ಪಂಚರಾಜ್ಯಗಳ ಗೆಲವು ಮೋದಿ ನಾಯಕತ್ವಕ್ಕೆ ಸಂದ ಗೌರವ: ಶಾಸಕ ಸಿದ್ದು ಸವದಿ

Published : Dec 04, 2023, 01:00 AM IST
ಪಂಚರಾಜ್ಯಗಳ ಗೆಲವು ಮೋದಿ ನಾಯಕತ್ವಕ್ಕೆ ಸಂದ ಗೌರವ: ಶಾಸಕ ಸಿದ್ದು ಸವದಿ

ಸಾರಾಂಶ

ಕಾಂಗ್ರೆಸ್ ಎಲ್ಲ ರಾಜ್ಯಗಳಲ್ಲಿ ಬಿಟ್ಟಿ ಭಾಗ್ಯಗಳ ಭರಾಟೆಗಳ ಬೊಗಳೆ ಬಿಟ್ಟಿತ್ತಾದರೂ ಕರ್ನಾಟಕ ರಾಜ್ಯದಲ್ಲಿ ಭಾಗ್ಯಗಳ ನೆಪದಲ್ಲಿ ಅಮಾಯಕ ಜನತೆ ಬೆಲೆ ಏರಿಕೆ ಸೇರಿದಂತೆ ಎಲ್ಲ ಸೌಲಭ್ಯಗಳಿಗೂ ವಿಪರೀತ ಆರ್ಥಿಕ ಹೊರೆಯನ್ನನುಭವಿಸುತ್ತ ಶಪಿಸುತ್ತದ್ದನ್ನು ಮನಗಂಡ ಉತ್ತರದ ರಾಜ್ಯಗಳು ಬಿಜೆಪಿಗೆ ಆಶೀರ್ವದಿಸುವ ಮೂಲಕ ಕಾಂಗ್ರೆಸ್ಸಿಗರ ಬಿಟ್ಟಿ ಭಾಗ್ಯಗಳಿಗೆ ಮೊಳೆ ಹೊಡೆದು ನೇತಾಕಿದ್ದಾರೆ: ತೇರದಾಳ ಶಾಸಕ ಸಿದ್ದು ಸವದಿ 

ರಬಕವಿ-ಬನಹಟ್ಟಿ(ಡಿ.04): ವಿಶ್ವದಲ್ಲಿ ಭಾರತಕ್ಕೆ ಅಗ್ರಸ್ಥಾನ ತಂದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ದೇಶನಿಷ್ಠೆ, ಜನಪರ ಮತ್ತು ಅಭಿವೃದ್ಧಿ ಪರ ಆಡಳಿತಕ್ಕೆ ಈ ಬಾರಿ ಪಂಚರಾಜ್ಯಗಳ ಚುನಾವಣೆಯಲ್ಲಿ ಆಯಾ ರಾಜ್ಯಗಳ ಜನತೆ ಗೆಲವು ನೀಡಿದ್ದು, ಮುಂದಿನ ಬಾರಿಯೂ ದೇಶದ ಪ್ರಧಾನಿ ನರೇಂದ್ರ ಮೋದಿ ಎಂಬುದನ್ನು ಪುಷ್ಠೀಕರಿಸಿವೆ. ಪಂಚರಾಜ್ಯಗಳ ಗೆಲವು ಮೋದಿ ನಾಯಕತ್ವಕ್ಕೆ ಸಂದ ಗೌರವವಾಗಿವೆ ಎಂದು ತೇರದಾಳ ಶಾಸಕ ಸಿದ್ದು ಸವದಿ ನುಡಿದರು.

ಬನಹಟ್ಟಿಯ ಬಿಜೆಪಿ ಕಚೇರಿಯಿಂದ ಕಾರ್ಯಕರ್ತರೊಡನೆ ನೂಲಿನ ಗಿರಣಿ, ವೈಭವ ಚಿತ್ರಮಂದಿರ, ಗಾಂಧಿ ಸರ್ಕಲ್, ಮುಖ್ಯ ಮಾರುಕಟ್ಟೆ, ಈಶ್ವರಲಿಂಗ ಮೈದಾನ ಮೂಲಕ ಬಿಜೆಪಿ ಮತ್ತು ಮೋದಿ ಪರ ಘೋಷಣೆಗಳನ್ನು ಕೂಗುತ್ತ, ಪಟಾಕಿ ಸಿಡಿಸಿ, ಸಿಹಿ ಹಂಚುತ್ತ ಮೆರವಣಿಗೆಯಲ್ಲಿ ಸಾಗಿದ ಅವರು, ರಾಜ್ಯ ಹೆದ್ದಾರಿ ಬಳಿಯಲ್ಲಿ ಕಾರ್ಯಕರ್ತರನ್ನು ,ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.

ಬಾದಾಮಿ: ನಾನು ರಾಜಕಾರಣ ಮಾಡುವ ಶಾಸಕನಲ್ಲ, ಕಾಂಗ್ರೆಸ್‌ ಎಂಎಲ್‌ಎ ಚಿಮ್ಮನಕಟ್ಟಿ

ಕಾಂಗ್ರೆಸ್ ಎಲ್ಲ ರಾಜ್ಯಗಳಲ್ಲಿ ಬಿಟ್ಟಿ ಭಾಗ್ಯಗಳ ಭರಾಟೆಗಳ ಬೊಗಳೆ ಬಿಟ್ಟಿತ್ತಾದರೂ ಕರ್ನಾಟಕ ರಾಜ್ಯದಲ್ಲಿ ಭಾಗ್ಯಗಳ ನೆಪದಲ್ಲಿ ಅಮಾಯಕ ಜನತೆ ಬೆಲೆ ಏರಿಕೆ ಸೇರಿದಂತೆ ಎಲ್ಲ ಸೌಲಭ್ಯಗಳಿಗೂ ವಿಪರೀತ ಆರ್ಥಿಕ ಹೊರೆಯನ್ನನುಭವಿಸುತ್ತ ಶಪಿಸುತ್ತದ್ದನ್ನು ಮನಗಂಡ ಉತ್ತರದ ರಾಜ್ಯಗಳು ಬಿಜೆಪಿಗೆ ಆಶೀರ್ವದಿಸುವ ಮೂಲಕ ಕಾಂಗ್ರೆಸ್ಸಿಗರ ಬಿಟ್ಟಿ ಭಾಗ್ಯಗಳಿಗೆ ಮೊಳೆ ಹೊಡೆದು ನೇತಾಕಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶಿವಾನಂದ ಗಾಯಕವಾಡ, ಆನಂದ ಕಂಪು, ದುಂಡಪ್ಪ ಮಾಚಕನೂರ, ಶ್ರೀಶೈಲ ಯಾದವಾಡ, ಚಿದಾನಂದ ಹೊರಟ್ಟಿ, ಶಿವಾನಂದ ಬುದ್ನಿ, ಪ್ರವೀಣ ದಬಾಡಿ, ಚಂದ್ರಶೇಖರ ಮಿರ್ಜಿ, ಲಕ್ಕಪ್ಪ ಪಾಟೀಲ, ಬಾಬಾಗೌಡ ಪಾಟೀಲ, ಈಶ್ವರ ಪಾಟೀಲ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಮೆರವಣಿಗೆಯಲ್ಲಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಬದಲಿಗೆ ವರಿಷ್ಠರು ಸದ್ಯ ಒಪ್ಪಿಲ್ಲ : ಯತೀಂದ್ರ
ಪರಿಷತ್ತಿನಲ್ಲಿ ಬಸವರಾಜ ಹೊರಟ್ಟಿ ಬದಲಾವಣೆ ಇಲ್ಲ, ಈ ಕುರಿತು ಚರ್ಚೆ ಆಗಿಲ್ಲ: ಸಲೀಂ ಅಹ್ಮದ್