'ಒಂದ್ಕಡೆ ಸಿಡಿ.. ಮತ್ತೊಂದ್ಕಡೆ ಈಶ್ವರಪ್ಪ ಗಲಾಟೆ.. ಇದ್ರಿಂದ ಸಿಎಂ ಕೆಲ್ಸ ಮಾಡೋದು ಕಷ್ಟವಾಗ್ತಿದೆ'

Published : Apr 07, 2021, 10:20 PM IST
'ಒಂದ್ಕಡೆ ಸಿಡಿ.. ಮತ್ತೊಂದ್ಕಡೆ ಈಶ್ವರಪ್ಪ ಗಲಾಟೆ.. ಇದ್ರಿಂದ ಸಿಎಂ ಕೆಲ್ಸ ಮಾಡೋದು ಕಷ್ಟವಾಗ್ತಿದೆ'

ಸಾರಾಂಶ

ಒಂದು ಕಡೆ ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಮತ್ತೊಂದೆಡೆ ಈಶ್ವರಪ್ಪನವರ ಲೆಟರ್ ವಾರ್.ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಚಿಕ್ಕಬಳ್ಳಾಪುರ, (ಏ.07): ಒಂದ್ ಕಡೆ ಸಿಡಿ ಗಲಾಟೆ, ಮತ್ತೊಂದು ಕಡೆ ಈಶ್ವರಪ್ಪ ಗಲಾಟೆ ಇದರ ಮಧ್ಯೆ ಸಿಎಂ ಯಡಿಯೂರಪ್ಪ ಕೆಲಸ ಮಾಡೋದು ಕಷ್ಟ ಆಗ್ತಿದೆ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟದೊಳಗಿನ ಸಹೋದ್ಯೋಗಿಗಳ ಹೊಂದಾಣಿಕೆ ಕೊರತೆಯಿಂದ ಸಿಎಂ ಅಭಿವೃದ್ಧಿ ಪರ ಕೆಲಸ ಮಾಡೋದು ಕಷ್ಟವಾಗ್ತಿದೆ ಸ್ಪಷ್ಟಪಡಿಸಿದರು.

ಯಡಿಯೂರಪ್ಪ-ಈಶ್ವರಪ್ಪ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕೆ ಮತ್ತೊಮ್ಮೆ ಜಗಜ್ಜಾಹೀರು

ಸಿಡಿ ಪ್ರಕರಣದಲ್ಲಿ ಸಂತ್ರಸ್ತೆ ಹೇಳಿಕೆ ಮುಖ್ಯ. ಅವರ ಹೇಳಿಕೆಯನ್ನಾಧರಿಸಿ‌ ತನಿಖೆ ನಡೆಯಬೇಕು. ಸಿಡಿ ಮತ್ತು ಅದರಲ್ಲಿನ ದೃಶ್ಯಗಳನ್ನು ನಾನು ನಂಬೋದಿಲ್ಲ.. ಮಾರ್ಪಿಂಗ್ ನಡೆಯುತ್ತದೆ. ಹಾಗಾಗಿ ಸಂತ್ರಸ್ತೆ ನೀಡೋ ‌ಹೇಳಿಕೆ ಮೇಲೆ ಪ್ರಕರಣದ ಗಂಭೀರತೆ ತಿಳಿಯಲಿದೆ ಎಂದು ಹೇಳಿದರು.

ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಪದೇ ಪದೇ ಮುಷ್ಕರ ಮಾಡೋದು ಸರಿ ಇಲ್ಲ. ಸಾರ್ವಜನಿಕರಿಗೆ ತೊಂದರೆ ಕೊಡೋದು ಸರಿ ಕಾಣಲ್ಲ. ಕೊರೊನಾ ಸಮಯದಲ್ಲಿ ಮುಷ್ಕರ ನಡೆಸಬಾರದು.. ಸಾರಿಗೆ ಸಚಿವರು ಬಿಗಿಯಾಗಿ ನಡೆದುಕೊಳ್ಳಬೇಕು. ಸರ್ಕಾರ ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳು ಈಡೇರಿವೆ. ಸದ್ಯ ರಾಜ್ಯದ ಆರ್ಥಿಕ ಸ್ಥಿತಿ‌ ಸರಿ‌ ಇಲ್ಲ. ಸರ್ಕಾರದ ವಿರುದ್ಧ ಸಾರಿಗೆ ನೌಕರರ ಕ್ರಮ ಅಕ್ಷಮ್ಯ ಅಪರಾಧ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ
ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ