ಮುಂದಿವರೆದ ಜಟಾಪಟಿ: ಹೆಬ್ಬಾಳ್ಕರ್​ಗೆ ಮೈಂಡ್​​ ಔಟ್​ ಆಗಿದೆ ಎಂದ ಸಾಹುಕಾರ್

Published : Feb 13, 2021, 04:21 PM IST
ಮುಂದಿವರೆದ ಜಟಾಪಟಿ: ಹೆಬ್ಬಾಳ್ಕರ್​ಗೆ ಮೈಂಡ್​​ ಔಟ್​ ಆಗಿದೆ ಎಂದ ಸಾಹುಕಾರ್

ಸಾರಾಂಶ

ಜಲಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ನಡುವಿನ ಜಟಾಪಟಿ ಮುಂದಿವರೆದಿದೆ. 

ಬೆಳಗಾವಿ, (ಫೆ.13): ಗೋಕಾಕದಿಂದ ಸ್ಪರ್ಧಿಸುವುದಾಗಿ ಪಂಥಾಹ್ವಾನ ನೀಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಸಚಿವ ರಮೇಶ ಜಾರಕಿಹೊಳಿ ಮತ್ತೆ ತಿರುಗೇಟು ಕೊಟ್ಟಿದ್ದಾರೆ.

ಬೆಳಗಾವಿಯಲ್ಲಿ ಇಂದು (ಶನಿವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು,  ಹೆಬ್ಬಾಳ್ಕರ್​ಗೆ ಮೈಂಡ್​​ ಔಟ್​ ಆಗಿದೆ ಎಂದು ಟಾಂಗ್ ಕೊಟ್ಟರು.

ನನ್ನ ಕ್ಷೇತ್ರ ಟಾರ್ಗೆಟ್ ಮಾಡಿದ್ರೆ ನಾನು ಗೋಕಾಕ್ ಟಾರ್ಗೆಟ್ ಮಾಡುತ್ತೇನೆ. ಪಕ್ಷ ಬಯಸಿದ್ರೆ ಗೋಕಾಕ್​ನಿಂದ ನಾನೇ ಸ್ಪರ್ಧೆ ಮಾಡ್ತೀನಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದರು. ಇದಕ್ಕೆ ಶುಕ್ರವಾರ ಪ್ರತಿಕ್ರಿಯಿಸಿದ್ದ ಸಚಿವ ರಮೇಶ್ ಜಾರಕಿಹೊಳಿ.. ಮೋಸ್ಟ್​ ವೆಲ್​ಕಮ್ ಎಂದಿದ್ದರು.

ಸಾಹುಕಾರ್‌ಗೆ ಟಕ್ಕರ್ ಕೊಟ್ಟ ಲಕ್ಷ್ಮೀ: ರಾಜಕಾರಣದಲ್ಲಿ ಸಂಚಲನ

 ಬಜೆಟ್​​ ವಿಷಯದ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ 'ಸರ್​​ ಗೋಕಾಕ್ ಕ್ಷೇತ್ರದ ಅಖಾಡಕ್ಕೆ ಮತ್ತೊಬ್ಬರು ಪ್ರತಿಸ್ಪರ್ಧಿ ಬರ್ತಿದ್ದಾರಂತೆ' ಅಂತಾ ವರದಿಗಾರರು ಪ್ರಶ್ನೆ ಮಾಡಿದ್ರು. ಅದಕ್ಕೆ ತುಂಬಾ ಜೋಶ್​​ನಿಂದ ಉತ್ತರಿಸಿದ ರಮೇಶ್ ಜಾರಕಿಹೊಳಿ, ನಾನು ನಿನ್ನೆಯೇ ಮೋಸ್ಟ್​ ವೆಲ್​​ಕಮ್ ಅಂದಿದ್ದೀನಿ.. ಯಾರ್ ಬೇಕಾದ್ರೂ ಸ್ಪರ್ಧೆ ಮಾಡಬಹುದು. ಮೈಂಡ್ ಔಟ್ ಆಗಿದೆ. ಆ ವಿಚಾರವನ್ನ ಬಿಟ್ಟುಬಿಡಿ ಎಂದರು.

 ಅಂದ್ರೆ ಏನು ಅಂತಾ ವರದಿಗಾರರು ಕೇಳಿದಾಗ.. ಹೆಬ್ಬಾಳ್ಕರ್​ಗೆ ಔಟ್ ಆಪ್ ಮೈಂಡ್ ಆಗಿದೆ. ಅದಕ್ಕೆ ಹೀಗೆ ಮಾತಾನಡುತ್ತಿದ್ದಾರೆ. ಔಟ್ ಆಪ್ ಮೈಂಡ್ ಆದರೆ ಬಸ್ ಸ್ಟಾಂಡ್​​ನಲ್ಲಿ ಹುಡಕಬೇಕು ಎಂದು ಜಾರಕಿಹೊಳಿ ಟಾಂಗ್ ನೀಡಿ ನಕ್ಕರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!
Karnataka News Live: ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?