ಸರಿಯಿದೆ ಅಂತಲೇ ಒಳಗಿಂದ ತೂತು ಕೊರೆವುದೇ ರಾಜಕಾರಣ: ಬೊಮ್ಮಾಯಿ

Published : Sep 04, 2024, 10:30 AM IST
ಸರಿಯಿದೆ ಅಂತಲೇ ಒಳಗಿಂದ ತೂತು ಕೊರೆವುದೇ ರಾಜಕಾರಣ: ಬೊಮ್ಮಾಯಿ

ಸಾರಾಂಶ

ಕಳೆದ ಒಂದು ವರ್ಷದಿಂದ ರಾಜ್ಯ ಸರ್ಕಾರ ಏನೂ ಕೆಲಸಮಾಡಿಲ್ಲ ಎನ್ನುವುದು ಗ್ರಾಮೀಣ ಪ್ರದೇಶಗಳನ್ನೊಮ್ಮೆ ಸುತ್ತಿ ಬಂದರೆ ಗೊತ್ತಾಗುತ್ತದೆ. ಇದರಿಂದ ಜನರ ಜತೆಗೆ ಕಾಂಗ್ರೆಸ್ ಶಾಸಕರೇ ಭ್ರಮನಿಸರನರಾಗಿದ್ದಾರೆ. ಹೀಗಾಗಿ ಕಾಂಗ್ರೆಸ್‌ನಲ್ಲಿ ಆಂತರಿಕ ಗೊಂದಲ ಸೃಷ್ಟಿಯಾಗಿದೆ: ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ   

ಗದಗ(ಸೆ.04):  ಎಲ್ಲವೂ ಸರಿಯಿದೆ ಅಂತಾ ಹೇಳುತ್ತಲೇ ಒಳ ಗಡೆಯಿಂದ ದೋಣಿಗೆತೂತು ಕೊರೆಯುವುದು ರಾಜಕಾರಣ. ಈಗ ಕಾಂಗ್ರೆಸ್‌ನಲ್ಲಿ ಈ ಪ್ರಕ್ರಿಯೆ ನಡೆಯುತ್ತಿದ್ದು, ಸಿದ್ದರಾಮಯ್ಯ ಕುಳಿತಿರುವ ಸಿಎಂ ಖುರ್ಚಿ ಅಲ್ಲಾಡುತ್ತಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಕುರ್ಚಿ ಮೇಲೆ ನಾನು ಕೂರಬೇಕೆಂಬ ಆಸೆ ಯನ್ನು ಕಾಂಗ್ರೆಸ್ ನಾಯಕರು ಅದಮಿಟ್ಟುಕೊಂಡಿದ್ದರು. ಅದೀಗ ಹೊರಹೊಮ್ಮುತ್ತಿದೆ. ವಿರೇಂದ್ರ ಪಾಟೀಲರು ಅತ್ಯಂತ ಬಲಿಷ್ಠ ಸಿಎಂ ಆಗಿದ್ದರು ರಾತ್ರೋ ರಾತ್ರಿ ಎಲ್ಲ ಶಾಸಕರು ಬದಲಾದರು. ಅರಸು 2ನೇ ಬಾರಿ ಸ್ವಂತ ಶಕ್ತಿಯಲ್ಲಿ ಆರಿಸಿ ಸಿಎಂ ಆಗಿದ್ದರು. ಆದರೆ ರಾತ್ರೋರಾತ್ರಿ ಬದಲಾಗಿ ಗುಂಡೂರಾವ್ ಸಿಎಂ ಆದರು. ಬಂಗಾರಪ್ಪ ಅವರಿಗೆ 183 ಶಾಸಕರ ಬಲವಿದ್ದರೂ ಸಿಎಂ ಸ್ಥಾನ ಕಳೆದುಕೊಂಡರು. ಸದ್ಯ ಕಾಂಗ್ರೆಸ್‌ನಲ್ಲಿ ಈ ರಾಜಕಾರಣ ನಡೀಯುತ್ತಿದೆ ಎಂದು ಇತಿಹಾಸವನ್ನು ಕೆದಕಿದರು. 

ಕಾಂಗ್ರೆಸ್ ತಮ್ಮ ಹುಳುಕು ಮುಚ್ಚಿಕೊಳ್ಳಲು ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಆರೋಪ: ಸಂಸದ ಬೊಮ್ಮಾಯಿ

ಕಳೆದ ಒಂದು ವರ್ಷದಿಂದ ರಾಜ್ಯ ಸರ್ಕಾರ ಏನೂ ಕೆಲಸಮಾಡಿಲ್ಲ ಎನ್ನುವುದು ಗ್ರಾಮೀಣ ಪ್ರದೇಶಗಳನ್ನೊಮ್ಮೆ ಸುತ್ತಿ ಬಂದರೆ ಗೊತ್ತಾಗುತ್ತದೆ. ಇದರಿಂದ ಜನರ ಜತೆಗೆ ಕಾಂಗ್ರೆಸ್ ಶಾಸಕರೇ ಭ್ರಮನಿಸರನರಾಗಿದ್ದಾರೆ. ಹೀಗಾಗಿ ಕಾಂಗ್ರೆಸ್‌ನಲ್ಲಿ ಆಂತರಿಕ ಗೊಂದಲ ಸೃಷ್ಟಿಯಾಗಿದೆ. ಆರ್.ವಿ. ದೇಶಪಾಂಡೆ ಅವರು ಯಾವ ಕಾರಣಕ್ಕಾಗಿ ಸಿಎಂ ಹುದ್ದೆ ಬಗ್ಗೆ ಹೇಳಿಕೆ ನೀಡಿದ್ದಾರೆ ನನಗೆ ಗೊತ್ತಿಲ್ಲ. ಆದರೆ ಅವರ ಹೇಳಿಕೆ ಬಳಿಕ ಪಕ್ಷದಲ್ಲಿ ಗೊಂದಲವಾಗಿದೆ. ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದಕ್ಕೆ 'ಕೈ' ನಾಯಕರ ಪ್ರತಿಕ್ರಿಯೆ ಸಾಕ್ಷಿ ಎಂದರು. 

ಕಾಂಗ್ರೆಸ್‌ನವರು ಮುಡಾದಲ್ಲಿ ಹಗರಣವಾಗಿಲ್ಲ ಅಂತಾರೆ. ಆದರೆ ಆಗಿನ ಕಮಿಷನ‌ರ್ ಅವರನ್ನು ಹಗರಣದ ಕಾರಣ ಕೊಟ್ಟು ಅಮಾನತ್ತು ಮಾಡಿದ್ದಾರೆ. ಈ ಮೂಲಕ ತಾಂತ್ರಿಕ ಸಮಿತಿ ಮುಡಾದಲ್ಲಿ ತಪ್ಪು ಕಂಡು ಹಿಡಿದಿದೆ ಎನ್ನುವುದು ಸಾಬೀತಾಗಿದ್ದು, ಮುಡಾದಲ್ಲಿ ಎಲ್ಲವೂ ಕಾನೂನು ಬದ್ಧವಾಗಿ ನಡೆದಿಲ್ಲ ಎನ್ನುವುದನ್ನು ಸರ್ಕಾರವೇ ಒಪ್ಪಿಕೊಂಡಂತಾಗಿದೆ ಎಂ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ