
ಬೆಂಗಳೂರು(ಆ. 15) ಕಾಂಗ್ರೆಸ್ ನಿಂದಲೇ ಅಖಂಡ ಶ್ರೀನಿವಾಸ್ ಮೂರ್ತಿ ಖೆಡ್ಡಾ ತೋಡಲಾಗಿತ್ತಾ? ಹೀಗೊಂದು ಪ್ರಶ್ನೆ ಬೆಂಗಳೂರು ಗಲಭೆ ನಂತರ ಉದ್ಭವವಾಗಿದೆ.
ಡಿ.ಕೆ ಶಿವಕುಮಾರ್ ಅಧ್ಯಕ್ಷರಾಗುತ್ತದ್ದ ಹಾಗೆ ಅಖಂಡ ವಿರುದ್ಧ ಕಾರ್ಯಾಚರಣೆಗೆ ಕಾರ್ಪೋರೇಟರ್ ಸಂಪತ್ ಕುಮಾರ್ ಇಳಿದಿದ್ದರು ಎಂಬ ಮಾಹಿತಿ ಹರಿದಾಡುತ್ತಿದೆ. ಪುಲಕೇಶಿ ನಗರ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಲು ಡಿಕೆ ಶಿವಕುಮಾರ್ ಶಿಷ್ಯ ಕಸರತ್ತು ಆರಂಭಿಸಿದ್ದರು ಎಂಬುದು ಸ್ಥಳೀಯ ವಲಯದಿಂದ ಬಂದ ಮಾತು.
ಮಾಜಿ ಶಾಸಕ ಪ್ರಸನ್ನ ಕುಮಾರ್ ಅವರನ್ನು ಕಾಂಗ್ರೆಸ್ಗೆ ಕರೆತರಲು ಅಲ್ಲಂ ವೀರಭದ್ರಪ್ಪ ಸಮಿತಿ ಶಿಫಾರಸ್ಸಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗ್ರೀನ್ ಸಿಗ್ನಲ್ ನೀಡಿದ್ದರು. ಇದರಿಂ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದು ಶಾಸಕನಾಗಿದ್ದ ಅಖಂಡ ಶ್ರೀನಿವಾಸ್ ಮೂರ್ತಿಗೆ ಕ್ಷೇತ್ರ ಕಳೆದುಕೊಳ್ಳುವ ಭಯ ಆವರಿಸಿತ್ತು. ಸಂಪತ್ ಕುಮಾರ್ ಕಾರ್ಯಾಚರಣೆ ಅಖಂಡ ಸಹ ಪ್ರತಿತಂತ್ರ ರೂಪಿಸಿದ್ದರು.
ಮೂರು ಕೋಟಿ ನಷ್ಟವಾದರೂ ದೂರು ಕೊಡಲು ಶಾಸಕ ಹಿಂದೇಟು
ಡಿ.ಕೆ ಶಿವಕುಮಾರ್ ಮೇಲೆ ಅಸಮಾಧಾನ ಗೊಂಡು ಜಮೀರ್ ಅಹಮದ್, ಸಿದ್ದರಾಮಯ್ಯ ಬಳಿ ಅಖಂಡ ಶ್ರೀನಿವಾಸ್ ಮೂರ್ತಿ ಅವಲೊತ್ತುಕೊಂಡಿದ್ದರು.
ಪುಲಕೇಶಿ ನಗರ ಕ್ಷೇತ್ರದ ಮೇಲೆ ಪರಮೇಶ್ವರ ಕಣ್ಣು: ಇದು ಮತ್ತೊಂದು ಆಂಗಲ್ ನಲ್ಲಿ ಸುದ್ದಿಯನ್ನು ಹೇಳುತ್ತದೆ. ಪರಮೇಶ್ವರ್ ಅವರನ್ನೇ ಸತ್ಯ ಶೋಧನಾ ಸಮಿತಿಗೆ ಅಧ್ಯಕ್ಷರನ್ನಾಗಿ ಡಿಕೆಶಿ ನೇಮಿಸಿದ್ದಾರೆ.
ಮೈತ್ರಿ ಸರ್ಕಾರದ ಪತನದ ಬಳಿಕ ಪಕ್ಷದ ಚಟುವಟಿಕೆಯಿಂದ ದೂರವೇ ಉಳಿದಿದ್ದ ಪರಮೇಶ್ವರ್ ಅವರಿಗೇ ಡಿಕೆಶಿ ಜವಾಬ್ದಾರಿ ವಹಿಸಿದ್ದು ಏಕೆ ಎಂಬ ಪ್ರಶ್ನೆ ಮೂಡಿದೆ. ಡಿ.ಜೆ ಹಳ್ಳಿ ಕೆ.ಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಬಗೆದಷ್ಟು ಕಾಂಗ್ರೆಸ್ ನ ರಾಜಕಾರಣದ ಒಳ ಹೊರಗುಗಳು ತೆರೆದುಕೊಳ್ಳುತ್ತ ಹೋಗುತ್ತದೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.