ನನ್ನ ಮುಗಿಸಲು ಭಗವಂತ ಖೂಬಾ ಷಡ್ಯಂತ್ರ: ಶಾಸಕ ಪ್ರಭು ಚವ್ಹಾಣ್‌ ವಾಗ್ದಾಳಿ

Published : Jul 21, 2025, 06:40 AM IST
Prabhu Chauhan

ಸಾರಾಂಶ

ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಅದ್ಧೂರಿಯಾಗಿ ನೆಂಟಸ್ತನ ಕಾರ್ಯಕ್ರಮ ಮಾಡಿದ್ದೇವೆ ಎಂದು ಶಾಸಕ ಪ್ರಭು ಚವ್ಹಾಣ್‌ ಹೇಳಿದರು.

ಬೀದರ್‌ (ಜು.21): ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಅದ್ಧೂರಿಯಾಗಿ ನೆಂಟಸ್ತನ ಕಾರ್ಯಕ್ರಮ ಮಾಡಿದ್ದೇವೆ. ಆದರೆ ಯುವತಿಗೆ ಮತ್ತೊಬ್ಬ ಯುವಕನೊಂದಿಗೆ ಅಕ್ರಮ ಸಂಬಂಧ ಇರುವುದನ್ನು ಅರಿತು ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಎರಡೂ ಕುಟುಂಬಸ್ಥರು ಸೇರಿ ರಾಜಿ ಸಂಧಾನ ಮೂಲಕ ಸಂಬಂಧ ಸ್ಥಗಿತಗೊಳಿಸಿದ 9 ತಿಂಗಳ ನಂತರ ಷಡ್ಯಂತ್ರ ರಚಿಸಿ ಮಾಜಿ ಸಂಸದ ಭಗವಂತ ಖೂಬಾ ಮತ್ತು ಅವರ ಟೀಮ್‌ ಕೆಲಸ ಮಾಡುತ್ತಿದೆ ಎಂದು ಶಾಸಕ ಪ್ರಭು ಚವ್ಹಾಣ್‌ ಆರೋಪಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಕೇಂದ್ರ ಸಚಿವ ಸ್ವಪಕ್ಷೀಯರೇ ಆದ ಭಗವಂತ ಖೂಬಾ ಅವರು 2014ರಿಂದ ಸತತವಾಗಿ ಇಂಥ ಕೆಲಸ ಮಾಡುತ್ತಿದ್ದಾರೆ ಎಂದು ಕೆಲವು ವಿಡಿಯೋ ಮತ್ತು ಫೋಟೋಗಳನ್ನು ಪ್ರದರ್ಶಿಸಿ ಖೂಬಾ ವಿರುದ್ಧ ಅಸಮಾಧಾನ ಹೊರ ಹಾಕಿದರು.

ಶಾಸಕ ಪ್ರಭು ಚವ್ಹಾಣ್‌ ಪುತ್ರನ ವಿರುದ್ಧ ರೇ*ಪ್‌ ಕೇಸ್‌ ದಾಖಲು: ಮಹಾರಾಷ್ಟ್ರ ಯುವತಿಯೊಂದಿಗೆ ಅತ್ಯಾ*ಚಾರ ಮಾಡಿರುವುದಾಗಿ ಮಾಜಿ ಸಚಿವ, ಶಾಸಕ ಪ್ರಭು ಚವ್ಹಾಣ್‌ ಪುತ್ರ ಪ್ರತೀಕ್‌ ಚವ್ಹಾಣ್‌ ವಿರುದ್ಧ ಬೀದರ್‌ನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಭಾನುವಾರ ಲೈಂಗಿಕ ದೌರ್ಜನ್ಯ, ಬೆದರಿಕೆ ಪ್ರಕರಣ ದಾಖಲಾಗಿದೆ. ಪ್ರತೀಕ್‌ ಚವ್ಹಾಣ್‌ ಮದುವೆಯಾಗುವದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಬಿಎನ್‌ಎಸ್‌ ಕಲಂ 376/2/n, 506, 366 ಹಾಗೂ 324 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಆಡಿಯೋ ಕ್ಲಿಪ್‌ ಪ್ರದರ್ಶನ: ಪ್ರತೀಕ್‌ ಚವ್ಹಾಣ್‌ ಜೊತೆ ನಿಶ್ಚಿತಾರ್ಥ ನಂತರವೂ ಮಹಾರಾಷ್ಟ್ರದ ಯುವತಿ ತನ್ನ ಪ್ರಿಯಕರನ ಜೊತೆ ನಿರಂತರವಾಗಿ ಮೊಬೈಲ್‌ನಲ್ಲಿ ಮಾತನಾಡಿರುವುದು. ವಿಡಿಯೋ ಕಾಲ್‌ನಲ್ಲಿ ಗಂಡನೆಂದು ಸಂಬೋಧಿಸಿ ಚಾಟ್‌ ಮಾಡಿರುವುದು ಅಲ್ಲದೆ ಪ್ರತೀಕ್‌ ಚವ್ಹಾಣ್‌ ಜತೆ ಮಾತನಾಡಿ, ನಾನು ತಪ್ಪು ಮಾಡಿದ್ದೇನೆ ಇನ್ನೊಂದು ಬಾರಿ ಇಂಥ ಕೆಲಸ ಮಾಡೋದಿಲ್ಲ ಎಂಬ ಮರಾಠಿ ಭಾಷೆಯ ಸಂಭಾಷಣೆಯ ಆಡಿಯೊ ಕ್ಲಿಪ್‌ವೊಂದು ಚವ್ಹಾಣ್‌ ಸುದ್ದಿಗೊಷ್ಠಿಯಲ್ಲಿ ಪ್ರದರ್ಶನ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ
ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ