ರಾಮನ ಹೆಸರಿದ್ದರೆ ಕಾಂಗ್ರೆಸ್ಸಿಗರಿಗೆ ಅಲರ್ಜಿನಾ: ಸಿ.ಪಿ.ಯೋಗೇಶ್ವರ್

Published : Oct 26, 2023, 03:00 AM IST
ರಾಮನ ಹೆಸರಿದ್ದರೆ ಕಾಂಗ್ರೆಸ್ಸಿಗರಿಗೆ ಅಲರ್ಜಿನಾ: ಸಿ.ಪಿ.ಯೋಗೇಶ್ವರ್

ಸಾರಾಂಶ

ರಾಮ ಅಂದರೆ ಕಾಂಗ್ರೆಸ್‌ನವರಿಗೆ ಅಲರ್ಜಿನ. ರಾಮನ ಹೆಸರು ಅವರಿಗೆ ಇಷ್ಟ ಇಲ್ವಾ. ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಮಾಡುವುದರಿಂದ ಏನು ಬದಲಾವಣೆ ಆಗುತ್ತದೆ. ಅದರ ಅವಶ್ಯಕತೆ ಇಲ್ಲ ಅನಿಸುತ್ತಿದೆ. 

ರಾಮನಗರ (ಅ.26): ರಾಮ ಅಂದರೆ ಕಾಂಗ್ರೆಸ್‌ನವರಿಗೆ ಅಲರ್ಜಿನ. ರಾಮನ ಹೆಸರು ಅವರಿಗೆ ಇಷ್ಟ ಇಲ್ವಾ. ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಮಾಡುವುದರಿಂದ ಏನು ಬದಲಾವಣೆ ಆಗುತ್ತದೆ. ಅದರ ಅವಶ್ಯಕತೆ ಇಲ್ಲ ಅನಿಸುತ್ತಿದೆ. ಜಿಲ್ಲೆಯ ಯಾವುದೇ ಭಾಗವನ್ನು ಸೇರಿಸುವ ಬೇರ್ಪಡಿಸುವ ಕೆಲಸ ಮಾಡಿದರೆ ಜನರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಅವರು, ರಾಮನಗರ ಜಿಲ್ಲೆಗೆ ಈಗಿರುವ ರಾಮನಗರ ಹೆಸರೇ ಸೂಕ್ತವಾಗಿದೆ. ರಾಮನ ಹೆಸರಿನಲ್ಲಿ ಶ್ರೀರಾಮಚಂದ್ರ ಆಡಳಿತ ಮಾಡಿದಂತೆ ಆಡಳಿತ ಮಾಡಲು ಇನ್ಯಾರಿಗೆ ಆಗುತ್ತದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಆಡಳಿತವನ್ನು ಸುಧಾರಣೆ ಮಾಡುವತ್ತಾ ಗಮನ ಹರಿಸಲಿ ಎಂದು ಸಲಹೆ ನೀಡಿದರು.

ರಾಮನಗರಕ್ಕೆ ಮಂಜೂರಾಗಿರುವ ರಾಜೀವ್‌ ಗಾಂಧಿ ಆರೋಗ್ಯ ವಿವಿಯಲ್ಲಿನ ಮೆಡಿಕಲ್‌ ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರ ಮಾಡುವ ನಿರ್ಧಾರ ಮಾಡಿದಾಗ ಇಡೀ ಜಿಲ್ಲೆ ಪ್ರತಿಭಟನೆ ಮಾಡಿತು. ಬೆಂಗಳೂರಿನ ಕಸವನ್ನು ರಾಮನಗರಕ್ಕೆ ತಂದು ಹಾಕುವ ತೀರ್ಮಾನಕ್ಕೂ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ. ಈಗ ರಾಮನಗರ ಜಿಲ್ಲೆಯನ್ನು ಸೇರಿಸುವ ಬೇರ್ಪಡಿಸುವ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಜನರ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ರಾಮನಗರ ಜಿಲ್ಲೆ ಆಡಳಿತಾತ್ಮಕವಾಗಿ ಸರಿಯಾಗಿದೆ. 25 - 30 ವರ್ಷಗಳ ಹಿಂದೆ ಬೆಂಗಳೂರು ಬೆಳೆದಿರಲಿಲ್ಲ. 

ಹುಲಿ ಚರ್ಮದ ಮೇಲೆ ಕುಳಿತ ವಿನಯ್ ಫೋಟೋ ವೈರಲ್: ಆಧಾರ ಸಹಿತವಾಗಿ ಸ್ಪಷ್ಟನೆ ಕೊಟ್ಟ ಗುರೂಜಿ

ಆಗ ನಮ್ಮ ಎಲ್ಲ ತಾಲೂಕುಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯೊಂದಿಗೆ ಸೇರಿಕೊಂಡಿತ್ತು. ಅಧಿಕಾರ ವಿಕೇಂದ್ರಿಕರಣ ಹಾಗೂ ಬೆಂಗಳೂರು ಬೆಳೆಯುತ್ತಿದ್ದ ಕಾರಣ ಅದರ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಮನಗರ ಜೊತೆಗೆ ಚಿಕ್ಕಬಳ್ಳಾಪುರ ಜಿಲ್ಲೆ ಅಸ್ತಿತ್ವಕ್ಕೆ ಬಂದಿತು. ಆ ಜಿಲ್ಲೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ. ರಾಮನಗರ ಜಿಲ್ಲೆಯ ಜನರು ಯಾವುದೇ ಸರ್ಕಾರಿ ಕೆಲಸ ಕಾರ್ಯ ಆಗಬೇಕೆಂದರೆ ಬೆಂಗಳೂರಿಗೆ ಬಂದು ಹೋಗುವುದೇ ದೊಡ್ಡ ಸವಾಲು. ಬೆಂಗಳೂರಿಗೆ ಬಂದು ಹೋಗಲು ಒಂದು ದಿನ ಆಗಿ ಹೋಗುತ್ತದೆ. 

ಸಂಸದರಿಗಿಂತಲೂ ಬಿಜೆಪಿಯಲ್ಲಿ ನಾನು ಹಿರಿಯ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

ಹಾಗಾಗಿ ಆಡಳಿತ ದೃಷ್ಟಿಯಿಂದ ರಾಮನಗರ ಜಿಲ್ಲೆ ಇರುವುದು ಸೂಕ್ತ . ಆ ಜಿಲ್ಲೆಯಲ್ಲಿ ಏನಾದರು ಸುಧಾರಣೆ ತರಬೇಕಿದೆ. ಅದನ್ನು ಬಿಟ್ಟು ಡಿ.ಕೆ.ಶಿವಕುಮಾರ್ ಇಂತಹ ಹೇಳಿಕೆ ಏಕೆ ಕೊಟ್ಟರು ಎಂಬುದು ನನಗೂ ಆಶ್ಚರ್ಯವಾಗುತ್ತಿದೆ ಎಂದರು. ರಾಮನಗರ ಜಿಲ್ಲೆ ರಾಮನಗರಕ್ಕೆ ಸೂಕ್ತವಾಗಿದ್ದು, ಇದರಿಂದ ಯಾರಿಗೂ ತೊಂದರೆ ಆಗುತ್ತಿಲ್ಲ. ಜನಸಾಮಾನ್ಯರಿಗೆ ಏನು ತೊಂದರೆ ಇಲ್ಲ. ಆದರೆ, ಡಿ.ಕೆ.ಶಿವಕುಮಾರ್ ಅವರಿಗೆ ಏನು ತೊಂದರೆ ಆಗುತ್ತಿದೆ ಎಂಬುದನ್ನು ಅವರೇ ಹೇಳಬೇಕು. ಇದನ್ನು ವಿವಾದ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಸಿ.ಪಿ.ಯೋಗೇಶ್ವರ್‌ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ