
ಕೋಲ್ಕತಾ(ಮಾ.27): ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಚಾರಕ್ಕೆ ತೆರಳಿದ ಎಲ್ಲ ರಾಜ್ಯಗಳಲ್ಲಿ ತಾವು ಆ ರಾಜ್ಯದ ಮಗಳು ಎಂಬುದಾಗಿ ಘೋಷಿಸುತ್ತಾರೆ. ಮೊದಲಿಗೆ ಅವರು ತಮ್ಮ ತಂದೆ ಯಾರೆಂಬುದನ್ನು ಖಚಿತಪಡಿಸಿಕೊಳ್ಳಲಿ ಎಂದು ಹೇಳುವ ಮೂಲಕ ಬಿಜೆಪಿ ನಾಯಕ ದಿಲೀಪ್ ಘೋಷ್ ವಿವಾದ ಸೃಷ್ಟಿಸಿದ್ದಾರೆ.
ಸೋಮವಾರ ಮಾತನಾಡಿದ ಅವರು , ‘ಮಮತಾ ಅವರು ತ್ರಿಪುರಾದಲ್ಲಿ ತ್ರಿಪುರಾದ ಮಗಳು ಎನ್ನುತ್ತಾರೆ. ಗೋವಾಕ್ಕೆ ಪ್ರಚಾರಕ್ಕೆ ಹೋದಾಗ ಗೋವಾದ ಮಗಳು ಎನ್ನುತ್ತಾರೆ. ಮೊದಲಿಗೆ ಅವರು ತಮ್ಮ ತಂದೆ ಯಾರೆಂದು ಖಚಿತಪಡಿಸಿಕೊಳ್ಳಲಿ’ ಎಂದು ಹೇಳಿದರು.
ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಲೆಗೆ ಗಂಭೀರ ಗಾಯ, ಆಸ್ಪತ್ರೆ ದಾಖಲು!
ಇದಕ್ಕೆ ಟಿಎಂಸಿ ತಿರುಗೇಟು ನೀಡಿದ್ದು, ಮಮತಾ ಭಾರತದ ಮಗಳು ಎಂದು ಪಕ್ಷದ ವಕ್ತಾರ ಕುನಾಲ್ ಘೋಷ್ ತಿಳಿಸಿದ್ದರೆ, ದುರ್ಗಾಪುರದ ಅವರ ಪ್ರತಿಸ್ಪರ್ಧಿ ಕೀರ್ತಿ ಆಜಾದ್ ‘ದಿಲೀಪ್ ಅವರ ಮಾನಸಿಕ ಸ್ಥಿತಿ ಅಸ್ವಸ್ಥವಾಗಿದ್ದು, ಅವರು ಹುಚ್ಚಾಸ್ಪತ್ರೆಯಲ್ಲಿರಬೇಕಿತ್ತು’ ಎಂದು ಟೀಕಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.