ರಾಜಕೀಯದವರು ಮಾಡದ ಕೆಲಸಗಳನ್ನು ಮಠಗಳು ಮಾಡಿವೆ: ಸಚಿವ ರಾಜಣ್ಣ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Published : Jun 29, 2024, 10:56 PM ISTUpdated : Jun 30, 2024, 08:47 AM IST
ರಾಜಕೀಯದವರು ಮಾಡದ ಕೆಲಸಗಳನ್ನು ಮಠಗಳು ಮಾಡಿವೆ: ಸಚಿವ ರಾಜಣ್ಣ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಸಾರಾಂಶ

ಮಠಗಳ ಬಗ್ಗೆ ತಿಳಿಯದೆ ಮಾತನಾಡುವುದು ಸರಿಯಲ್ಲ. ರಾಜಣ್ಣನವರು ಹೇಳಿಕೆ ಕೊಟ್ಟಿರೋದು ಸರಿಯಲ್ಲಾ. ಅವರಿಗೆ ಅರಿವಿನ ಕೊರತೆಯಿದೆ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು. 

ಬೆಂಗಳೂರು (ಜೂ.29): ಮಠಗಳ ಬಗ್ಗೆ ತಿಳಿಯದೆ ಮಾತನಾಡುವುದು ಸರಿಯಲ್ಲ. ರಾಜಣ್ಣನವರು ಹೇಳಿಕೆ ಕೊಟ್ಟಿರೋದು ಸರಿಯಲ್ಲಾ. ಅವರಿಗೆ ಅರಿವಿನ ಕೊರತೆಯಿದೆ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು. ಸ್ವಾಮಿಜಿಗಳು ಬೆವರು ಸುರಿಸಲ್ಲ ಎಂದಿರೋದು ಅವರ  ಅರಿವಿನ ಕೊರತೆಯಿಂದ. ಪಕ್ಕದಲ್ಲಿ ಇರುವ ಮಠಗಳ ಕಾರ್ಯದ ಅರಿವಿಲ್ಲದೆ ಮಾತನಾಡಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠದ ಬಗ್ಗೆಯೂ ಅವರಿಗೆ ಗೊತ್ತಿಲ್ಲ ಅನ್ಸುತ್ತೆ. ರಾಜಣ್ಣನವರು ಸ್ವಾಮೀಜಿಗಳ ಬಗ್ಗೆ ಮಾತನಾದಿರೋದನ್ನ ಹಿಂಪಡೆಯಬೇಕು. ರಾಜಕೀಯವಾಗಿ ಟೀಕಿಸುವ ನೆಪದಲ್ಲಿ ಸ್ವಾಮೀಜಿಗಳ ಬಗೆಗೆ ತಪ್ಪು ಅಭಿಪ್ರಾಯ ಬರೋ ಹಾಗೆ ಮಾತನಾಡಿದ್ದಾರೆ. 

ಜಾತಿಯಿಂದ ಚುನಾವಣೆಯಲ್ಲಿ ಗೆಲ್ಲಲು ಅಸಾಧ್ಯ: ಮಠಗಳು ಅಭಿವೃದ್ಧಿ ಹಾಗೂ ಶಿಕ್ಷಣ ನೀಡುವಲ್ಲಿ ಮುಂದಿವೆ. ರಾಜಕೀಯದವರು ಮಾಡದ ಕೆಲಸಗಳನ್ನು ಮಠಗಳು ಮಾಡಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಎಲ್ಲರ ಮತ ಪಡೆದು ಗೆಲ್ಲೋದು. ಒಂದು ಜಾತಿಯಿಂದ ಚುನಾವಣೆಯಲ್ಲಿ ಗೆಲ್ಲಲು ಅಸಾಧ್ಯ. ಜಾತಿಯವರು ನಿಂತಾಗ ಜಾತಿಯವರು ಹೆಚ್ಚು ಬೆಂಬಲ ನೀಡಿರಬಹುದೆ ಹೊರತು ಒಂದೇ ಜಾತಿಯಿಂದ ಮುಖ್ಯಮಂತ್ರಿ ಆಗಲು ಅಸಾಧ್ಯ, ಕರ್ಮದಿಂದ ಕಾಯಕ, ಯೋಗ್ಯತೆ, ವ್ಯಕ್ತಿತ್ವ ನಿರ್ಮಾಣವಾಗುತ್ತೆ ಎಂದರು.

ಸಿದ್ದು, ಡಿಕೆಶಿ ಇಬ್ಬರೂ ಕಾಂಗ್ರೆಸ್‌ನ ಎರಡು ಕಣ್ಣು ಇದ್ದ ಹಾಗೆ‌: ಸಚಿವೆ ಲಕ್ಷ್ಮಿ ಹೆಬ್ಬಾಳಕರ

ಬಿಜೆಪಿ ಮೇಲೆ 40% ಆರೋಪ ಮಾಡಿದ್ದವರು 100% ಲೂಟಿಗಿಳಿದಿದ್ದಾರೆ: ಯಾವುದೇ ಜಾತಿಯಲ್ಲಿ ಹುಟ್ಟಿದ್ರು ಜಾತಿಯ ಕಾರಣಕ್ಕೆ ಶ್ರೇಷ್ಠನಾಗಲು ಸಾಧ್ಯವಿಲ್ಲ. ಈ ಚರ್ಚೆಯ ಬೆಳವಣಿಗೆ ಆಡಳಿತದ ಮೇಲೆ ಉತ್ತಮ ಪರಿಣಾಮ ಬಿರೋದಿಲ್ಲ. ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ, ಭ್ರಷ್ಟಾಚಾರ ತಾಂಡವಾಡುತ್ತಿದೆ. ಬಿಜೆಪಿ ಮೇಲೆ 40% ಆರೋಪ ಮಾಡಿದ್ದವರು 100% ಲೂಟಿಗಿಳಿದಿದ್ದಾರೆ. ಜನರಿಗೆ ಬೇಕಾದ ಸಂಗತಿ ಬಿಟ್ಟು ಬೇರೆಲ್ಲ ಬೆಳವಣಿಗೆ ಒಳ್ಳೆಯದಲ್ಲಾ. ಸದಾನಂದಗೌಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೆ. ನಾನು ಜಾತಿಗಿಂತ ಸಿದ್ಧಾಂತಕ್ಕೆ ಜಾಸ್ತಿ ಒತ್ತು ಕೊಡ್ತೇನೆ ಎಂದು ಸಿ.ಟಿ.ರವಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆರ್‌ಟಿಒ ಕಚೇರಿಗಳಲ್ಲಿ ಬ್ರೋಕರ್‌ ಹಾವಳಿ ತಡೆಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ
ಶಾಲಾ-ಕಾಲೇಜು ಹುಡುಗಿಯರಿಗೂ ಋತುಚಕ್ರ ರಜೆ?: ಸಂಪುಟ ಸಭೆಯಲ್ಲಿ ಕಾಯ್ದೆಗೆ ಅನುಮೋದನೆ ಸಾಧ್ಯತೆ