
ಬಾಗಲಕೋಟೆ, (ಮೇ.19): ಮಹಾರಾಷ್ಟ್ರದಲ್ಲಿ ನಮ್ಮ ರಾಜ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಜನರು ಸಾಯುತ್ತಿದ್ದಾರೆ. ಆ ಬಗ್ಗೆ ಮಾತನಾಡದೆ ನಮ್ಮ ರಾಜ್ಯದ ಬಗ್ಗೆ ಮಾತಾಡುತ್ತೀರಿ. ನಿಮಗೆ ನಾಚಿಕೆ ಆಗಬೇಕು, ತಾಕತ್ ಇದ್ರೆ ಮಹಾರಾಷ್ಟ್ರದ ಬಗ್ಗೆ ಮಾತಾಡಿ ಎಂದು ತೇರದಾಳ ಶಾಸಕ ಸಿದ್ದು ಸವದಿ, ಕಾಂಗ್ರೆಸ್ನ ಮಾಜಿ ಶಾಸಕಿ ಉಮಾಶ್ರೀಗೆ ಸವಾಲು ಹಾಕಿದ್ದಾರೆ.
ಇಂದು (ಬುಧವಾರ) ನಗರದಲ್ಲಿ ಮಾತನಾಡಿದ ಅವರು, ಅನೇಕ ಜನರು ಕೋವಿಡ್ನಿಂದ ಸಾಯುತ್ತಿದ್ದಾರೆ. ಆದರೆ ಕಾಂಗ್ರೆಸ್ನವರು ಸಾವಿನ ಸಂದರ್ಭದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಕೋವಿಡ್ ನಮಗಷ್ಟೇ ಬಂದಿಲ್ಲ ಇಡೀ ಜಗತ್ತಿಗೆ ಬಂದಿದೆ ಎಂದರು.
ಬಿಜೆಪಿ ಶಾಸಕ ಸಿದ್ದು ಸವದಿ ಎಳೆದಾಡಿದ್ದ ಪುರಸಭೆ ಸದಸ್ಯೆಗೆ ಗರ್ಭಪಾತ
ಡಿ.ಕೆ. ಶಿವಕುಮಾರ್ ನಿನ್ನೆ ಹೇಳ್ತಾನೆ, ಇದೇ ಸರ್ಕಾರ ಕೋವಿಡ್ ತಂದಿದೆ ಅಂತಾ. ಇವರಿಗೆ ಮಾನ ಮರ್ಯಾದೆ ಇಲ್ವಾ? ಇವರು ಸಿಎಂ ಕ್ಯಾಂಡಿಡೇಟ್ ಆದವ್ರಿವ್ರು. ಮಾತಾಡೋಕು ಒಂದು ನಾಲಿಗೆ ಇದೆ. ನಿನಗೆ ತಾಕತ್ತಿದ್ರೆ ಮಹಾರಾಷ್ಟ್ರದ ಬಗ್ಗೆ ಮಾತನಾಡು ಎಂದು ಕಿಡಿಕಾರಿದರು.
ನಮ್ಮ ಮೇಡಮ್ ಬೆಂಗಳೂರಲ್ಲಿ ಕೂತು ವಿಡಿಯೋ ಮಾಡಿ ಕಳಿಸ್ತಾರೆ. ಅಲ್ಲಿ ಮೂಲೆಯೊಳಗೆ ಕೂತು ವಿಡಿಯೋ ಮಾಡಬೇಡಿ. ಬನ್ನಿ ನಾವು- ನೀವು ಕ್ಷೇತ್ರಕ್ಕೆ, ಹಳ್ಳಿ ಹಳ್ಳಿಗೆ ಹೋಗೋಣ ಎಂದು ಉಮಾಶ್ರೀ ವಿರುದ್ಧ ಸಿದ್ದು ಸವದಿ ಹರಿಹಾಯ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.