ಇತಿಹಾಸ ತಿರುಚಿತ್ತಿರುವ ಬಿಜೆಪಿ: ಅರವಿಂದ ದಳವಾಯಿ

Published : Feb 01, 2023, 08:00 PM IST
ಇತಿಹಾಸ ತಿರುಚಿತ್ತಿರುವ ಬಿಜೆಪಿ: ಅರವಿಂದ ದಳವಾಯಿ

ಸಾರಾಂಶ

ಗಾಂಧೀಜಿ ದೇಶದ ಸಮಗ್ರತೆ, ಭಾವೈಕ್ಯ ಉಳಿಸಲಿಕ್ಕೆ, ಕೋಮು ಸೌರ್ಹಾದ ಕಾಪಾಡಲಿಕ್ಕೆ ಹಾಗೂ ದೇಶವನ್ನು ಒಂದಾಗಿ ನಿಲ್ಲಿಸಲಿಕ್ಕೆ ಶ್ರಮಿಸಿದವರು. ಬಿಜೆಪಿಯವರು ಇಂದು ಇತಿಹಾಸ ತಿರುಚುತ್ತಿದ್ದಾರೆ. ಯುವಕರು ಸತ್ಯವನ್ನು ಅರಿಯಲು ಇತಿಹಾಸವನ್ನು ಅಭ್ಯಸಿಸಬೇಕು ಎಂದ ಅರವಿಂದ ದಳವಾಯಿ

ಮೂಡಲಗಿ(ಫೆ.01): ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ನೇತೃತ್ವದಲ್ಲಿ ನಡೆದ ಭಾರತ ಜೋಡೋ ಪಾದಯಾತ್ರೆ ಎಲ್ಲರನ್ನೂ ಜೋಡಿಸುವ ಯಾತ್ರೆ ಇಂದಿಗೆ ಯಶಸ್ವಿಗೊಂಡು ಸ್ವಂಪನ್ನಗೊಂಡಿದೆ ಎಂದು ಕೆಪಿಸಿಸಿ ಸದಸ್ಯ ಹಾಗೂ ಅರಭಾವಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆಕಾಂಕ್ಷಿ ಅರವಿಂದ ದಳವಾಯಿ ಹೇಳಿದರು.

ಅವರು ಸೋಮವಾರ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಭಾರತ ಜೋಡೋ ಯಾತ್ರೆಯ ಸಮಾರೋಪ ಸಮಾರಂಭ ನಿಮಿತ್ತ ಧ್ವಜಾರೋಹಣ ನೆರವೇರಿಸಿ, ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಗಾಂಧೀಜಿ ದೇಶದ ಸಮಗ್ರತೆ, ಭಾವೈಕ್ಯ ಉಳಿಸಲಿಕ್ಕೆ, ಕೋಮು ಸೌರ್ಹಾದ ಕಾಪಾಡಲಿಕ್ಕೆ ಹಾಗೂ ದೇಶವನ್ನು ಒಂದಾಗಿ ನಿಲ್ಲಿಸಲಿಕ್ಕೆ ಶ್ರಮಿಸಿದವರು. ಬಿಜೆಪಿಯವರು ಇಂದು ಇತಿಹಾಸ ತಿರುಚುತ್ತಿದ್ದಾರೆ. ಯುವಕರು ಸತ್ಯವನ್ನು ಅರಿಯಲು ಇತಿಹಾಸವನ್ನು ಅಭ್ಯಸಿಸಬೇಕು ಎಂದರು.

ನನ್ನನ್ನು ಸೋಲಿಸುತ್ತೇವೆ ಎಂಬುದು ಬಿಜೆಪಿ ಭ್ರಮೆ: ಸತೀಶ ಜಾರಕಿಹೊಳಿ

ಕಾಂಗ್ರೆಸ್‌ ಮುಖಂಡರಾದ ಭೀಮಪ್ಪ ಹಂದಿಗುಂದ, ವಿ.ಪಿ.ನಾಯಕ ಮಾತನಾಡಿದರು. ಈ ಸಮಯದಲ್ಲಿ ಕೌಜಲಗಿ ಕಾಂಗ್ರೆಸ್‌ ಬ್ಲಾಕ್‌ ಸಮಿತಿ ಅಧ್ಯಕ್ಷ ಪ್ರಕಾಶ ಅರಳಿ, ಅರಬಾವಿ ಕಾಂಗ್ರೆಸ್‌ ಬ್ಲಾಕ್‌ ಸಮಿತಿ ಅಧ್ಯಕ್ಷ ಸುರೇಶ ಮಗದುಮ್ಮ, ರೈತ ಮುಖಂಡ ಗುಂಡಪ್ಪ ಕಮತೆ, ಮಲಿಕ್‌ ಕಳ್ಳಿಮನಿ, ಮಹಾಲಿಂಗಯ್ಯ ನಂದಗಾವಿಮಠ, ಬಸಗೌಡಾ ಪಾಟೀಲ, ಶಾಬನ್ನವರ, ವೆಂಕನಗೌಡಾ ಪಾಟೀಲ, ಮಲಿಕ್‌ ಲಾಡಖಾನ್‌, ಮಹಾದೇವ ಸಮಗಾರ, ಶೌಕತ್‌ ಮುಲ್ತಾನಿ, ಇರ್ಷಾದ್‌ ಪೈಲವಾನ, ರವಿ ಮೂಡಲಗಿ, ಇಮಾಂ ಹುನ್ನೂರ, ಕಲ್ಲಪ್ಪ ಸೋಲಾಪೂರ, ಮದಾರ ಜಕಾತಿ ಮತ್ತಿತರರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ