದರೂ ನೇರವಾಗಿ ಜನರಿಗೆ ನೀಡುವ ಬಗ್ಗೆ ಯೋಜನೆ ರೂಪಿಸಬೇಕಿತ್ತು. ಆದರೆ ಬಹಳಷ್ಟು ಸಂಸದರಿಗೆ ಪಕ್ಷದ ವೇದಿಕೆಗಳಲ್ಲಿಯೂ ಗಟ್ಟಿಯಾಗಿ ಹೇಳುವಷ್ಟುದೈರ್ಯ ಇಲ್ಲ. ಇದಕ್ಕೆಲ್ಲ ನಿರ್ಮಲಾ ಸೀತಾರಾಮನ್ ಕಾರಣ ಎಂಬುದು ಅವರ ಅಂಬೋಣ.
‘ಜನರಿಂದ ಆರಿಸಿ ಬರುವವರ ಕಷ್ಟ ಯಾರಿಗೆ ಹೇಳೋಣ. ನಿರ್ಮಲಾ, ಪಿಯೂಷ್, ಸುರೇಶ್ ಪ್ರಭು ಇವರೇನು ಚುನಾವಣೆಗೆ ನಿಲ್ತಾರಾ? ರಾಜ್ಯಸಭೆಗೆ ಬ್ಯಾಕ್ ಡೋರ್ ಎಂಟ್ರಿ ಮಾಡುವವರು’ ಎಂದು ಬಿಜೆಪಿ ಲೋಕಸಭಾ ಸಂಸದರು ಅಲವತ್ತುಕೊಳ್ಳುತ್ತಾ ಇರುತ್ತಾರೆ. ಅಂದಹಾಗೆ, ಯುಪಿಎ ಸರ್ಕಾರ ಇದ್ದಾಗ ಕಾಂಗ್ರೆಸ್ ಸಂಸದರು ಚಿದಂಬರಂ ನೀತಿ ಬಗ್ಗೆ ಹೀಗೆಯೇ ಹೇಳುತ್ತಿದ್ದರು.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.