ಸಿದ್ದರಾಮಯ್ಯ ಬರ್ತಾರಂದ್ರೆ ಜನತೆ ಭಯ ಪಡ್ತಾರೆ: ಬಿಜೆಪಿ ನಾಯಕ ನಾಗರಾಜ

Published : Nov 24, 2022, 12:00 PM IST
ಸಿದ್ದರಾಮಯ್ಯ ಬರ್ತಾರಂದ್ರೆ ಜನತೆ ಭಯ ಪಡ್ತಾರೆ: ಬಿಜೆಪಿ ನಾಯಕ ನಾಗರಾಜ

ಸಾರಾಂಶ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಆಗಮಿಸುತ್ತಾರೆ ಎಂದು ತಿಳಿದು ಕಾಂಗ್ರೆಸ್‌ನ ಕೆಲವು ಮುಖಂಡರು ಅವಿತು ಕುಳಿತಿದ್ದಾರೆ: ನಾಗರಾಜ 

ಕಾರವಾರ(ನ.24): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಆಗಮಿಸುತ್ತಾರೆ ಎಂದರೆ ಜನರು ಭಯಪಡುತ್ತಾರೆ ಎಂದು ಬಿಜೆಪಿ ಮಾಧ್ಯಮ ವಕ್ತಾರ ನಾಗರಾಜ ನಾಯಕ ಲೇವಡಿ ಮಾಡಿದರು. ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಕುಮಟಾಕ್ಕೆ ಬಂದಾಗಲೇ ಪರೇಶ ಮೇಸ್ತ ಕಾಣೆಯಾಗಿದ್ದರು. ಎರಡು ದಿನದ ಬಳಿಕ ಕಳೇಬರ ಸಿಕ್ಕಿತ್ತು. ಮತ್ತೆ ಜಿಲ್ಲೆಗೆ ಸಿದ್ದರಾಮಯ್ಯ ಬಂದರೆ ಏನಾಗುತ್ತದೆಯೋ ಎನ್ನುವ ಭಯ ಜನರನ್ನು ಕಾಡುತ್ತಿದೆ ಎಂದು ಟೀಕಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಆಗಮಿಸುತ್ತಾರೆ ಎಂದು ತಿಳಿದು ಕಾಂಗ್ರೆಸ್‌ನ ಕೆಲವು ಮುಖಂಡರು ಅವಿತು ಕುಳಿತಿದ್ದಾರೆ. ನಾಮಪತ್ರ ಅರ್ಜಿ ನೀಡಲು ಲಕ್ಷ ಹಣ ನೀಡಬೇಕು ಎಂದಾದರೆ ಅಧಿಕಾರಕ್ಕೆ ಬಂದರೆ, ಉಳಿದ ಸ್ಥಾನಮಾನ ಸಿಗಬೇಕಾದರೆ ಏನೇನು? ಎಷ್ಟೆಷ್ಟು? ನೀಡಬೇಕು ಎಂದರು.

ಬಿಜೆಪಿ ಸಂಸದರು, ಶಾಸಕರು ರಾಜೀನಾಮೆ ನೀಡಲಿ: ಐವಾನ್‌ ಡಿಸೋಜಾ

ಬಿಜೆಪಿಗರಿಗೆ ಕಾಂಗ್ರೆಸ್‌ ಮುಖಂಡ ಐವನ್‌ ಡಿಸೋಜ ಸೇರಿದಂತೆ ಹಲವರು ಪ್ರಶ್ನಿಸಿದ್ದಾರೆ. ನಾಳೆ ಬರುವ ಮುಖಂಡರಿಗೆ ಬಿಜೆಪಿಯಿಂದ ಪ್ರಶ್ನೆ ಕೇಳುತ್ತೇವೆ. ಮಾತೆತ್ತಿದರೆ ಲಾಯರ್‌ಗಿರಿ ಮಾಡಿದ್ದೇನೆ ಎನ್ನುವ ಸಿದ್ದರಾಮಯ್ಯ ಇದಕ್ಕೆ ಉತ್ತರಿಸಬೇಕು ಎಂದರು.

ಪರೇಶ ಮೇಸ್ತ ಮೃತದೇಹ ಸಿಕ್ಕ ಕೆಲವೇ ಹೊತ್ತಿನಲ್ಲಿ ಅಂದಿನ ಡಿಸಿ ಬಳಿ ಸಹಜ ಸಾವು ಎಂದು ಹೇಳಿಸಿರುವುದು ಏಕೆ? ಅವರಿಗೆ ಏಕೆ? ಹೇಗೆ ಅಧಿಕಾರ ನೀಡಿದ್ದೀರಿ? ಶೆಟ್ಟಿಕೆರೆ ಬಳಿ ಕಳೇಬರ ಸಿಗುವ ಮೊದಲೇ ಅಧಿಕಾರಿಗಳನ್ನು, ಸಿಬ್ಬಂದಿ ನಿಯೋಜನೆ ಮಾಡಿರುವುದು ಏಕೆ? ಕಳೇಬರ ಸಿಕ್ಕರೆ ಸಮೀಪದ ಸರ್ಕಾರಿ ವೈದ್ಯರಿಂದ ಮರಣೋತ್ತರ ಪರೀಕ್ಷೆ ಮಾಡಬೇಕು? ಮಣಿಪಾಲದಿಂದ ವೈದ್ಯರನ್ನು ಏಕೆ ಕರೆಸಲಾಗಿತ್ತು? ಅಂತಹ ಅವಶ್ಯಕತೆ ಏನಿತ್ತು? ಡಿಸಿಗೆ ಮರಣೋತ್ತರ ವರದಿ ಯಾವಾಗ ಸಿಕ್ಕಿದೆ? ಪೊಲೀಸ್‌ ತನಿಖೆಯಲ್ಲಿ ಡಿಸಿ ಮೂಗು ತೂರಿಸಬಹುದೇ? ಎಂದು ಪ್ರಶ್ನೆಗಳ ಸುರಿಮಳೆಗೈದರು.

ಮೂಲ ಬಿಜೆಪಿ, ವಲಸೆ ಬಿಜೆಪಿಗ ಎಂಬ ಪ್ರಶ್ನೆ ನನ್ನೆದುರಿಗಿಲ್ಲ: ಸಚಿವ ಹೆಬ್ಬಾರ

ಒಂದು ತನಿಖಾ ತಂಡದಿಂದ ಮತ್ತೊಂದು ತಂಡಕ್ಕೆ ಪ್ರಕರಣ ಹಸ್ತಾಂತರ ಬೇಕಾದರೆ ಸಾಕ್ಷ್ಯ ಸರಿಯಾಗಿರಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲೆ ಇರುತ್ತದೆ. ಎಷ್ಟುಜವಾಬ್ದಾರಿಯಿಂದ ಈ ಕೆಲಸ ಮಾಡಿದ್ದೀರಿ? ಕೊನೆ ಬಾರಿ ನೋಡಿದ ವ್ಯಕ್ತಿ ಹೇಳಿಕೆಯಲ್ಲಿ ಗೊಂದಲಗಳಿವೆ. ಏಕೆ ರೀತಿ ಗೊಂದಲ ಉಂಟಾಗಿದೆ ಎಂಬುದಕ್ಕೆ ಸಿದ್ದರಾಮಯ್ಯನವರೇ ಉತ್ತರಿಸಬೇಕು ಎಂದರು.

ಪ್ರಕರಣದಲ್ಲಿ ಏನೂ ಸತ್ಯಾಸತ್ಯತೆ ಇಲ್ಲವೆಂದು ಡಿಸಿ ಹೇಳಿಕೆ ನೀಡಿದ ಬಳಿಕ ಏಕೆ ಆರೋಪಿಗಳನ್ನು ಬಂಧಿಸಿದ್ದೀರಿ? ಐವನ್‌ ಡಿಸೋಜಾ ಮೊದಲು ನೀವು ಉತ್ತರಿಸಿ. ಬಳಿಕ ನಿಮ್ಮ ಪ್ರಶ್ನೆಗಳಿಗೆ ನಾವು ಉತ್ತರಿಸುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಮನೋಜ ಭಟ್‌, ನಾಗೇಶ ಕುರ್ಡೇಕರ, ರೇಷ್ಮಾ ಮಾಳ್ಸೇಕರ ಇದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ